‘ಒಳ್ಳೇತನಕ್ಕೆ ಬೆಲೆ ಇಲ್ಲ ಅಂತ ನಾವು ಮುಕ್ಕುರಿತಿದ್ರೆ ನೀನೊಬ್ಬ. ನಂದೆಲ್ಲಿ ಮಡಗಲಿ ಅಂತ’ ಯಂಟಪ್ಪಣ್ಣ ಸಿಟ್ಟಿಗೆ ಬಿದ್ದಿತು.
‘ನೋಡಿರ್ಲಾ ಸಾಮಾನ್ಯ ಜನ ತೀರಾ ಒಳ್ಳೇರಾಗ ವೊತ್ಗೇ ಇವೆಲ್ಲಾ ಹಲವಂಗ. ಈಗ ಎಲೆಕ್ಷನ್ ಬಂತಲ್ಲಾ ‘ನಾವು ಗೆದ್ರೆ ಉಚಿತ ವಿದ್ಯುತ್, ಉಚಿತ ದವಸ, ಸಾಲ ಮನ್ನಾ, ಲೊಟ್ಟೆ ಲೊಸಕು’ ಅಂತ ನಿಮ್ಮನ್ನ ಮಂಗ ಮಾಡ್ತಾವೆ ಕನ್ರೋ’ ತುರೇಮಣೆ ದನಿ ಎತ್ತಿದರು.
‘ಹ್ಞೂಂ ಕಲಾ, ಬರೀ ಕೈ ಅಲ್ಲಾಡಿಸಿಕ್ಯಂಡು ರಾಜಕೀಯಕ್ಕೆ ಬಂದೋರು ಐದೊರ್ಸದೇಲೇ ಕೋಟಿ ಕೋಟಿ ಆಸ್ತಿ ಮಾಡ್ತರಲ್ಲಾ ಯಂಗೆ ಅಂತ ರಮೇಸಣ್ಣ ಬಾಯ ಮ್ಯಾಲೆ ಬೆಳ್ಳಿಟ್ಟುಕಂಡದೆ’ ಅಂತ ಯಂಟಪ್ಪಣ್ಣ ಲೇವಡಿ ಮಾಡಿತು.
‘ಅಲ್ಲ ಕನ್ರೋ, ಮುಂದ್ಲ ಜಲುಮದೇಲಿ ಒಳ್ಳೇದಾಗ್ಲಿ ಅಂತ ಈ ಜಲ್ಮದೇಲಿ ತೀರಾ ಒಳ್ಳೇರಾಗಿ ಅನ್ಯಾಯಕ್ಕೆ ಮಣೆ ಹಾಕ್ತಿರಲ್ಲೋ ಬಾಯಿ ಸತ್ತ ನನ ಮಕ್ಕಳಾ!’ ತುರೇಮಣೆ ಕ್ರಾಂತಿ ಮಾಡತೊಡಗಿದರು.