<p>ತಿಂಗಳೇಶ ಇನ್ನೇನು ಬೈಟು ಬಳಗ ಸೇರಲು ಮನೆಯಿಂದ ಹೊರಡಬೇಕು ಎನ್ನುವಷ್ಟರಲ್ಲಿ ಬಂಡೆಯ್ಯನ ಆಗಮನ. ದುಃಖ ತುಂಬಿದ ಕಣ್ಣುಗಳಿಗೆ ನೀಲಿ ಮಫ್ಲರ್ ಒತ್ತಿಕೊಳ್ಳುತ್ತಾ ಮೌನವಾಗಿ ಕುಳಿತ.</p>.<p>‘ಏನು ವಿಷಯ… ಮನೆ ಮೇಲೆ ಗುಡ್ಡ ಕುಸಿದವನ ಥರ ಇದ್ದೀಯಾ?’ ತಿಂಗಳೇಶನೇ ಮಾತಿಗಿಳಿದ.</p>.<p>‘ಗುಡ್ಡ ಬಿದ್ದರೆ ಹೇಗೋ ಅಜ್ಜಯ್ಯನನ್ನು ನೆನೆದು ಪಾರಾಗುತ್ತಿದ್ದೆ. ಆದರೆ ದೊಡ್ಡಯ್ಯನನ್ನು ನಂಬಿ ಗಡ್ಡ ಬಿಡುವಂತಾಗಿದೆ’ ಎಂದ ಬಂಡೆಯ್ಯ.</p>.<p>‘ಸಿದ್ಧಯ್ಯ ಏನಾದ್ರೂ ‘ಹಿಂದಮುಂದ’ ಮಾಡ್ಯಾನೇನು? ಅಣ್ಣ ತಮ್ಮಂದಿರ ನಡುವೆ ಒಂದು ಮಾತು ಬಂದೀತು, ಹೋದೀತು… ಮರೆತು ಬಿಡಬೇಕಪ್ಪ…’</p>.<p>‘ಎರಡು ವರ್ಷದ ಹಿಂದೆ ನೀವೇ ಬೆಂಗಳೂರಿನ ಮನೆಯನ್ನು ನನಗೆ ಪಾಲು ಮಾಡಿಕೊಟ್ಟಿರಿ. ಆ ಮನೆ ಕಟ್ಟಲು ನಾನು ಸಿಮೆಂಟಿಗೆ, ಕಬ್ಬಿಣಕ್ಕೆ, ಕಟ್ಟಿಗೆಗೆ ಅಂತ ಖರ್ಚು ಮಾಡಿದ್ದಕ್ಕೆ ಲೆಕ್ಕವಿಲ್ಲ. ಮಂಡ್ಯ– ರಾಮನಗರ ಕಡೆಯ ಜನ ನನ್ನ ಮೇಲಿನ ಅಭಿಮಾನದಿಂದ ಹೇಗೆಲ್ಲಾ ಸಹಾಯ ಮಾಡಿದ್ದಾರೆ, ನಾನು ಎಷ್ಟೆಲ್ಲಾ ಕಷ್ಟಪಟ್ಟಿದ್ದೇನೆ ಅನ್ನೋದು ನಿಮಗೆ ಗೊತ್ತೇಯಿದೆ’.</p>.<p>‘ಹೌದು ಹೌದು… ಗೃಹಪ್ರವೇಶದ ದಿನ ಅಣ್ತಮ್ಮಂದಿರು ಕಿತ್ತಾಡಿದರೆ ಸರಿ ಕಾಣಲ್ಲ, ಆತ ಎರಡೂವರೆ ವರ್ಷ ಹೊಸಮನೆಯಲ್ಲಿದ್ದು ನಂತರ ಹಳೆಮನೆಗೆ ಹೋಗಲಿ ಅಂತ ಒಪ್ಪಿಸಿದ್ದೆವಲ್ಲಾ…’</p>.<p>‘ನೀವು ಅವೊತ್ತು ಒಳಕೋಣೆಯಲ್ಲಿ ಹಾವೇರಿ ಪಂಚಾಯ್ತಿ ಮಾಡಿದ್ದೇ ತಪ್ಪಾಯ್ತು, ಪಡಸಾಲೆಯಲ್ಲಿ ಮಾತುಕತೆ ಆಗಿದ್ದರೆ ಗೃಹಪ್ರವೇಶಕ್ಕೆ ಬಂದ ನೆಂಟರೆಲ್ಲಾ ಸಾಕ್ಷಿ ಹೇಳುತ್ತಿದ್ದರು’.</p>.<p>‘ಈಗೇನಂತಾನೆ ಸಿದ್ಧಯ್ಯ…?’</p>.<p>‘ಐದು ವರ್ಷ ನಾನೇ ಇರ್ತೀನಿ, ಆಮೇಲೆ ನೋಡೋಣ ಅಂತಾನೆ. ಮಗ ಬೇರೆ ‘ಮನೆ ಖಾಲಿ ಇಲ್ಲ’ ಅಂತ ಹೊರಗೆ ಬೋರ್ಡ್ ಹಾಕಿದ್ದಾನೆ’.</p>.<p>ಇಂಗು ತಿಂದ ಹೈಕಮಾಂಡಿನಂತಾದ ತಿಂಗಳೇಶ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಿಂಗಳೇಶ ಇನ್ನೇನು ಬೈಟು ಬಳಗ ಸೇರಲು ಮನೆಯಿಂದ ಹೊರಡಬೇಕು ಎನ್ನುವಷ್ಟರಲ್ಲಿ ಬಂಡೆಯ್ಯನ ಆಗಮನ. ದುಃಖ ತುಂಬಿದ ಕಣ್ಣುಗಳಿಗೆ ನೀಲಿ ಮಫ್ಲರ್ ಒತ್ತಿಕೊಳ್ಳುತ್ತಾ ಮೌನವಾಗಿ ಕುಳಿತ.</p>.<p>‘ಏನು ವಿಷಯ… ಮನೆ ಮೇಲೆ ಗುಡ್ಡ ಕುಸಿದವನ ಥರ ಇದ್ದೀಯಾ?’ ತಿಂಗಳೇಶನೇ ಮಾತಿಗಿಳಿದ.</p>.<p>‘ಗುಡ್ಡ ಬಿದ್ದರೆ ಹೇಗೋ ಅಜ್ಜಯ್ಯನನ್ನು ನೆನೆದು ಪಾರಾಗುತ್ತಿದ್ದೆ. ಆದರೆ ದೊಡ್ಡಯ್ಯನನ್ನು ನಂಬಿ ಗಡ್ಡ ಬಿಡುವಂತಾಗಿದೆ’ ಎಂದ ಬಂಡೆಯ್ಯ.</p>.<p>‘ಸಿದ್ಧಯ್ಯ ಏನಾದ್ರೂ ‘ಹಿಂದಮುಂದ’ ಮಾಡ್ಯಾನೇನು? ಅಣ್ಣ ತಮ್ಮಂದಿರ ನಡುವೆ ಒಂದು ಮಾತು ಬಂದೀತು, ಹೋದೀತು… ಮರೆತು ಬಿಡಬೇಕಪ್ಪ…’</p>.<p>‘ಎರಡು ವರ್ಷದ ಹಿಂದೆ ನೀವೇ ಬೆಂಗಳೂರಿನ ಮನೆಯನ್ನು ನನಗೆ ಪಾಲು ಮಾಡಿಕೊಟ್ಟಿರಿ. ಆ ಮನೆ ಕಟ್ಟಲು ನಾನು ಸಿಮೆಂಟಿಗೆ, ಕಬ್ಬಿಣಕ್ಕೆ, ಕಟ್ಟಿಗೆಗೆ ಅಂತ ಖರ್ಚು ಮಾಡಿದ್ದಕ್ಕೆ ಲೆಕ್ಕವಿಲ್ಲ. ಮಂಡ್ಯ– ರಾಮನಗರ ಕಡೆಯ ಜನ ನನ್ನ ಮೇಲಿನ ಅಭಿಮಾನದಿಂದ ಹೇಗೆಲ್ಲಾ ಸಹಾಯ ಮಾಡಿದ್ದಾರೆ, ನಾನು ಎಷ್ಟೆಲ್ಲಾ ಕಷ್ಟಪಟ್ಟಿದ್ದೇನೆ ಅನ್ನೋದು ನಿಮಗೆ ಗೊತ್ತೇಯಿದೆ’.</p>.<p>‘ಹೌದು ಹೌದು… ಗೃಹಪ್ರವೇಶದ ದಿನ ಅಣ್ತಮ್ಮಂದಿರು ಕಿತ್ತಾಡಿದರೆ ಸರಿ ಕಾಣಲ್ಲ, ಆತ ಎರಡೂವರೆ ವರ್ಷ ಹೊಸಮನೆಯಲ್ಲಿದ್ದು ನಂತರ ಹಳೆಮನೆಗೆ ಹೋಗಲಿ ಅಂತ ಒಪ್ಪಿಸಿದ್ದೆವಲ್ಲಾ…’</p>.<p>‘ನೀವು ಅವೊತ್ತು ಒಳಕೋಣೆಯಲ್ಲಿ ಹಾವೇರಿ ಪಂಚಾಯ್ತಿ ಮಾಡಿದ್ದೇ ತಪ್ಪಾಯ್ತು, ಪಡಸಾಲೆಯಲ್ಲಿ ಮಾತುಕತೆ ಆಗಿದ್ದರೆ ಗೃಹಪ್ರವೇಶಕ್ಕೆ ಬಂದ ನೆಂಟರೆಲ್ಲಾ ಸಾಕ್ಷಿ ಹೇಳುತ್ತಿದ್ದರು’.</p>.<p>‘ಈಗೇನಂತಾನೆ ಸಿದ್ಧಯ್ಯ…?’</p>.<p>‘ಐದು ವರ್ಷ ನಾನೇ ಇರ್ತೀನಿ, ಆಮೇಲೆ ನೋಡೋಣ ಅಂತಾನೆ. ಮಗ ಬೇರೆ ‘ಮನೆ ಖಾಲಿ ಇಲ್ಲ’ ಅಂತ ಹೊರಗೆ ಬೋರ್ಡ್ ಹಾಕಿದ್ದಾನೆ’.</p>.<p>ಇಂಗು ತಿಂದ ಹೈಕಮಾಂಡಿನಂತಾದ ತಿಂಗಳೇಶ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>