‘ಅಲ್ಲ, ನೀವು ತ್ರಿಕಾಲ ಜ್ಞಾನಿ ಅಂತೀರಿ. ಎಲ್ಲ ಕಾಲದಲ್ಲೂ ನೀವು ಎಚ್ಚರ ಇರಲ್ವ? ಹೋಗ್ಲಿ ಬಿಡಿ, ಇಲ್ಲೊಬ್ಬ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ. ದೊಡ್ಡ ದೊಡ್ಡ ತಲೆಗಳು ಉರುಳ್ತಾವಂತೆ?’
‘ಅದನ್ನ ಅವರ ಬಳಿಯೇ ಕೇಳು. ನಾನು ಬ್ರಹ್ಮಾಂಡ ಉಸ್ತುವಾರಿ...’
‘ನಿಮ್ ತಲೆ, ತ್ರಿಕಾಲ ಜ್ಞಾನಿ, ಬ್ರಹ್ಮಾಂಡ ಉಸ್ತುವಾರಿ, ಬದ್ನೇಕಾಯಿ ಅಂತೀರಿ. ಎಲ್ಲ ಗೊತ್ತಿದ್ರೆ ಇಂಥದ್ದೊಂದು ರೋಗ ಬರ್ತತಿ ಅಂತ ನಾಲ್ಕು ವರ್ಷ ಮೊದ್ಲೇ ಹೇಳೋಕೆ ಏನಾಗಿತ್ತು ನಿಮಗೆ?’
‘ಲೋ ಮೂರ್ಖ, ಹೀಗೆಲ್ಲ ಮಾತಾಡಿದ್ರೆ ನಿನ್ನ ತಲೆನೇ ಉರುಳುತ್ತೆ ನೋಡ್ತಿರು...’ ಗುರೂಜಿ ಗರಂ ಆದರು.
‘ಏನು? ತಲೆ ಉರುಳಿಸ್ತೀರಾ? ನಂಗೆ ತಲೆನೇ ಇಲ್ಲಪ್ಪ, ಏನು ಉರುಳಿಸಿ ಉಪ್ಪಿನಕಾಯಿ ಹಾಕ್ತೀರಿ?’ ತೆಪರೇಸಿಯೂ ರಾಂಗಾದ. ಗುರೂಜಿ ಫೋನ್ ಕಟ್ ಮಾಡಿದರು.