<p>‘ಹಲೋ... ಸಿದ್ರಾಮಣ್ಣ ಸಾಹೇಬ್ರಿಗೆ ಹುಟ್ಟುಹಬ್ಬದ ಶುಭಾಶಯಗಳು’.</p>.<p>‘ಓ ಏನಪ್ಪಾ ಬೊಮ್ಮಾಯಿ... ಸ್ಸಾರಿ, ಮುಖ್ಯಮಂತ್ರಿಗಳೆ... ನಂಗೆ ಶುಭಾಶಯ ಕೋರೋಕೆ ನಿಮ್ ಹೈಕಮಾಂಡ್ ಪರ್ಮಿಶನ್ ಕೊಡ್ತೋ?’</p>.<p>‘ಇದೆಲ್ಲ ಮನುಷ್ಯ ಸಂಬಂಧಗಳು ಸಿದ್ರಾಮಣ್ಣ, ಎಲ್ಲದ್ರಲ್ಲೂ ರಾಜಕೀಯ ಮಾಡೋಕಾಗುತ್ತಾ? ಪೇಪರ್ನಲ್ಲಿ ನಿಮ್ನನ್ನ ಭಾಗ್ಯವಿದಾತ, ಲೋಕನಾಯಕ ಅಂತೆಲ್ಲ ಹೊಗಳಿ ಬರೆದಿದಾರೆ. ನೋಡಿ ಖುಷಿಯಾತು’.</p>.<p>‘ಅದೆಲ್ಲ ಯಾರೋ ನಮ್ಮುಡುಗ್ರು, ಮುಂದೆ ಎಮ್ಮೆಲ್ಲೆ ಟಿಕೆಟ್ ಕೇಳೋರು ಹಾಕ್ಸಿರ್ತಾರೆ ಬಿಡಪ್ಪ. ಸತ್ಯ ಏನ್ ಗೊತ್ತಾ? ನನ್ ಹುಟ್ಟಿದಬ್ಬ ಯಾವತ್ತು ಅಂತ ನಂಗೇ ಗೊತ್ತಿಲ್ಲ’.</p>.<p>‘ಹೌದಾ? ನೀವು ನೂರು ವರ್ಷ ಚೆನ್ನಾಗಿರ್ಬೇಕು ಸಿದ್ರಾಮಣ್ಣ’.</p>.<p>‘ನಾನು ಚೆನ್ನಾಗೇ ಇರ್ತೀನಿ, ಅದಿರ್ಲಿ ನೀನು ಮುಖ್ಯಮಂತ್ರಿ ಆದ ತಕ್ಷಣ ದೊಡ್ಡಗೌಡ್ರ ಕಾಲಿಗೆ ಬಿದ್ದು ಆಶೀರ್ವಾದ ತಗಂಬಂದೆ. ನಂಗೆ ಒಂದು ಹೂಗುಚ್ಛನೂ ಕೊಡಲಿಲ್ಲ?’</p>.<p>‘ಅದಕ್ಕೆ ಕಾರಣ ಆಮೇಲೇಳ್ತೀನಿ, ನಿಮ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಕಿತ್ತಾಟ ಜೋರಾಗೈತೆ?’</p>.<p>‘ಅದು ಎಲೆಕ್ಷನ್ ಬಂದಾಗ ನೋಡ್ಕಳಾಣ ಬಿಡಪ್ಪ, ನಿನ್ ಕತೆ ಏನು? ಆಗ್ಲೇ ಭಿನ್ನಮತ, ಖಾತೆ ಕಿತ್ತಾಟ ಅಂತಿದ್ರು?’</p>.<p>‘ಅದು ಎಲ್ಲ ಪಕ್ಷದಲ್ಲೂ ಇರೋದೆ. ಆದ್ರೆ ಜನತಾ ಪರಿವಾರದಲ್ಲಿದ್ದಷ್ಟು ಭಿನ್ನಮತ ಬೇರೆಲ್ಲೂ ಇದ್ದಿರಲಿಲ್ಲ ಅಲ್ವ?’</p>.<p>‘ಅದ್ಕೇ ಅಲ್ವ ನಾನು ಆ ಪಕ್ಷ ಬಿಟ್ಟು ಕಾಂಗ್ರೆಸ್ ಸೇರ್ಕಂಡಿದ್ದು? ಅದಿರ್ಲಿ, ಏನದು ಖಾತೆ ಕ್ಯಾತೆ?’</p>.<p>‘ಅದೂ... ಕೆಲವರಿಗೆ ಇನ್ನೂ ದೊಡ್ಡ ಖಾತೆ, ಪ್ರಬಲ ಖಾತೆ ಬೇಕಂತೆ’.</p>.<p>‘ಹುಷಾರು ಕಣಪ್ಪ, ಆಮೇಲೆ ನಿನ್ ಬುಡಕ್ಕೇ ಬಂದುಬಿಟ್ಟಾರು’.</p>.<p>‘ನಾನು ದೊಡ್ಡಗೌಡ್ರ ಆಶೀರ್ವಾದ ತಗಂಡಿದ್ದು ಅದ್ಕೇ ಸಿದ್ರಾಮಣ್ಣ. ನನ್ ಕುರ್ಚಿಗೇನಾದ್ರೂ ಆದ್ರೆ ಗೌಡ್ರು ಸಪೋರ್ಟ್ ಮಾಡ್ಲಿ ಅಂತ. ನೀವು ಸಪೋರ್ಟ್ ಮಾಡಲ್ಲ ಅಂತ ಗೊತ್ತು. ಗೊತ್ತಿದ್ದೂ ಗೊತ್ತಿದ್ದೂ ನಿಮಗ್ಯಾಕೆ ಹೂಗುಚ್ಛ ಕೊಟ್ಟು ನಮ್ಮೋರತ್ರ ಬೈಸ್ಕಳ್ಲಿ?’</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>‘ಹಲೋ... ಸಿದ್ರಾಮಣ್ಣ ಸಾಹೇಬ್ರಿಗೆ ಹುಟ್ಟುಹಬ್ಬದ ಶುಭಾಶಯಗಳು’.</p>.<p>‘ಓ ಏನಪ್ಪಾ ಬೊಮ್ಮಾಯಿ... ಸ್ಸಾರಿ, ಮುಖ್ಯಮಂತ್ರಿಗಳೆ... ನಂಗೆ ಶುಭಾಶಯ ಕೋರೋಕೆ ನಿಮ್ ಹೈಕಮಾಂಡ್ ಪರ್ಮಿಶನ್ ಕೊಡ್ತೋ?’</p>.<p>‘ಇದೆಲ್ಲ ಮನುಷ್ಯ ಸಂಬಂಧಗಳು ಸಿದ್ರಾಮಣ್ಣ, ಎಲ್ಲದ್ರಲ್ಲೂ ರಾಜಕೀಯ ಮಾಡೋಕಾಗುತ್ತಾ? ಪೇಪರ್ನಲ್ಲಿ ನಿಮ್ನನ್ನ ಭಾಗ್ಯವಿದಾತ, ಲೋಕನಾಯಕ ಅಂತೆಲ್ಲ ಹೊಗಳಿ ಬರೆದಿದಾರೆ. ನೋಡಿ ಖುಷಿಯಾತು’.</p>.<p>‘ಅದೆಲ್ಲ ಯಾರೋ ನಮ್ಮುಡುಗ್ರು, ಮುಂದೆ ಎಮ್ಮೆಲ್ಲೆ ಟಿಕೆಟ್ ಕೇಳೋರು ಹಾಕ್ಸಿರ್ತಾರೆ ಬಿಡಪ್ಪ. ಸತ್ಯ ಏನ್ ಗೊತ್ತಾ? ನನ್ ಹುಟ್ಟಿದಬ್ಬ ಯಾವತ್ತು ಅಂತ ನಂಗೇ ಗೊತ್ತಿಲ್ಲ’.</p>.<p>‘ಹೌದಾ? ನೀವು ನೂರು ವರ್ಷ ಚೆನ್ನಾಗಿರ್ಬೇಕು ಸಿದ್ರಾಮಣ್ಣ’.</p>.<p>‘ನಾನು ಚೆನ್ನಾಗೇ ಇರ್ತೀನಿ, ಅದಿರ್ಲಿ ನೀನು ಮುಖ್ಯಮಂತ್ರಿ ಆದ ತಕ್ಷಣ ದೊಡ್ಡಗೌಡ್ರ ಕಾಲಿಗೆ ಬಿದ್ದು ಆಶೀರ್ವಾದ ತಗಂಬಂದೆ. ನಂಗೆ ಒಂದು ಹೂಗುಚ್ಛನೂ ಕೊಡಲಿಲ್ಲ?’</p>.<p>‘ಅದಕ್ಕೆ ಕಾರಣ ಆಮೇಲೇಳ್ತೀನಿ, ನಿಮ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಕಿತ್ತಾಟ ಜೋರಾಗೈತೆ?’</p>.<p>‘ಅದು ಎಲೆಕ್ಷನ್ ಬಂದಾಗ ನೋಡ್ಕಳಾಣ ಬಿಡಪ್ಪ, ನಿನ್ ಕತೆ ಏನು? ಆಗ್ಲೇ ಭಿನ್ನಮತ, ಖಾತೆ ಕಿತ್ತಾಟ ಅಂತಿದ್ರು?’</p>.<p>‘ಅದು ಎಲ್ಲ ಪಕ್ಷದಲ್ಲೂ ಇರೋದೆ. ಆದ್ರೆ ಜನತಾ ಪರಿವಾರದಲ್ಲಿದ್ದಷ್ಟು ಭಿನ್ನಮತ ಬೇರೆಲ್ಲೂ ಇದ್ದಿರಲಿಲ್ಲ ಅಲ್ವ?’</p>.<p>‘ಅದ್ಕೇ ಅಲ್ವ ನಾನು ಆ ಪಕ್ಷ ಬಿಟ್ಟು ಕಾಂಗ್ರೆಸ್ ಸೇರ್ಕಂಡಿದ್ದು? ಅದಿರ್ಲಿ, ಏನದು ಖಾತೆ ಕ್ಯಾತೆ?’</p>.<p>‘ಅದೂ... ಕೆಲವರಿಗೆ ಇನ್ನೂ ದೊಡ್ಡ ಖಾತೆ, ಪ್ರಬಲ ಖಾತೆ ಬೇಕಂತೆ’.</p>.<p>‘ಹುಷಾರು ಕಣಪ್ಪ, ಆಮೇಲೆ ನಿನ್ ಬುಡಕ್ಕೇ ಬಂದುಬಿಟ್ಟಾರು’.</p>.<p>‘ನಾನು ದೊಡ್ಡಗೌಡ್ರ ಆಶೀರ್ವಾದ ತಗಂಡಿದ್ದು ಅದ್ಕೇ ಸಿದ್ರಾಮಣ್ಣ. ನನ್ ಕುರ್ಚಿಗೇನಾದ್ರೂ ಆದ್ರೆ ಗೌಡ್ರು ಸಪೋರ್ಟ್ ಮಾಡ್ಲಿ ಅಂತ. ನೀವು ಸಪೋರ್ಟ್ ಮಾಡಲ್ಲ ಅಂತ ಗೊತ್ತು. ಗೊತ್ತಿದ್ದೂ ಗೊತ್ತಿದ್ದೂ ನಿಮಗ್ಯಾಕೆ ಹೂಗುಚ್ಛ ಕೊಟ್ಟು ನಮ್ಮೋರತ್ರ ಬೈಸ್ಕಳ್ಲಿ?’</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>