<p>‘ಜನನಾಯಕರು ಪಾದಯಾತ್ರೆ ಮಾಡಿದರೆ ತೀರ್ಥಯಾತ್ರೆಯಷ್ಟೇ ಫಲ-ಪುಣ್ಯ ಸಿಗುತ್ತೇನ್ರೀ?’ ಸುಮಿ ಕೇಳಿದಳು.</p>.<p>‘ಫಲ-ಪುಣ್ಯ ಅಲ್ಲದಿದ್ದರೂ ಅಧಿಕಾರದ ಬಲ ಸಿಗುತ್ತೆ ಅನ್ನುವ ನಂಬಿಕೆಯಂತೆ. ಪಾದಯಾತ್ರೆ ಪವಾಡದಿಂದ ಅಧಿಕಾರ ಹಿಡಿದವರ ಇತಿಹಾಸವಿದೆ. ಬಳ್ಳಾರಿಗೆ ನಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ನವರು ಈಗ ಮೇಕೆದಾಟುವಿಗೆ ನಡೆದು ಆಡಳಿತ ನಡೆಸುವ ಪ್ರಯತ್ನ ಮಾಡ್ತಿದ್ದಾರಂತೆ’ ಅಂದ ಶಂಕ್ರಿ.</p>.<p>‘ಅವರ ಪಕ್ಷ, ಅವರ ಪಾದ. ಕಾಂಗ್ರೆಸ್ನವರು ಪಾದಯಾತ್ರೆ ಮಾಡಿದರೆ ಬಿಜೆಪಿ, ಜೆಡಿಎಸ್ನವರಿಗೆ ಯಾಕಂತೆ ಹೊಟ್ಟೆ ಉರಿ? ಇವರೂ ಪಾದಯಾತ್ರೆ ಮಾಡಬಹುದಲ್ವಾ?’</p>.<p>‘ಪಾದಯಾತ್ರೆಯಲ್ಲಿ ನೀವೂ ಬಂದು ಭಾಗ ವಹಿಸಿ ಅದರ ಫಲಾಫಲಗಳನ್ನು ಪಡೆಯಿರಿ ಅಂತ ಕಾಂಗ್ರೆಸ್ನವರು ಕರೆದರೂ ಹೋಗ್ತಿಲ್ಲವಂತೆ. ಕಾಲು ನೋವಿಗೆ ಹೆದರಿದರೇನೋ...’</p>.<p>‘ಹಾಗೇನಿಲ್ಲ, ಬಿಜೆಪಿ, ಜೆಡಿಎಸ್ನಲ್ಲೂ ಪರಿಣತ ಪಾದಯಾತ್ರಿಗಳಿದ್ದಾರೆ. ಮೈಲಿಗಳ ಲೆಕ್ಕವಿಡದೆ ರಾಜಕಾರಣದಲ್ಲಿ ಬಹುದೂರ ನಡೆದುಬಂದಿರುವ ದೇವೇಗೌಡರು,<br />ಯಡಿಯೂರಪ್ಪನೋರು ಪಾದಯಾತ್ರಿಗಳಿಗೆ ಮೈಲಿಗಲ್ಲಾಗಿದ್ದಾರೆ. ಈಗಿನವರಂತೆ ಟಾರು ರಸ್ತೆಯಲ್ಲಿ ನಡೆದವರಲ್ಲ, ಕಲ್ಲುಮುಳ್ಳು ತುಳಿದು ಬಂದಿದ್ದಾರೆ ಕಣ್ರೀ’.</p>.<p>‘ಪಕ್ಷವನ್ನು ಅಧಿಕಾರಕ್ಕೆ ತರಲು ತಾವು ರಾಜ್ಯ ಸುತ್ತುವುದಾಗಿ ಯಡಿಯೂರಪ್ಪ ಹೇಳಿದ್ದಾರೆ’.</p>.<p>‘ತಮ್ಮ ಕುರ್ಚಿ ಕಂಟಕ ನಿವಾರಣೆ ಆದಮೇಲೆ ಮುಖ್ಯಮಂತ್ರಿ ಬಸಣ್ಣರ ಶಕ್ತಿ, ಸಾಮರ್ಥ್ಯವೂ ಹೆಚ್ಚಾಗಿ ರಾಜ್ಯವ್ಯಾಪಿ ನಡೆಯುವ ಉತ್ಸಾಹ ತೋರಿದ್ದಾರಂತೆ’.</p>.<p>‘ಮುಖ್ಯಮಂತ್ರಿ ಸಾಮರ್ಥ್ಯದ ವಿಚಾರವಿರಲಿ, ಸಂಪುಟದ ಸಚಿವರಿಗೆ ಪಾದಯಾತ್ರೆಯ ಸ್ಪರ್ಧೆ ಏರ್ಪಡಿಸಿ ಅವರ ನಡಿಗೆ, ಕೊಡುಗೆ ಸಾಮರ್ಥ್ಯ ಪರೀಕ್ಷೆ ನಡೆಸಿ ಅಂತ ಅನೇಕ ಶಾಸಕರು ಹೈಕಮಾಂಡ್ಗೆ ಕೋರಿಕೆ ಸಲ್ಲಿಸಿದ್ದಾರಂತೆ’.</p>.<p>‘ಸಚಿವರಿಗೆ ನಡಿಗೆಯ ಆಟೋಟ ಸ್ಪರ್ಧೆ ನಡೆಸಿ, ಗೆದ್ದವರಿಗೆ ಬಹುಮಾನ ಕೊಡ ಬೇಕಂತಾ?’ ಸುಮಿ ಕೇಳಿದಳು.</p>.<p>‘ಅಲ್ಲಾ, ಮೈಲೇಜ್ ಇಲ್ಲದ ಮಂತ್ರಿಗಳನ್ನು ಔಟ್ ಮಾಡಿ, ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಿ ಅಂತ ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ಕೇಳಿಕೊಂಡಿದ್ದಾರಂತೆ’ ಎಂದ ಶಂಕ್ರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಜನನಾಯಕರು ಪಾದಯಾತ್ರೆ ಮಾಡಿದರೆ ತೀರ್ಥಯಾತ್ರೆಯಷ್ಟೇ ಫಲ-ಪುಣ್ಯ ಸಿಗುತ್ತೇನ್ರೀ?’ ಸುಮಿ ಕೇಳಿದಳು.</p>.<p>‘ಫಲ-ಪುಣ್ಯ ಅಲ್ಲದಿದ್ದರೂ ಅಧಿಕಾರದ ಬಲ ಸಿಗುತ್ತೆ ಅನ್ನುವ ನಂಬಿಕೆಯಂತೆ. ಪಾದಯಾತ್ರೆ ಪವಾಡದಿಂದ ಅಧಿಕಾರ ಹಿಡಿದವರ ಇತಿಹಾಸವಿದೆ. ಬಳ್ಳಾರಿಗೆ ನಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ನವರು ಈಗ ಮೇಕೆದಾಟುವಿಗೆ ನಡೆದು ಆಡಳಿತ ನಡೆಸುವ ಪ್ರಯತ್ನ ಮಾಡ್ತಿದ್ದಾರಂತೆ’ ಅಂದ ಶಂಕ್ರಿ.</p>.<p>‘ಅವರ ಪಕ್ಷ, ಅವರ ಪಾದ. ಕಾಂಗ್ರೆಸ್ನವರು ಪಾದಯಾತ್ರೆ ಮಾಡಿದರೆ ಬಿಜೆಪಿ, ಜೆಡಿಎಸ್ನವರಿಗೆ ಯಾಕಂತೆ ಹೊಟ್ಟೆ ಉರಿ? ಇವರೂ ಪಾದಯಾತ್ರೆ ಮಾಡಬಹುದಲ್ವಾ?’</p>.<p>‘ಪಾದಯಾತ್ರೆಯಲ್ಲಿ ನೀವೂ ಬಂದು ಭಾಗ ವಹಿಸಿ ಅದರ ಫಲಾಫಲಗಳನ್ನು ಪಡೆಯಿರಿ ಅಂತ ಕಾಂಗ್ರೆಸ್ನವರು ಕರೆದರೂ ಹೋಗ್ತಿಲ್ಲವಂತೆ. ಕಾಲು ನೋವಿಗೆ ಹೆದರಿದರೇನೋ...’</p>.<p>‘ಹಾಗೇನಿಲ್ಲ, ಬಿಜೆಪಿ, ಜೆಡಿಎಸ್ನಲ್ಲೂ ಪರಿಣತ ಪಾದಯಾತ್ರಿಗಳಿದ್ದಾರೆ. ಮೈಲಿಗಳ ಲೆಕ್ಕವಿಡದೆ ರಾಜಕಾರಣದಲ್ಲಿ ಬಹುದೂರ ನಡೆದುಬಂದಿರುವ ದೇವೇಗೌಡರು,<br />ಯಡಿಯೂರಪ್ಪನೋರು ಪಾದಯಾತ್ರಿಗಳಿಗೆ ಮೈಲಿಗಲ್ಲಾಗಿದ್ದಾರೆ. ಈಗಿನವರಂತೆ ಟಾರು ರಸ್ತೆಯಲ್ಲಿ ನಡೆದವರಲ್ಲ, ಕಲ್ಲುಮುಳ್ಳು ತುಳಿದು ಬಂದಿದ್ದಾರೆ ಕಣ್ರೀ’.</p>.<p>‘ಪಕ್ಷವನ್ನು ಅಧಿಕಾರಕ್ಕೆ ತರಲು ತಾವು ರಾಜ್ಯ ಸುತ್ತುವುದಾಗಿ ಯಡಿಯೂರಪ್ಪ ಹೇಳಿದ್ದಾರೆ’.</p>.<p>‘ತಮ್ಮ ಕುರ್ಚಿ ಕಂಟಕ ನಿವಾರಣೆ ಆದಮೇಲೆ ಮುಖ್ಯಮಂತ್ರಿ ಬಸಣ್ಣರ ಶಕ್ತಿ, ಸಾಮರ್ಥ್ಯವೂ ಹೆಚ್ಚಾಗಿ ರಾಜ್ಯವ್ಯಾಪಿ ನಡೆಯುವ ಉತ್ಸಾಹ ತೋರಿದ್ದಾರಂತೆ’.</p>.<p>‘ಮುಖ್ಯಮಂತ್ರಿ ಸಾಮರ್ಥ್ಯದ ವಿಚಾರವಿರಲಿ, ಸಂಪುಟದ ಸಚಿವರಿಗೆ ಪಾದಯಾತ್ರೆಯ ಸ್ಪರ್ಧೆ ಏರ್ಪಡಿಸಿ ಅವರ ನಡಿಗೆ, ಕೊಡುಗೆ ಸಾಮರ್ಥ್ಯ ಪರೀಕ್ಷೆ ನಡೆಸಿ ಅಂತ ಅನೇಕ ಶಾಸಕರು ಹೈಕಮಾಂಡ್ಗೆ ಕೋರಿಕೆ ಸಲ್ಲಿಸಿದ್ದಾರಂತೆ’.</p>.<p>‘ಸಚಿವರಿಗೆ ನಡಿಗೆಯ ಆಟೋಟ ಸ್ಪರ್ಧೆ ನಡೆಸಿ, ಗೆದ್ದವರಿಗೆ ಬಹುಮಾನ ಕೊಡ ಬೇಕಂತಾ?’ ಸುಮಿ ಕೇಳಿದಳು.</p>.<p>‘ಅಲ್ಲಾ, ಮೈಲೇಜ್ ಇಲ್ಲದ ಮಂತ್ರಿಗಳನ್ನು ಔಟ್ ಮಾಡಿ, ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಿ ಅಂತ ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ಕೇಳಿಕೊಂಡಿದ್ದಾರಂತೆ’ ಎಂದ ಶಂಕ್ರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>