‘ಈಗ ನಮ್ಮ ಬಗ್ಗೆ ಯಾರಿಗೂ ಭಯಭಕ್ತಿ ಏನೂ ಉಳಿದಿಲ್ಲ. ವೀಕೆಂಡು ಕರ್ಫ್ಯೂ ಅಂತಾರೆ... ನೋಡಿದ್ರೆ ಗೃಹ ಸಚಿವರ ಹುಟ್ಟೂರಿನಲ್ಲೇ ಜಾತ್ರೆ ನಡೆಸ್ತಾರೆ, ಇನ್ನೆಲ್ಲೋ ಕುರಿ ಸಂತೆ ನಡೆಸ್ತಾರೆ. ಏನೇನೋ ಸುಡುಗಾಡು ಸುಂಟಿಕೊಂಬು ಪ್ರಚಾರ, ಸಭೆ, ಸಮ್ಮೇಳನ ಅಂತ ಗುಂಪುಗೂಡ್ತವರೆ, ಮುಖಕ್ಕೆ ಮಾಸ್ಕೂ ಇಲ್ಲದೆ ರಾಜಾರೋಷವಾಗಿ ಓಡಾಡ್ತವರೆ’ ಹಿರಿ ಕೋವಿಡಣ್ಣ ಮತ್ತೆ ಗುಡುಗಿದ.