<p>ಮಡಿಚಿದ ದಿನಪತ್ರಿಕೆ ಹಿಡಿದು ಬೈಟು ಬಳಗಕ್ಕೆ ಜೊತೆಯಾದ ತಿಂಗಳೇಶ.</p>.<p>‘ಪೇಪರಿನಲ್ಲಿ ಇವತ್ತಿನ ವಿಶೇಷ ಏನಪ್ಪಾ…’ ಎನ್ನುತ್ತಾ ಕೈಚಾಚಿದ ಬದ್ರಿ.</p>.<p>‘ನಮ್ಮ ಸಮುದಾಯದಲ್ಲಿ ಯಾರಾದರೂ ‘ಕೊಂಡು ಓದುಗ’ ಅಂತ ಇದ್ರೆ… ಅದು ನಮ್ಮೆಲ್ಲರ ಹೆಮ್ಮೆಯ ಬದ್ರಿಮಾಮಾ ಮಾತ್ರ…’ ಎಂದು ಘಂಟಾಘೋಷವಾಗಿ ಕೂಗಿದ ಪ್ರಕಾಶಿ, ಚಪ್ಪಾಳೆಗಾಗಿ ಕಾದ.</p>.<p>‘ಖರೀದಿಸಿಯೋ ಕಡ ಪಡೆದೋ… ಒಟ್ಟಿನಲ್ಲಿ ‘ಕೊಂಡು’ ಓದಿದರೆ ಸಾಕು ಎಂದು ಹೇಳಲು ನಾನು ಇಷ್ಟಪಡುತ್ತೇನೆ…’ ರಾಜಣ್ಣ ಬಾಯಿ ಹಾಕಿದ. ಎಲ್ಲರ ಉದ್ದೇಶ ಒಂದೇ; ಬದ್ರಿಯನ್ನು ‘ಉದ್ರಿ ಓದುಗ’ ಎಂದು ನಿರೂಪಿಸುವುದು.</p>.<p>‘ಶ್ರಾವಣ ಮಾಸದಲ್ಲಿ ಅದೇನಪ್ಪಾ ಮಹಾ ಸುದ್ದಿಗಳು ಇರುತ್ತವೆ? ಅವೇ– ಹಬ್ಬದ ಸಡಗರ, ಹೂವು– ಹಣ್ಣು ಖರೀದಿಗೆ ಮುಗಿಬಿದ್ದ ಭಕ್ತಸಾಗರ, ದರ ಏರಿದರೂ ಕುಗ್ಗದ ಸಂಭ್ರಮ... ಇವನ್ನು ಓದಲು ಪತ್ರಿಕೆ ಕೊಳ್ಳಬೇಕೆ? ನಾನಷ್ಟು ಮೂರ್ಖನಲ್ಲ’ ಬದ್ರಿಯ ಸಮರ್ಥನೆ ಕೇಳಿ ತಿಂಗಳೇಶ ಹೆಗಲು ಮುಟ್ಟಿಕೊಂಡ.</p>.<p>‘ಸ್ಥಳದಲ್ಲಿ ಎಷ್ಟು ಗುಂಡಿ ಅಗೆದರು, ಎಷ್ಟು ಮೂಳೆ ತೆಗೆದರು ಎಂಬ ಕುತೂಹಲವೂ ನಿನಗಿಲ್ಲವೇ?’</p>.<p>‘ಹೋಗಲಿ, ಮೋದಿ ಮಾಮಾ ಮಾತು ಕೇಳಲಿಲ್ಲ ಅಂತ ಟ್ರಂಪ್ ಅಂಕಲ್ ಸುಂಕ ಏರಿಸಿದ್ದಾದರೂ ಬಿಸಿ ಸುದ್ದಿಯಲ್ಲವೇ?’</p>.<p>‘ಅಮೆರಿಕ ಅಧ್ಯಕ್ಷ ಒಳ್ಳೇ ಕೆಲಸ ಮಾಡಿದ್ದಾರೆ. ಈಗಲಾದರೂ ಭಾರತದ ಪ್ರಧಾನಿಗೆ ನಾವು ಅನುಭವಿಸು ತ್ತಿರುವ ಜಿಎಸ್ಟಿ ಭಾರದ ಅರಿವಾಗಲಿ’ ಬದ್ರಿ ಅಸಲಿ ಸುದ್ದಿಗೆ ಬಂದ.</p>.<p>‘ಇದು ಎ.ಐ ಯುಗ. ಹೊಸದಾಗಿ ‘ದರ ಮಹಾಲಕ್ಷ್ಮೀ’ ವ್ರತ ಆರಂಭಿಸಿದರೆ ಜಿಎಸ್ಟಿ ಭಾರ ಇಳಿಯಬಹುದೇನೋ...’</p>.<p>‘ಇದಕ್ಕೆ ಪ್ರತಿಯಾಗಿ ಸರ್ಕಾರ ‘ಕರ ಮಹಾಲಕ್ಷ್ಮೀ’ ಪೂಜೆ ನಡೆಸಿದರೆ ಕರದಾತರಿಗೆ ಇನ್ನೂ ಕಷ್ಟ’.</p>.<p>‘ನಾವು ‘ಸುಂಕಷ್ಟಹರಣ’ ಗಣಪನನ್ನು ಕೂಡಿಸೋಣ ಬಿಡಿ’ ತಿಂಗಳೇಶ ತೀರ್ಪು ನೀಡಿದ! </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಚಿದ ದಿನಪತ್ರಿಕೆ ಹಿಡಿದು ಬೈಟು ಬಳಗಕ್ಕೆ ಜೊತೆಯಾದ ತಿಂಗಳೇಶ.</p>.<p>‘ಪೇಪರಿನಲ್ಲಿ ಇವತ್ತಿನ ವಿಶೇಷ ಏನಪ್ಪಾ…’ ಎನ್ನುತ್ತಾ ಕೈಚಾಚಿದ ಬದ್ರಿ.</p>.<p>‘ನಮ್ಮ ಸಮುದಾಯದಲ್ಲಿ ಯಾರಾದರೂ ‘ಕೊಂಡು ಓದುಗ’ ಅಂತ ಇದ್ರೆ… ಅದು ನಮ್ಮೆಲ್ಲರ ಹೆಮ್ಮೆಯ ಬದ್ರಿಮಾಮಾ ಮಾತ್ರ…’ ಎಂದು ಘಂಟಾಘೋಷವಾಗಿ ಕೂಗಿದ ಪ್ರಕಾಶಿ, ಚಪ್ಪಾಳೆಗಾಗಿ ಕಾದ.</p>.<p>‘ಖರೀದಿಸಿಯೋ ಕಡ ಪಡೆದೋ… ಒಟ್ಟಿನಲ್ಲಿ ‘ಕೊಂಡು’ ಓದಿದರೆ ಸಾಕು ಎಂದು ಹೇಳಲು ನಾನು ಇಷ್ಟಪಡುತ್ತೇನೆ…’ ರಾಜಣ್ಣ ಬಾಯಿ ಹಾಕಿದ. ಎಲ್ಲರ ಉದ್ದೇಶ ಒಂದೇ; ಬದ್ರಿಯನ್ನು ‘ಉದ್ರಿ ಓದುಗ’ ಎಂದು ನಿರೂಪಿಸುವುದು.</p>.<p>‘ಶ್ರಾವಣ ಮಾಸದಲ್ಲಿ ಅದೇನಪ್ಪಾ ಮಹಾ ಸುದ್ದಿಗಳು ಇರುತ್ತವೆ? ಅವೇ– ಹಬ್ಬದ ಸಡಗರ, ಹೂವು– ಹಣ್ಣು ಖರೀದಿಗೆ ಮುಗಿಬಿದ್ದ ಭಕ್ತಸಾಗರ, ದರ ಏರಿದರೂ ಕುಗ್ಗದ ಸಂಭ್ರಮ... ಇವನ್ನು ಓದಲು ಪತ್ರಿಕೆ ಕೊಳ್ಳಬೇಕೆ? ನಾನಷ್ಟು ಮೂರ್ಖನಲ್ಲ’ ಬದ್ರಿಯ ಸಮರ್ಥನೆ ಕೇಳಿ ತಿಂಗಳೇಶ ಹೆಗಲು ಮುಟ್ಟಿಕೊಂಡ.</p>.<p>‘ಸ್ಥಳದಲ್ಲಿ ಎಷ್ಟು ಗುಂಡಿ ಅಗೆದರು, ಎಷ್ಟು ಮೂಳೆ ತೆಗೆದರು ಎಂಬ ಕುತೂಹಲವೂ ನಿನಗಿಲ್ಲವೇ?’</p>.<p>‘ಹೋಗಲಿ, ಮೋದಿ ಮಾಮಾ ಮಾತು ಕೇಳಲಿಲ್ಲ ಅಂತ ಟ್ರಂಪ್ ಅಂಕಲ್ ಸುಂಕ ಏರಿಸಿದ್ದಾದರೂ ಬಿಸಿ ಸುದ್ದಿಯಲ್ಲವೇ?’</p>.<p>‘ಅಮೆರಿಕ ಅಧ್ಯಕ್ಷ ಒಳ್ಳೇ ಕೆಲಸ ಮಾಡಿದ್ದಾರೆ. ಈಗಲಾದರೂ ಭಾರತದ ಪ್ರಧಾನಿಗೆ ನಾವು ಅನುಭವಿಸು ತ್ತಿರುವ ಜಿಎಸ್ಟಿ ಭಾರದ ಅರಿವಾಗಲಿ’ ಬದ್ರಿ ಅಸಲಿ ಸುದ್ದಿಗೆ ಬಂದ.</p>.<p>‘ಇದು ಎ.ಐ ಯುಗ. ಹೊಸದಾಗಿ ‘ದರ ಮಹಾಲಕ್ಷ್ಮೀ’ ವ್ರತ ಆರಂಭಿಸಿದರೆ ಜಿಎಸ್ಟಿ ಭಾರ ಇಳಿಯಬಹುದೇನೋ...’</p>.<p>‘ಇದಕ್ಕೆ ಪ್ರತಿಯಾಗಿ ಸರ್ಕಾರ ‘ಕರ ಮಹಾಲಕ್ಷ್ಮೀ’ ಪೂಜೆ ನಡೆಸಿದರೆ ಕರದಾತರಿಗೆ ಇನ್ನೂ ಕಷ್ಟ’.</p>.<p>‘ನಾವು ‘ಸುಂಕಷ್ಟಹರಣ’ ಗಣಪನನ್ನು ಕೂಡಿಸೋಣ ಬಿಡಿ’ ತಿಂಗಳೇಶ ತೀರ್ಪು ನೀಡಿದ! </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>