<p>‘ಇವರಿಗೆ ಮೈಸೂರೂ ಬೇಕಿಲ್ಲ, ಮೈಸೂರು ಸ್ಯಾಂಡಲ್ಲೂ ಬೇಕಿಲ್ಲ…’ ತಿಂಗಳೇಶನ ಬೈಟೂ ಕಾಫಿ ಬಳಗದಲ್ಲಿ ಗೊಣಗಾಟ ಶುರುವಾಯಿತು.<br></p><p>‘ದೇಶಾಭಿಮಾನದ ಒಂಚೂರು ಭಾಗವಾದ್ರೂ ರಾಜ್ಯಾಭಿಮಾನ ಇದ್ದಿದ್ರೇ... ಬಾಲಿವುಡ್ ತಾರೆಗೆ 6 ಕೋಟಿಗೂ ಹೆಚ್ಚು ದುಡ್ಡು ಕೊಟ್ಟು ಮೈಸೂರು ಸ್ಯಾಂಡಲ್ ಸೋಪಿಗೆ ರಾಯಭಾರಿ ಮಾಡುತ್ತಿದ್ದರಾ?’<br></p><p>‘ಹೌದು, ಇದು ಸ್ಯಾಂಡಲ್-ವುಡ್ಗೆ ಮಾಡಿದ ಘೋರ ಅನ್ಯಾಯ!’<br></p><p>‘ಮೈಸೂರು ಬ್ಯಾಂಕನ್ನು ಬೇರೆ ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆ ಕೂಡಿಕೆ ಮಾಡಿದ್ದಾರೆ. ಈ ಬ್ಯಾಂಕಿನ ಸಿಬ್ಬಂದಿ ಹಿಂದಿ ರಾಯಭಾರಿಗಳಾಗಿ ನಾಡಿನ ತುಂಬಾ ಆವರಿಸಿದ್ದಾರೆ’.<br></p><p>‘ಮೈಸೂರು ಪಾಕ್ ಕೂಡ ‘ಶ್ರೀ’ಪಾದ ಕಾಣುವಂತಿದೆ’.<br></p><p>‘ಭ್ರಷ್ಟಾಚಾರ ತಾರಕಕ್ಕೇರಿದೆ ಅಂತ ಆರೋಪಿಸಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯ ನೌಕರರ ಸಂಘ, ಸಿಐಡಿ ತನಿಖೆ ನಡೆಸುವಂತೆ ಆಗ್ರಹಿಸಿದೆ’.<br></p><p>‘ಮೈಸೂರು ಸ್ಯಾಂಡಲ್ ಸೋಪಿಗೆ ಬೇರೇನಾದರೂ ನಾಮಕರಣ ಮಾಡಿದರೆ ಸರಿಹೊಂದುತ್ತದೆ’ ತಿಂಗಳೇಶ ಸೇರಿಸಿದ.<br></p><p>‘ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಿ ಡಿಕೆಶಿ ರಿಯಲ್ ಎಸ್ಟೇಟಿಗೆ ಉತ್ತೇಜನ ನೀಡಿದ್ದಾರೆ ನೋಡಿ’ ಮತ್ತೊಬ್ಬ ತಿರುವು ನೀಡಿದ.<br></p><p>‘ಪರಮೇಶ್ವರ ತುಮಕೂರನ್ನು ಬೆಂಗಳೂರು ಪಶ್ಚಿಮ, ಮುನಿಯಪ್ಪ ಕೋಲಾರವನ್ನು ಬೆಂಗಳೂರು ಪೂರ್ವ, ಸುಧಾಕರ ಚಿಕ್ಕಬಳ್ಳಾಪುರವನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಬದಲಿಸಲು ಬೇಡಿಕೆ ಇಟ್ಟರೆ ರಾಜ್ಯ ತತ್ತರಿಸುತ್ತದೆ’.</p><p>‘ಅಷ್ಟೇ ಆದರೆ ಪರವಾಗಿಲ್ಲ, ಬೆಂಗಳೂರು ರಾಜ್ಯ ಮಾಡಿಕೊಂಡು ನೀವೇ ಇಟ್ಟುಕೊಳ್ಳಿ, ಧಾರವಾಡ ರಾಜ್ಯ ನಮಗಿರಲಿ ಎಂದು ಸದ್ಯ ಬಿಡುವಾಗಿರುವ ಯತ್ನಾಳ್ ಹೋರಾಟಕ್ಕಿಳಿದರೆ ಕಷ್ಟ!’<br></p><p>‘ಒಟ್ಟಾರೆ ಅಖಂಡ ರಾಜ್ಯಕ್ಕೆ ಏನೋ ಕುತ್ತು ಬಂದಂತಿದೆ. ನಮ್ಮ ಹೊಳೆನರಸೀಪುರದ ಸಂಕಷ್ಟತಜ್ಞರ ನೆರವು ಪಡೆದು ಪರಿಹಾರ ಯಾಗ ಮಾಡಬೇಕು’ ತಿಂಗಳೇಶ ಮಾತು ಮುಗಿಸಿದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಇವರಿಗೆ ಮೈಸೂರೂ ಬೇಕಿಲ್ಲ, ಮೈಸೂರು ಸ್ಯಾಂಡಲ್ಲೂ ಬೇಕಿಲ್ಲ…’ ತಿಂಗಳೇಶನ ಬೈಟೂ ಕಾಫಿ ಬಳಗದಲ್ಲಿ ಗೊಣಗಾಟ ಶುರುವಾಯಿತು.<br></p><p>‘ದೇಶಾಭಿಮಾನದ ಒಂಚೂರು ಭಾಗವಾದ್ರೂ ರಾಜ್ಯಾಭಿಮಾನ ಇದ್ದಿದ್ರೇ... ಬಾಲಿವುಡ್ ತಾರೆಗೆ 6 ಕೋಟಿಗೂ ಹೆಚ್ಚು ದುಡ್ಡು ಕೊಟ್ಟು ಮೈಸೂರು ಸ್ಯಾಂಡಲ್ ಸೋಪಿಗೆ ರಾಯಭಾರಿ ಮಾಡುತ್ತಿದ್ದರಾ?’<br></p><p>‘ಹೌದು, ಇದು ಸ್ಯಾಂಡಲ್-ವುಡ್ಗೆ ಮಾಡಿದ ಘೋರ ಅನ್ಯಾಯ!’<br></p><p>‘ಮೈಸೂರು ಬ್ಯಾಂಕನ್ನು ಬೇರೆ ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆ ಕೂಡಿಕೆ ಮಾಡಿದ್ದಾರೆ. ಈ ಬ್ಯಾಂಕಿನ ಸಿಬ್ಬಂದಿ ಹಿಂದಿ ರಾಯಭಾರಿಗಳಾಗಿ ನಾಡಿನ ತುಂಬಾ ಆವರಿಸಿದ್ದಾರೆ’.<br></p><p>‘ಮೈಸೂರು ಪಾಕ್ ಕೂಡ ‘ಶ್ರೀ’ಪಾದ ಕಾಣುವಂತಿದೆ’.<br></p><p>‘ಭ್ರಷ್ಟಾಚಾರ ತಾರಕಕ್ಕೇರಿದೆ ಅಂತ ಆರೋಪಿಸಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯ ನೌಕರರ ಸಂಘ, ಸಿಐಡಿ ತನಿಖೆ ನಡೆಸುವಂತೆ ಆಗ್ರಹಿಸಿದೆ’.<br></p><p>‘ಮೈಸೂರು ಸ್ಯಾಂಡಲ್ ಸೋಪಿಗೆ ಬೇರೇನಾದರೂ ನಾಮಕರಣ ಮಾಡಿದರೆ ಸರಿಹೊಂದುತ್ತದೆ’ ತಿಂಗಳೇಶ ಸೇರಿಸಿದ.<br></p><p>‘ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಿ ಡಿಕೆಶಿ ರಿಯಲ್ ಎಸ್ಟೇಟಿಗೆ ಉತ್ತೇಜನ ನೀಡಿದ್ದಾರೆ ನೋಡಿ’ ಮತ್ತೊಬ್ಬ ತಿರುವು ನೀಡಿದ.<br></p><p>‘ಪರಮೇಶ್ವರ ತುಮಕೂರನ್ನು ಬೆಂಗಳೂರು ಪಶ್ಚಿಮ, ಮುನಿಯಪ್ಪ ಕೋಲಾರವನ್ನು ಬೆಂಗಳೂರು ಪೂರ್ವ, ಸುಧಾಕರ ಚಿಕ್ಕಬಳ್ಳಾಪುರವನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಬದಲಿಸಲು ಬೇಡಿಕೆ ಇಟ್ಟರೆ ರಾಜ್ಯ ತತ್ತರಿಸುತ್ತದೆ’.</p><p>‘ಅಷ್ಟೇ ಆದರೆ ಪರವಾಗಿಲ್ಲ, ಬೆಂಗಳೂರು ರಾಜ್ಯ ಮಾಡಿಕೊಂಡು ನೀವೇ ಇಟ್ಟುಕೊಳ್ಳಿ, ಧಾರವಾಡ ರಾಜ್ಯ ನಮಗಿರಲಿ ಎಂದು ಸದ್ಯ ಬಿಡುವಾಗಿರುವ ಯತ್ನಾಳ್ ಹೋರಾಟಕ್ಕಿಳಿದರೆ ಕಷ್ಟ!’<br></p><p>‘ಒಟ್ಟಾರೆ ಅಖಂಡ ರಾಜ್ಯಕ್ಕೆ ಏನೋ ಕುತ್ತು ಬಂದಂತಿದೆ. ನಮ್ಮ ಹೊಳೆನರಸೀಪುರದ ಸಂಕಷ್ಟತಜ್ಞರ ನೆರವು ಪಡೆದು ಪರಿಹಾರ ಯಾಗ ಮಾಡಬೇಕು’ ತಿಂಗಳೇಶ ಮಾತು ಮುಗಿಸಿದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>