ಚುರುಮುರಿ | ಫುಟ್ಬಾಲ್ ಧಾರಾವಾಹಿ

ವಿಶ್ವಕಪ್ ಫುಟ್ಬಾಲ್ ಎಂಬ ಧಾರಾವಾಹಿ ಮುಗಿದ ಮೇಲೆ ಅಸಂಖ್ಯಾತ ಓದುಗ ಅಭಿಮಾನಿಗಳಿಂದ ಬಂದ ಪತ್ರಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ಸಾರಾಂಶವಾಗಿ ಕೊಡಲಾಗಿದೆ:
• ಅಯ್ಯೋ! ಫುಟ್ಬಾಲ್ ಪಂದ್ಯಗಳು ಮುಗಿದೇ ಹೋದವೆ?
• ಟೂರ್ನಮೆಂಟ್ ಮುಂದುವರಿಸಿದ್ದಿದ್ದರೆ ಇವರ ಗಂಟೇನು ಹೋಗುತ್ತಿತ್ತು?
• ಈಗ ನಾನೇನು ನೋಡಲಿ?
• ಇನ್ನು ಮುಂದೆ ಕೆಲವು ದಿನ 8.30ರ ನಂತರ ರಾತ್ರಿ ಮನೆಯಲ್ಲಿ ಶೂನ್ಯ ಆವರಿಸುತ್ತದೆ.
-ಕೆಲವು ಗಂಡಸರು ಬರೆದ ಪತ್ರಗಳು
• ಇಷ್ಟು ದಿನ ನನ್ನ ಗಂಡ ಸರಿಯಾಗಿ ರಾತ್ರಿ 8.30ಕ್ಕೆ ಮೊದಲೇ ಮನೆಗೆ ಬರುತ್ತಿದ್ದರು. ಇನ್ನು ಮುಂದೆ ಹೇಗೋ ಏನೋ...
• ಸದ್ಯ ಮುಗಿಯಿತಲ್ಲ. ಮನೆಯಲ್ಲಿ ಕೂಗಾಟ, ಚೀರಾಟ ಇನ್ನು ಕಡಿಮೆಯಾಗುತ್ತದೆ.
• ಕರೆಂಟ್ ಬಿಲ್ ಉಳಿಯುತ್ತದೆ. 10 ಗಂಟೆಗೇ ದೀಪ ಆರಿಸಬಹುದು.
• ಈಗಲಾದರೂ ಮಕ್ಕಳು ಓದಿನ ಕಡೆ ಗಮನಹರಿಸುವರೇ?
-ಗೃಹಿಣಿಯರ ಅನಿಸಿಕೆ
• ಮೆಸ್ಸಿ ತಮ್ಮ ಸಂಸಾರದ ಕಡೆ ಹೆಚ್ಚು ಗಮನ ಕೊಡುವರೋ ಅಥವಾ ತಮ್ಮ ಫಾರ್ಮ್ ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಅಭ್ಯಾಸದ ಕಡೆ ಹೆಚ್ಚು ಗಮನ ಕೊಡುವರೋ ಕಾದು ನೋಡಬೇಕಿದೆ.
-ಒಬ್ಬ ಅಧಿಕ ಪ್ರಸಂಗಿ
• ಮುಂದಿನ ಟೂರ್ನಮೆಂಟ್ನಲ್ಲಿ ಆಟಗಾರರಿಗೆ ಸಂಭಾವನೆಯನ್ನು ಬಂಗಾರದ ರೂಪದಲ್ಲಿ ಕೊಡುವರೇ? ಏಕೆಂದರೆ ಈಗಾಗಲೇ ಅವರ ಬಳಿ ಬಹಳಷ್ಟು ಡಾಲರ್ಗಳಿವೆ.
-ಹಣಕಾಸು ತಜ್ಞ
• ಭಾರತ ಈ ಟೂರ್ನಿಯಲ್ಲಿ ಭಾಗವಹಿಸುವಂತೆ ಮಾಡಲು ಮೋದೀಜಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಖಂಡಿತ.
-ಉಟ್ಟು ಓರಾಟಗಾರ
• ಕಾಶಿ ಯಾತ್ರೆ, ಅಯೋಧ್ಯ ಯಾತ್ರೆ, ಉಜ್ಜಯಿನಿ ಯಾತ್ರೆಯಂತೆ ಫುಟ್ಬಾಲ್ ಯಾತ್ರೆಯನ್ನೂ ಸರ್ಕಾರ ಏರ್ಪಡಿಸಬೇಕು. ಇದರಲ್ಲಿ ಆಟಗಾರರು ಮಾತ್ರ ಭಾಗವಹಿಸಲಿ. ರಾಜಕಾರಣಿಗಳ ಮಕ್ಕಳು ಹೋಗದಂತೆ ತಡೆಯಬೇಕು.
-ಫುಟ್ಬಾಲ್ ಫ್ಯಾನ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.