‘ಬಸಣ್ಣನ ಸರ್ಕಾರಕ್ಕೂ ವೈರಸ್ ಪ್ರಾಬ್ಲಂ ಆಗ್ಯದೆ ಕನ್ರೋ! ದೋಸರು ಕೊಡೋ ಮುಹೂರ್ತ, ನಕ್ಷತ್ರಕ್ಕೆ ಹೊಸಪ್ಯಾಟೆ ಸಿಂಗಂ ಕಾಯ್ತಾ ಕೂತದೆ. ರಿಜಲ್ಟು ಬಂದು ವಿತೆಲ್ಡ್ ಆದೋರು, ಲಕೋಟೆ ಕೊಟ್ಟೋರು, ಗಡ್ಡ ಬುಟ್ರೂ ಮಂತ್ರಿಯಾಗದೋರು ಕೂಗುಯ್ಯಾಲೆ ಆಡತಾವರೆ! ಇನ್ನು ಮಂತ್ರಿಯಾದವು ಕೆಲಸ ಸುರು ಮಾಡದು ಬುಟ್ಟು ಅಪೀಸಲ್ಲಿ ಮಂಗ್ಳಾರತಿ ಎತ್ತದ್ರಲ್ಲೇ ಬಿಜಿಯಾಗ್ಯವೆ. ಮಿನಿಸ್ಟ್ರಿಗೆ ಒತ್ತರಿಸಿಕ್ಯಂಡು ನಿಂತಿರೋ ಮೂರು ಬಿಟ್ಟವು ಬಾಯಿಂದ ಕೆಳಿಕ್ಕೆ ಮಾಸ್ಕಾಕಿದ್ದರೆ ಎಲ್ಲಾ ಬಿಟ್ಟವು ಮಾಸ್ಕೇ ಇಲ್ಲದೆ ಹಲ್ಲು ಕಿಸ್ಕಂಡು ಕ್ಯಾಮರಾಕ್ಕೆ ಮೂತಿ ತೋರಿಸ್ತಾ ನಿಂತಿರತವೆ’ ತುರೇಮಣೆ ಸಿಟ್ಟಾದ್ರು.