ರಾಜಕೀಯದ ಕೀಳು ಬೈಗುಳಗಳ ಪಟಾಕಿಯ ದುರ್ವಾಸನೆಯಿಂದ ಸಾಮಾನ್ಯರಿಗೆ ಉಬ್ಬಸ ಸಾಧ್ಯತೆ. ಅಕ್ರಮಾದಿತ್ಯರಲ್ಲಿ ಸ್ವಕರ್ಮಾ ಸಕ್ತಿ ಹೆಚ್ಚುವುದರಿಂದ ಸಾರ್ವಜನಿಕ ಹಣ ದುರ್ವ್ಯಯ. ಕೈ-ತೆನೆಗಳ ನಾಯಕರಿಂದ ಅಧಿಕಾರದ ನಿರಂತರ ಕನವರಿಕೆ, ಸ್ವಜನವೈರ, ನಿದ್ರಾನಾಶ, ದ್ವೇಷ ಭಾವನೆ ಹೆಚ್ಚಳ. ಕಮಲಮುಖಿಗಳು 1008 ಬಾರಿ ‘ಸಾರುವ ಭೌಮಾ ನಮೋ, ನಮೋ’ ಎಂಬ ಶಾ-ಕ್ತ ಮಂತ್ರ ಜಪಿಸುವುದರಿಂದ ಕಾರ್ಯಸಿದ್ಧಿ.