<p>ಡಿ.ಎಸ್.ಲಿಂಗರಾಜು</p>.<p>‘ಜಾತಿ ಜನಗಣತಿ ಕಥೆ ಯಂಗೆ ಸಾ? ಸರಿಲ್ಲ-ಸರಿಯಾಗದೆ ಅಂತ ಆಕ್ರೋಶ, ಆಕ್ಷೇಪ ಸುರುವಾಗ್ಯದಲ್ಲ?’ ತುರೇಮಣೆಗೆ ಕೇಳಿದೆ. ‘ದಿಟವಾಗಿ ಮೀಸಲಾತಿ ಬೇಕಾಗಿರೋದು ರಾಜಕಾರಣಿಗಳ ಬಲಿತ ವರ್ಗಕ್ಕೆ ಮಾತ್ರ ಅಣ್ತಮ್ಮ. ಪಕ್ಷಾಂತರಿಗಳು, ಕಪಟನಾಟಕ ಸೂತ್ರಧಾರಿಗಳು ಹೆಚ್ಚಾಗಿ ಇಲ್ಲೇ ಇರದು’ ಎಂದು ಒಡಪು ಹಾಕಿದರು.</p>.<p>‘ರಾಜಕೀಯಕ್ಕೂ ಮೀಸಲಾತಿಗೂ ಏನು ಸಂಬಂಜ?’ ಅಂತ ಸಿಡಿದೆ.</p>.<p>‘ನೋಡ್ಲಾ, ರಾಜಕೀಯದಲ್ಲಿ 1-2-3 ಅಂತ ಮೂರು ಪ್ರವರ್ಗಗಳವೆ. ಅತ್ಯಂತ ಮುಂದುಳಿದ ಒಂದನೇ ಪ್ರವರ್ಗದೇಲಿ ಹಾಲಿ ಮಂತ್ರಿಗಳು, ಶಾಸಕರು ಇರತರೆ. ಅಸೆಂಬ್ಲಿ, ಲೋಕಸಭೆಯಲ್ಲಿ ಇವರ ಕುಟುಂಬಕ್ಕೆ ಶೇಕಡ ನೂರು ಒಳಮೀಸಲಾತಿ ಕೊಡಲೇಬೇಕು’ ಅಂತ ವರ್ಗೀಕರಣ ಮಾಡಿದರು.</p>.<p>‘ಎರಡನೇ ಪ್ರವರ್ಗಕ್ಕೆ ಯಾರನ್ನ ಸೇರಿಸ್ತೀರ?’</p>.<p>‘ಅಲ್ಲಿ ಅರೆ ಮುಂದುಳಿದ ರಾಜಕಾರಣಿಗಳಿರತರೆ. ಅಡವಾದ ಜಾಗದಲ್ಲಿ ಮಂತ್ರಿಯಾಗಿ<br>ದ್ದಾಗ ಕೆಲವರು ಎಡವಟ್ಟು ಮಾಡಿಕ್ಯಂದು ರಾಜೀನಾಮೆ ಕೊಟ್ಟಿರತರೆ. ವಿಚಾರಣಾ ಸಮಿತಿಯ ಬಿ-ರಿಪೋರ್ಟ್ ತಂದ್ರೆ ತಿರುಗಾ ಮಂತ್ರಿಯಾಗೋ ಮೀಸಲಾತಿ ಶೇಕಡ 50 ಇರತದೆ’ ತುರೇಮಣೆ ಶಾಕ್ ಕೊಟ್ಟರು.</p>.<p>‘ಒಂದರಲ್ಲಿರೋರು ಎರಡಕ್ಕೆ, ಎರಡರಲ್ಲಿ ಇರೋರು ಒಂದಕ್ಕೆ ಆಗಾಗ ಹೋಯ್ತಾ ಇರತರೆ’ ಅಂತ ಯಂಟಪ್ಪಣ್ಣ ಒಗ್ಗರಣೆ ಹಾಕಿತು.</p>.<p>‘ಪ್ರವರ್ಗ- 3ರಲ್ಲಿ ಯಾರಿರತರೋ?’</p>.<p>‘ಇಲ್ಲಿ ಶಾಸಕರು- ಮಂತ್ರಿಗಳ ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಸಿ ಜನ ಕರಕಬರೋ ಸಾಮಾನ್ಯ ಕಾರ್ಯಕರ್ತರು ಇರತರೆ. ಒಂದು, ಎರಡನೇ ವರ್ಗಕ್ಕೆ ಹೋಗೋ ಮೀಸಲಾತಿ ಇವರಿಗಿಲ್ಲ’ ತುರೇಮಣೆಯ ಎರಡನೇ ಶಾಕಿಗೆ ಸುಸ್ತಾದೆ.</p>.<p>‘ಆದ್ರೆ ಪ್ರವರ್ಗ-3ಎ ಅಂತ ಅಸಂಘಟಿತ ಸಾಮಾನ್ಯ ವರ್ಗ ಅದೆ. ಇವರು ಮೀಸಲಾತಿಗೆ ಕಾಯದೇ ದುಬಾರಿ ಟ್ಯಾಕ್ಸು, ಡೊನೇಶನ್ ಕಟ್ಟಿ ಬದುಕೋರು. ಇವರಿಗೇನು ಸಿಕ್ತದೆ?’ ಅಂದುದ್ಕೆ ತುರೇಮಣೆ ‘1- 2ನೇ ವರ್ಗಕ್ಕೆ 3ಎ ವರ್ಗದೋರು ವೋಟ್ ಬ್ಯಾಂಕ್ ಅಷ್ಟೆ ಕಲಾ. ಎಲ್ಲಾ ಇವರ ಹೆಸರಲ್ಲೇ ನಡಿತದೆ. ಇವರಿಗೆ ಮಾತ್ರ ಏನೂ ದಕ್ಕಕುಲ್ಲ’ ಅಂತ ಗಹಗಹಿಸಿ ನಕ್ಕು ನಮ್ಮನ್ನೂ ನಗಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಡಿ.ಎಸ್.ಲಿಂಗರಾಜು</p>.<p>‘ಜಾತಿ ಜನಗಣತಿ ಕಥೆ ಯಂಗೆ ಸಾ? ಸರಿಲ್ಲ-ಸರಿಯಾಗದೆ ಅಂತ ಆಕ್ರೋಶ, ಆಕ್ಷೇಪ ಸುರುವಾಗ್ಯದಲ್ಲ?’ ತುರೇಮಣೆಗೆ ಕೇಳಿದೆ. ‘ದಿಟವಾಗಿ ಮೀಸಲಾತಿ ಬೇಕಾಗಿರೋದು ರಾಜಕಾರಣಿಗಳ ಬಲಿತ ವರ್ಗಕ್ಕೆ ಮಾತ್ರ ಅಣ್ತಮ್ಮ. ಪಕ್ಷಾಂತರಿಗಳು, ಕಪಟನಾಟಕ ಸೂತ್ರಧಾರಿಗಳು ಹೆಚ್ಚಾಗಿ ಇಲ್ಲೇ ಇರದು’ ಎಂದು ಒಡಪು ಹಾಕಿದರು.</p>.<p>‘ರಾಜಕೀಯಕ್ಕೂ ಮೀಸಲಾತಿಗೂ ಏನು ಸಂಬಂಜ?’ ಅಂತ ಸಿಡಿದೆ.</p>.<p>‘ನೋಡ್ಲಾ, ರಾಜಕೀಯದಲ್ಲಿ 1-2-3 ಅಂತ ಮೂರು ಪ್ರವರ್ಗಗಳವೆ. ಅತ್ಯಂತ ಮುಂದುಳಿದ ಒಂದನೇ ಪ್ರವರ್ಗದೇಲಿ ಹಾಲಿ ಮಂತ್ರಿಗಳು, ಶಾಸಕರು ಇರತರೆ. ಅಸೆಂಬ್ಲಿ, ಲೋಕಸಭೆಯಲ್ಲಿ ಇವರ ಕುಟುಂಬಕ್ಕೆ ಶೇಕಡ ನೂರು ಒಳಮೀಸಲಾತಿ ಕೊಡಲೇಬೇಕು’ ಅಂತ ವರ್ಗೀಕರಣ ಮಾಡಿದರು.</p>.<p>‘ಎರಡನೇ ಪ್ರವರ್ಗಕ್ಕೆ ಯಾರನ್ನ ಸೇರಿಸ್ತೀರ?’</p>.<p>‘ಅಲ್ಲಿ ಅರೆ ಮುಂದುಳಿದ ರಾಜಕಾರಣಿಗಳಿರತರೆ. ಅಡವಾದ ಜಾಗದಲ್ಲಿ ಮಂತ್ರಿಯಾಗಿ<br>ದ್ದಾಗ ಕೆಲವರು ಎಡವಟ್ಟು ಮಾಡಿಕ್ಯಂದು ರಾಜೀನಾಮೆ ಕೊಟ್ಟಿರತರೆ. ವಿಚಾರಣಾ ಸಮಿತಿಯ ಬಿ-ರಿಪೋರ್ಟ್ ತಂದ್ರೆ ತಿರುಗಾ ಮಂತ್ರಿಯಾಗೋ ಮೀಸಲಾತಿ ಶೇಕಡ 50 ಇರತದೆ’ ತುರೇಮಣೆ ಶಾಕ್ ಕೊಟ್ಟರು.</p>.<p>‘ಒಂದರಲ್ಲಿರೋರು ಎರಡಕ್ಕೆ, ಎರಡರಲ್ಲಿ ಇರೋರು ಒಂದಕ್ಕೆ ಆಗಾಗ ಹೋಯ್ತಾ ಇರತರೆ’ ಅಂತ ಯಂಟಪ್ಪಣ್ಣ ಒಗ್ಗರಣೆ ಹಾಕಿತು.</p>.<p>‘ಪ್ರವರ್ಗ- 3ರಲ್ಲಿ ಯಾರಿರತರೋ?’</p>.<p>‘ಇಲ್ಲಿ ಶಾಸಕರು- ಮಂತ್ರಿಗಳ ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಸಿ ಜನ ಕರಕಬರೋ ಸಾಮಾನ್ಯ ಕಾರ್ಯಕರ್ತರು ಇರತರೆ. ಒಂದು, ಎರಡನೇ ವರ್ಗಕ್ಕೆ ಹೋಗೋ ಮೀಸಲಾತಿ ಇವರಿಗಿಲ್ಲ’ ತುರೇಮಣೆಯ ಎರಡನೇ ಶಾಕಿಗೆ ಸುಸ್ತಾದೆ.</p>.<p>‘ಆದ್ರೆ ಪ್ರವರ್ಗ-3ಎ ಅಂತ ಅಸಂಘಟಿತ ಸಾಮಾನ್ಯ ವರ್ಗ ಅದೆ. ಇವರು ಮೀಸಲಾತಿಗೆ ಕಾಯದೇ ದುಬಾರಿ ಟ್ಯಾಕ್ಸು, ಡೊನೇಶನ್ ಕಟ್ಟಿ ಬದುಕೋರು. ಇವರಿಗೇನು ಸಿಕ್ತದೆ?’ ಅಂದುದ್ಕೆ ತುರೇಮಣೆ ‘1- 2ನೇ ವರ್ಗಕ್ಕೆ 3ಎ ವರ್ಗದೋರು ವೋಟ್ ಬ್ಯಾಂಕ್ ಅಷ್ಟೆ ಕಲಾ. ಎಲ್ಲಾ ಇವರ ಹೆಸರಲ್ಲೇ ನಡಿತದೆ. ಇವರಿಗೆ ಮಾತ್ರ ಏನೂ ದಕ್ಕಕುಲ್ಲ’ ಅಂತ ಗಹಗಹಿಸಿ ನಕ್ಕು ನಮ್ಮನ್ನೂ ನಗಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>