<p>ವಿಶ್ವಕಪ್ ಫುಟ್ಬಾಲ್ ಎಂಬ ಧಾರಾವಾಹಿ ಮುಗಿದ ಮೇಲೆ ಅಸಂಖ್ಯಾತ ಓದುಗ ಅಭಿಮಾನಿಗಳಿಂದ ಬಂದ ಪತ್ರಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ಸಾರಾಂಶವಾಗಿ ಕೊಡಲಾಗಿದೆ:<br /><br />• ಅಯ್ಯೋ! ಫುಟ್ಬಾಲ್ ಪಂದ್ಯಗಳು ಮುಗಿದೇ ಹೋದವೆ?</p>.<p>• ಟೂರ್ನಮೆಂಟ್ ಮುಂದುವರಿಸಿದ್ದಿದ್ದರೆ ಇವರ ಗಂಟೇನು ಹೋಗುತ್ತಿತ್ತು?</p>.<p>• ಈಗ ನಾನೇನು ನೋಡಲಿ?</p>.<p>• ಇನ್ನು ಮುಂದೆ ಕೆಲವು ದಿನ 8.30ರ ನಂತರ ರಾತ್ರಿ ಮನೆಯಲ್ಲಿ ಶೂನ್ಯ ಆವರಿಸುತ್ತದೆ.</p>.<p>-ಕೆಲವು ಗಂಡಸರು ಬರೆದ ಪತ್ರಗಳು</p>.<p>• ಇಷ್ಟು ದಿನ ನನ್ನ ಗಂಡ ಸರಿಯಾಗಿ ರಾತ್ರಿ 8.30ಕ್ಕೆ ಮೊದಲೇ ಮನೆಗೆ ಬರುತ್ತಿದ್ದರು. ಇನ್ನು ಮುಂದೆ ಹೇಗೋ ಏನೋ...</p>.<p>• ಸದ್ಯ ಮುಗಿಯಿತಲ್ಲ. ಮನೆಯಲ್ಲಿ ಕೂಗಾಟ, ಚೀರಾಟ ಇನ್ನು ಕಡಿಮೆಯಾಗುತ್ತದೆ.</p>.<p>• ಕರೆಂಟ್ ಬಿಲ್ ಉಳಿಯುತ್ತದೆ. 10 ಗಂಟೆಗೇ ದೀಪ ಆರಿಸಬಹುದು.</p>.<p>• ಈಗಲಾದರೂ ಮಕ್ಕಳು ಓದಿನ ಕಡೆ ಗಮನಹರಿಸುವರೇ?</p>.<p>-ಗೃಹಿಣಿಯರ ಅನಿಸಿಕೆ</p>.<p>• ಮೆಸ್ಸಿ ತಮ್ಮ ಸಂಸಾರದ ಕಡೆ ಹೆಚ್ಚು ಗಮನ ಕೊಡುವರೋ ಅಥವಾ ತಮ್ಮ ಫಾರ್ಮ್ ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಅಭ್ಯಾಸದ ಕಡೆ ಹೆಚ್ಚು ಗಮನ ಕೊಡುವರೋ ಕಾದು ನೋಡಬೇಕಿದೆ.</p>.<p>-ಒಬ್ಬ ಅಧಿಕ ಪ್ರಸಂಗಿ</p>.<p>• ಮುಂದಿನ ಟೂರ್ನಮೆಂಟ್ನಲ್ಲಿ ಆಟಗಾರರಿಗೆ ಸಂಭಾವನೆಯನ್ನು ಬಂಗಾರದ ರೂಪದಲ್ಲಿ ಕೊಡುವರೇ? ಏಕೆಂದರೆ ಈಗಾಗಲೇ ಅವರ ಬಳಿ ಬಹಳಷ್ಟು ಡಾಲರ್ಗಳಿವೆ.</p>.<p>-ಹಣಕಾಸು ತಜ್ಞ</p>.<p>• ಭಾರತ ಈ ಟೂರ್ನಿಯಲ್ಲಿ ಭಾಗವಹಿಸುವಂತೆ ಮಾಡಲು ಮೋದೀಜಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಖಂಡಿತ.<br />-ಉಟ್ಟು ಓರಾಟಗಾರ</p>.<p>• ಕಾಶಿ ಯಾತ್ರೆ, ಅಯೋಧ್ಯ ಯಾತ್ರೆ, ಉಜ್ಜಯಿನಿ ಯಾತ್ರೆಯಂತೆ ಫುಟ್ಬಾಲ್ ಯಾತ್ರೆಯನ್ನೂ ಸರ್ಕಾರ ಏರ್ಪಡಿಸಬೇಕು. ಇದರಲ್ಲಿ ಆಟಗಾರರು ಮಾತ್ರ ಭಾಗವಹಿಸಲಿ. ರಾಜಕಾರಣಿಗಳ ಮಕ್ಕಳು ಹೋಗದಂತೆ ತಡೆಯಬೇಕು.</p>.<p>-ಫುಟ್ಬಾಲ್ ಫ್ಯಾನ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಶ್ವಕಪ್ ಫುಟ್ಬಾಲ್ ಎಂಬ ಧಾರಾವಾಹಿ ಮುಗಿದ ಮೇಲೆ ಅಸಂಖ್ಯಾತ ಓದುಗ ಅಭಿಮಾನಿಗಳಿಂದ ಬಂದ ಪತ್ರಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ಸಾರಾಂಶವಾಗಿ ಕೊಡಲಾಗಿದೆ:<br /><br />• ಅಯ್ಯೋ! ಫುಟ್ಬಾಲ್ ಪಂದ್ಯಗಳು ಮುಗಿದೇ ಹೋದವೆ?</p>.<p>• ಟೂರ್ನಮೆಂಟ್ ಮುಂದುವರಿಸಿದ್ದಿದ್ದರೆ ಇವರ ಗಂಟೇನು ಹೋಗುತ್ತಿತ್ತು?</p>.<p>• ಈಗ ನಾನೇನು ನೋಡಲಿ?</p>.<p>• ಇನ್ನು ಮುಂದೆ ಕೆಲವು ದಿನ 8.30ರ ನಂತರ ರಾತ್ರಿ ಮನೆಯಲ್ಲಿ ಶೂನ್ಯ ಆವರಿಸುತ್ತದೆ.</p>.<p>-ಕೆಲವು ಗಂಡಸರು ಬರೆದ ಪತ್ರಗಳು</p>.<p>• ಇಷ್ಟು ದಿನ ನನ್ನ ಗಂಡ ಸರಿಯಾಗಿ ರಾತ್ರಿ 8.30ಕ್ಕೆ ಮೊದಲೇ ಮನೆಗೆ ಬರುತ್ತಿದ್ದರು. ಇನ್ನು ಮುಂದೆ ಹೇಗೋ ಏನೋ...</p>.<p>• ಸದ್ಯ ಮುಗಿಯಿತಲ್ಲ. ಮನೆಯಲ್ಲಿ ಕೂಗಾಟ, ಚೀರಾಟ ಇನ್ನು ಕಡಿಮೆಯಾಗುತ್ತದೆ.</p>.<p>• ಕರೆಂಟ್ ಬಿಲ್ ಉಳಿಯುತ್ತದೆ. 10 ಗಂಟೆಗೇ ದೀಪ ಆರಿಸಬಹುದು.</p>.<p>• ಈಗಲಾದರೂ ಮಕ್ಕಳು ಓದಿನ ಕಡೆ ಗಮನಹರಿಸುವರೇ?</p>.<p>-ಗೃಹಿಣಿಯರ ಅನಿಸಿಕೆ</p>.<p>• ಮೆಸ್ಸಿ ತಮ್ಮ ಸಂಸಾರದ ಕಡೆ ಹೆಚ್ಚು ಗಮನ ಕೊಡುವರೋ ಅಥವಾ ತಮ್ಮ ಫಾರ್ಮ್ ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಅಭ್ಯಾಸದ ಕಡೆ ಹೆಚ್ಚು ಗಮನ ಕೊಡುವರೋ ಕಾದು ನೋಡಬೇಕಿದೆ.</p>.<p>-ಒಬ್ಬ ಅಧಿಕ ಪ್ರಸಂಗಿ</p>.<p>• ಮುಂದಿನ ಟೂರ್ನಮೆಂಟ್ನಲ್ಲಿ ಆಟಗಾರರಿಗೆ ಸಂಭಾವನೆಯನ್ನು ಬಂಗಾರದ ರೂಪದಲ್ಲಿ ಕೊಡುವರೇ? ಏಕೆಂದರೆ ಈಗಾಗಲೇ ಅವರ ಬಳಿ ಬಹಳಷ್ಟು ಡಾಲರ್ಗಳಿವೆ.</p>.<p>-ಹಣಕಾಸು ತಜ್ಞ</p>.<p>• ಭಾರತ ಈ ಟೂರ್ನಿಯಲ್ಲಿ ಭಾಗವಹಿಸುವಂತೆ ಮಾಡಲು ಮೋದೀಜಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಖಂಡಿತ.<br />-ಉಟ್ಟು ಓರಾಟಗಾರ</p>.<p>• ಕಾಶಿ ಯಾತ್ರೆ, ಅಯೋಧ್ಯ ಯಾತ್ರೆ, ಉಜ್ಜಯಿನಿ ಯಾತ್ರೆಯಂತೆ ಫುಟ್ಬಾಲ್ ಯಾತ್ರೆಯನ್ನೂ ಸರ್ಕಾರ ಏರ್ಪಡಿಸಬೇಕು. ಇದರಲ್ಲಿ ಆಟಗಾರರು ಮಾತ್ರ ಭಾಗವಹಿಸಲಿ. ರಾಜಕಾರಣಿಗಳ ಮಕ್ಕಳು ಹೋಗದಂತೆ ತಡೆಯಬೇಕು.</p>.<p>-ಫುಟ್ಬಾಲ್ ಫ್ಯಾನ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>