ಬೆಂಗಳೂರು ರೋಡುಗಳ ರಿಪೇರಿ ಕಾಮಗಾರಿ ಬೇಗ ಮುಗೀತದಾ ಇಲ್ಲಾ ಈ ಶನ್ಯೇಸಿ ನನ ಆಟುಗಳ್ಳ ಬೇತಾಳನ್ನ ಹೊತ್ತುಕೋಗೂ ಕೆಲಸ ಮೊದಲು ಮುಗೀತದಾ ಗೊತಾಗ್ನಿಲ್ಲ. ಆದರೂ ನಾನಾ ಪಾದಯಾತ್ರೆಗಳ ನಡಂತರದಗೆ ಜಾಗ ಮಾಡಿಕ್ಯಂಡು ಈ ಶನಿಗೇಡಿ ನನ ಮಗಂದು ಎಲ್ಲ್ಯದೆ ಅಂತ ಹುಡುಕಿದ್ರೆ, ಹೋಗಿ ಬೆಳಗಾವಿ ಸುವರ್ಣಸೌಧುಕ್ಕೆ ತಲೆಕೆಳಮಕನಾಗಿ ನ್ಯಾತಾಕ್ಕಂಡು ‘ನಾನು ಬಂದೆ, ನಾನು ನೋಡಿದೆ, ನಾನು ಗೆದ್ದೆ’ ಅಂತ ಗಂಟಲು ಹರಕತಿತ್ತು. ಯಾರು ಬಂದ್ರು, ಗೆದ್ರು ತಿಳಕಳನ ಅಂದ್ರೆ ಮಾತಾಡಂಗಿಲ್ಲ!