‘ಕಮಲೇಂದ್ರ, ಮುಂದೆ ಎದುರಾಗುವ ಪಾರ್ಲಿಮೆಂಟ್ ಚಂಡಮಾರುತ ನಿರ್ವಹಿಸಲು ಬಿಗ್ ಬಾಸ್ ನಿಮಗೆ ‘ಘರ್ ವಾಪ್ಸಿ’ ಟಾಸ್ಕ್ ನೀಡುತ್ತಿದ್ದಾರೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಶಿಕ್ಷಣ ಇಲಾಖೆಯ ‘ಮರಳಿ ಬಾ ಶಾಲೆಗೆ’ ಕಾರ್ಯಕ್ರಮದಂತೆ, ಪಕ್ಷ ಬಿಟ್ಟುಹೋಗಿರುವ ನಾಯಕರನ್ನು ವಾಪಸ್ ಕರೆ ತರಲು ‘ಮರಳಿ ಬಾ ಮನೆಗೆ’ ಎಂಬ ಚಟುವಟಿಕೆಯನ್ನು ಬಿಗ್ ಬಾಸ್ ನಿಮಗೆ ನೀಡುತ್ತಿದ್ದಾರೆ’.