<p>‘ಹಲೋ... ಸ್ವಾಮಿಗಳೇ, ನೀವು ಈ ಕೊರೊನಾನ ದೇಶ ಬಿಟ್ಟು ಓಡಿಸ್ತೀನಿ ಅಂತ ಹೇಳಿದ್ದು ಕೇಳಿದೆ. ಹೆಂಗೆ, ಎಲ್ಲಿಗೆ ಓಡಿಸ್ತೀರಿ?’</p>.<p>‘ಲೋ ಮುಂಡೇದೆ, ನಾನು ಮಠದ ಸ್ವಾಮಿ ಅಲ್ಲ, ತ್ರಿಕಾಲ ಜ್ಞಾನಿ. ಬ್ರಹ್ಮಾಂಡವೇ ನನ್ನ ಕೈಲಿದೆ. ಯಃಕಶ್ಚಿತ್ ಯಾರು ನೀನು?’</p>.<p>‘ನಾನು ತೆಪರೇಸಿ ಅಂತ. ಅಲ್ಲ, ಅದೇನೋ ಕೋನಮಾರಮ್ಮ ಅಂತ ಮಾಡಿ ಅದಕ್ಕೆ ಮೊಸರನ್ನ ತಿನ್ನಿಸಿ ಓಡಿಸ್ತೀನಿ ಅಂತಿದ್ರಿ... ಎಲ್ಲಿಗೆ ಓಡಿಸ್ತೀರಿ?’</p>.<p>‘ಮುಂಡಾಮೋಚ್ತು... ದೇಶ ಅಲ್ಲ, ಇಡೀ ಬ್ರಹ್ಮಾಂಡ ಬಿಟ್ಟು ಓಡಿಸ್ತೀನಿ. ನನ್ನ ಶಕ್ತಿ ನಿಂಗೊತ್ತಿಲ್ಲ...’</p>.<p>‘ಅಲ್ಲ... ಓಡಿಸೋದಿರ್ಲಿ, ನಿಮಗೆ ಅಷ್ಟು ಶಕ್ತಿ ಇದ್ದಿದ್ರೆ ಅದು ಬರದಂಗೇ ತಡೀಬಹುದಿತ್ತಲ್ಲ?’</p>.<p>ಗುರೂಜಿ ತಡವರಿಸಿದರು, ‘ಅದು ವೇಷ ಬದಲಿಸಿ ಬಂದರೆ ಯಾರಿಗೆ ಗೊತ್ತಾಗುತ್ತೆ?’</p>.<p>‘ಅಲ್ಲ, ನೀವು ತ್ರಿಕಾಲ ಜ್ಞಾನಿ ಅಂತೀರಿ. ಎಲ್ಲ ಕಾಲದಲ್ಲೂ ನೀವು ಎಚ್ಚರ ಇರಲ್ವ? ಹೋಗ್ಲಿ ಬಿಡಿ, ಇಲ್ಲೊಬ್ಬ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ. ದೊಡ್ಡ ದೊಡ್ಡ ತಲೆಗಳು ಉರುಳ್ತಾವಂತೆ?’</p>.<p>‘ಅದನ್ನ ಅವರ ಬಳಿಯೇ ಕೇಳು. ನಾನು ಬ್ರಹ್ಮಾಂಡ ಉಸ್ತುವಾರಿ...’</p>.<p>‘ನಿಮ್ ತಲೆ, ತ್ರಿಕಾಲ ಜ್ಞಾನಿ, ಬ್ರಹ್ಮಾಂಡ ಉಸ್ತುವಾರಿ, ಬದ್ನೇಕಾಯಿ ಅಂತೀರಿ. ಎಲ್ಲ ಗೊತ್ತಿದ್ರೆ ಇಂಥದ್ದೊಂದು ರೋಗ ಬರ್ತತಿ ಅಂತ ನಾಲ್ಕು ವರ್ಷ ಮೊದ್ಲೇ ಹೇಳೋಕೆ ಏನಾಗಿತ್ತು ನಿಮಗೆ?’</p>.<p>‘ಲೋ ಮೂರ್ಖ, ಹೀಗೆಲ್ಲ ಮಾತಾಡಿದ್ರೆ ನಿನ್ನ ತಲೆನೇ ಉರುಳುತ್ತೆ ನೋಡ್ತಿರು...’ ಗುರೂಜಿ ಗರಂ ಆದರು.</p>.<p>‘ಏನು? ತಲೆ ಉರುಳಿಸ್ತೀರಾ? ನಂಗೆ ತಲೆನೇ ಇಲ್ಲಪ್ಪ, ಏನು ಉರುಳಿಸಿ ಉಪ್ಪಿನಕಾಯಿ ಹಾಕ್ತೀರಿ?’ ತೆಪರೇಸಿಯೂ ರಾಂಗಾದ. ಗುರೂಜಿ ಫೋನ್ ಕಟ್ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಹಲೋ... ಸ್ವಾಮಿಗಳೇ, ನೀವು ಈ ಕೊರೊನಾನ ದೇಶ ಬಿಟ್ಟು ಓಡಿಸ್ತೀನಿ ಅಂತ ಹೇಳಿದ್ದು ಕೇಳಿದೆ. ಹೆಂಗೆ, ಎಲ್ಲಿಗೆ ಓಡಿಸ್ತೀರಿ?’</p>.<p>‘ಲೋ ಮುಂಡೇದೆ, ನಾನು ಮಠದ ಸ್ವಾಮಿ ಅಲ್ಲ, ತ್ರಿಕಾಲ ಜ್ಞಾನಿ. ಬ್ರಹ್ಮಾಂಡವೇ ನನ್ನ ಕೈಲಿದೆ. ಯಃಕಶ್ಚಿತ್ ಯಾರು ನೀನು?’</p>.<p>‘ನಾನು ತೆಪರೇಸಿ ಅಂತ. ಅಲ್ಲ, ಅದೇನೋ ಕೋನಮಾರಮ್ಮ ಅಂತ ಮಾಡಿ ಅದಕ್ಕೆ ಮೊಸರನ್ನ ತಿನ್ನಿಸಿ ಓಡಿಸ್ತೀನಿ ಅಂತಿದ್ರಿ... ಎಲ್ಲಿಗೆ ಓಡಿಸ್ತೀರಿ?’</p>.<p>‘ಮುಂಡಾಮೋಚ್ತು... ದೇಶ ಅಲ್ಲ, ಇಡೀ ಬ್ರಹ್ಮಾಂಡ ಬಿಟ್ಟು ಓಡಿಸ್ತೀನಿ. ನನ್ನ ಶಕ್ತಿ ನಿಂಗೊತ್ತಿಲ್ಲ...’</p>.<p>‘ಅಲ್ಲ... ಓಡಿಸೋದಿರ್ಲಿ, ನಿಮಗೆ ಅಷ್ಟು ಶಕ್ತಿ ಇದ್ದಿದ್ರೆ ಅದು ಬರದಂಗೇ ತಡೀಬಹುದಿತ್ತಲ್ಲ?’</p>.<p>ಗುರೂಜಿ ತಡವರಿಸಿದರು, ‘ಅದು ವೇಷ ಬದಲಿಸಿ ಬಂದರೆ ಯಾರಿಗೆ ಗೊತ್ತಾಗುತ್ತೆ?’</p>.<p>‘ಅಲ್ಲ, ನೀವು ತ್ರಿಕಾಲ ಜ್ಞಾನಿ ಅಂತೀರಿ. ಎಲ್ಲ ಕಾಲದಲ್ಲೂ ನೀವು ಎಚ್ಚರ ಇರಲ್ವ? ಹೋಗ್ಲಿ ಬಿಡಿ, ಇಲ್ಲೊಬ್ಬ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ. ದೊಡ್ಡ ದೊಡ್ಡ ತಲೆಗಳು ಉರುಳ್ತಾವಂತೆ?’</p>.<p>‘ಅದನ್ನ ಅವರ ಬಳಿಯೇ ಕೇಳು. ನಾನು ಬ್ರಹ್ಮಾಂಡ ಉಸ್ತುವಾರಿ...’</p>.<p>‘ನಿಮ್ ತಲೆ, ತ್ರಿಕಾಲ ಜ್ಞಾನಿ, ಬ್ರಹ್ಮಾಂಡ ಉಸ್ತುವಾರಿ, ಬದ್ನೇಕಾಯಿ ಅಂತೀರಿ. ಎಲ್ಲ ಗೊತ್ತಿದ್ರೆ ಇಂಥದ್ದೊಂದು ರೋಗ ಬರ್ತತಿ ಅಂತ ನಾಲ್ಕು ವರ್ಷ ಮೊದ್ಲೇ ಹೇಳೋಕೆ ಏನಾಗಿತ್ತು ನಿಮಗೆ?’</p>.<p>‘ಲೋ ಮೂರ್ಖ, ಹೀಗೆಲ್ಲ ಮಾತಾಡಿದ್ರೆ ನಿನ್ನ ತಲೆನೇ ಉರುಳುತ್ತೆ ನೋಡ್ತಿರು...’ ಗುರೂಜಿ ಗರಂ ಆದರು.</p>.<p>‘ಏನು? ತಲೆ ಉರುಳಿಸ್ತೀರಾ? ನಂಗೆ ತಲೆನೇ ಇಲ್ಲಪ್ಪ, ಏನು ಉರುಳಿಸಿ ಉಪ್ಪಿನಕಾಯಿ ಹಾಕ್ತೀರಿ?’ ತೆಪರೇಸಿಯೂ ರಾಂಗಾದ. ಗುರೂಜಿ ಫೋನ್ ಕಟ್ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>