ಚಿತ್ರಗುಪ್ತ ಶುರುಮಾಡಿದ. ‘ಭಾರತದಲ್ಲಿ ಶ್ರೀಸಾಮಾನ್ಯ ಇಲ್ಲವೇ ಇಲ್ಲ ಅಂತ ತುಷಾರ್ ಮೆಹ್ತಾ ಸಾಹೇಬ್ರು ಹೇಳಿದ್ದಾರೆ. ಎಪಿಎಂಸಿ ಕಾನೂನು ತಿದ್ದುಪಡಿ ಮಾಡಿ ರೈತರ ಬೆಳೆಗೆ ತಕ್ಕ ಬೆಲೆ, ಹತ್ತಾರು ಬಗೆಯ ಸಾಲ ನೀಡಿಕೆ, ಸಬ್ಸಿಡಿ, ಖಾತೆಗೆ ನೇರ ದುಡ್ಡು... ಹಿಂಗೆ ಅವರೂ ಸಿರಿಸಾಮಾನ್ಯ ಆಗಿದಾರಂತೆ. ನೀವು ವಲಸಿಗ ಶ್ರೀಸಾಮಾನ್ಯ ಅಂದಿರಲ್ಲ, ಅವರನ್ನೆಲ್ಲ ಫಸ್ಟ್ ಕ್ಲಾಸ್ ಶ್ರಮಿಕ್ ಬುಲೆಟ್ ರೈಲಲ್ಲಿ ಊಟ, ತಿಂಡಿ, ದುಡ್ಡು ಕೊಟ್ಟು ರಾಜೋಚಿತವಾಗಿ ಮನೆಗೆ ಕಳಿಸಿದಾರಂತೆ’.