‘ಅಣ್ಣೇಳದು ಸರಿಯಾಗದೆ. ಶಿರಾಡಿ ಘಾಟು, ಚಾರ್ಮಾಡಿ ಘಾಟು ಕಡೆ ಮೂರೊರ್ಸದ ಹಿಂದೆ ಮಾಡಿದ ಸಿಮೆಂಟು ರೋಡು ಕಿಸ್ಕಂಡು ಬಿದ್ದದಂತೆ?’ ತುರೇಮಣೆ ಹೇಳಿದರು.
‘ಸಿಮೆಂಟ್ ತೋರಿಸಿಕ್ಯಂಡೋದ್ರೆ ಸಿಮೆಂಟು ರೋಡು ಅಂದಾರೇ? ಬಿಬಿಎಂಪಿ ರೋಡೆಲ್ಲಾ ಬೀಟೆ ಸೆಣೆದು ಬಿರುಕು ಬಿಟ್ಟವೆ, ಕಲ್ಯಾಣ ಕರ್ನಾಟಕದೇಲಿ ರೋಡೆಲ್ಲ ದೂಳಿನ ಘಾಟು ಎಬ್ಬಿಸ್ತಾವೆ. ಶಾಸಕರ ನಿಧಿ ಬಳಕೆಯಾಗ್ದೆ ಕೋಟಿ ಕೋಟಿ ಹಂಗೇ ಬಿದ್ದದಂತೆ? ಜನ ಹಳೆ ಕಲ್ಲು ಹೊಸ ಬಿಲ್ಲು ಅಂತ ನಗಾಡಿಕ್ಯಂಡು ಸುಮ್ಮಗವ್ರೆ’ ಅಂತು ಯಂಟಪ್ಪಣ್ಣ.
‘ಕೊರೊನಾ, ಪೆಟ್ರೋಲು, ಗ್ಯಾಸು ಟ್ರಬಲ್ಲಲ್ಲಿ ನಮ್ಮ ಸ್ಥಿತಿ ಕೊಯ್ ಕೊಟಾರ್ ಆಗಿ ಹರಿಶ್ಚಂದ್ರ ಘಾಟ್ ಕಾಣ್ತಾ ಅದೆ ಕನೋ. ಮೋದಿ ಮಾವಾರು ಮಾತ್ರ ನಮ್ಮ ಆರ್ಥಿಕತೆ ಬಲಿಷ್ಠವಾಗ್ಯದೆ ಅಂತ ಘಾಟೆಬ್ಬಿಸವ್ರಲ್ರೋ! ಯಾಕಿಂಗೆ?’ ಅಂತು ಯಂಟಪ್ಪಣ್ಣ.