‘ವ್ಯವಸ್ಥೆಯ ಮೂಲಾಧಾರ ಬಡವ ಕನೋ. ಎರಡನೇ ಮನೇಲಿರಾ ಶ್ರೀಮಂತನಿಗೆ ಬಡವನ್ನ ಗೋರಿಕ್ಯಂಡು ತಿನ್ನದೇ ಕೆಲಸ. ಮೂರನೇ ವರ್ಗದೇಲಿರ ಪೋಲೀಸು ಮೇಲಿನ ಎರಡು ವರ್ಗಕ್ಕೆ ರಕ್ಷಣೆ ಕೊಡಬೇಕು. ನಾಲ್ಕನೇ ಮನೇಲಿ ನನ್ನ-ನಿನ್ನಂತಾ ಮಧ್ಯಮ ವರ್ಗದ ಬಿಕನಾಸಿಗಳಿರತೀವಿ. ಮೇಲಿನ ಮೂರೂ ವರ್ಗಕ್ಕೂ ನಮ್ಮದೇ ಖರ್ಚು! ಒಳ್ಳೆ ದಿನ ಬತ್ತದೆ ಅಂತ ಭ್ರಮೆಯಲ್ಲೇ ಎಲ್ಲಾ ಬದುಕ್ತರೆ!’ ಅಂದರು.
‘ಮುಂದೆ ಸಾ!’
‘ಐದನೇ ಮನೇಲಿ ಬ್ಯಾಂಕರುಗಳಿರತರೆಕಲಾ. ನಾಲ್ಕೂ ವರ್ಗದ ದುಡ್ಡು ಇವರು ಮಡಿಕಂಡು ಉಳ್ಳೋರಿಗೇ ಕೊಡತರೆ. ಆರನೇ ಮನೇಲಿ ಕಾರ್ಯಾಂಗ ಇರತದೆ. ಮೇಲಿನ ಐದು ವರ್ಗಕ್ಕೂ ದಾರಿ ತಪ್ಪಿಸೋರು ಇವರೇಯ! ಏಳನೇ ಮನೇಲಿ ಪೋಲಿಪಕಾರುಗಳಿರತರೆ. ಇವರು ಎಲ್ಲ ಆರೂ ವರ್ಗಗಳನ್ನ ಹೆದರಿಸ್ಕ್ಯಂಡು ಬದಿಕ್ಕತರೆ. ಎಂಟನೇ ವರ್ಗ ಧರ್ಮಗುರುಗ ಳದ್ದು. ಎಲ್ಲಾರೂ ಇವರ ಆಶೀರ್ವಾದ ಕೇಳತರೆ!’
‘ಒಂಬತ್ತನೇ ಗ್ರಹ ಯಾವುದು?’ ಅಂದೆ. ‘ಬೊಡ್ಡಿಹೈದ್ನೇ, ಒಂಬತ್ತನೇ ಮನೇ ರಾಜಕಾರಣಿಗಳದ್ದು. ಇವರು ಎಂಟೂ ವರ್ಗದವರ ತಲೆ ಸವರಿಕ್ಯಂಡು ಮಜವಾಗಿರೊತ್ಗೇ ನಮಗೆ ಈ ವಡಬಾಳು!’ ಅಂದ್ರು.