<p>‘ಕೋವಿಡ್ ಕಾಟದಲ್ಲಿ ಮಕ್ಕಳು ಪರೀಕ್ಷೆಗೆ ಹಾಜರಾಗದೆ ಪಾಸಾದಂತೆ, ಹೈಕಮಾಂಡ್ ಆಟದಲ್ಲಿ ಬಸವರಾಜ ಬೊಮ್ಮಾಯಿ ಪಾಸಾಗಿ ಪದವೀಧರರಾಗಿಬಿಟ್ರು...’ ಸುಮಿ ಹೇಳಿದಳು.</p>.<p>‘ಹೌದು, ಪರೀಕ್ಷೆಯಲ್ಲಿ ಉತ್ತರ ಬರೆಯದೆ ಉತ್ತರಾಧಿಕಾರಿ ಆಗಿಬಿಟ್ಟರು’ ಎಂದ ಶಂಕ್ರಿ.</p>.<p>‘ಬೊಮ್ಮಾಯಿಯ ಅಂಕಪಟ್ಟಿಯಲ್ಲಿ ಯಡಿಯೂರಪ್ಪನವರ ಕೃಪಾಂಕ ಕಾಣ್ತಿದೆ ಅಲ್ವೇನ್ರೀ?’</p>.<p>‘ಹೌದು, ಇದು ಕೃಪಾಪೋಷಿತ ಪರೀಕ್ಷಾ ಪದ್ಧತಿ, ಕೃಪಾಕಟಾಕ್ಷ ಇಲ್ಲದೆ ಪಾಸಾಗಲಾಗಲ್ಲ. ಆಮೇಲೆ ಎದುರಾಗುವ ಸತ್ವಪರೀಕ್ಷೆ ಎದುರಿಸುವುದು ಅವರವರ ಸಾಮರ್ಥ್ಯ’.</p>.<p>‘ಹಾಗಾದ್ರೆ ಬೊಮ್ಮಾಯಿಯವರು ಹೊಸ ಸಿಲೆಬಸ್ ಅಧ್ಯಯನ ಮಾಡಬೇಕೇನ್ರೀ?’</p>.<p>‘ಅದೇ ಸಂಪುಟದ ಎರಡನೇ ಸಂಚಿಕೆ ಆಗಿರೋದ್ರಿಂದ ಸಿಲೆಬಸ್ ಬದಲಾಗಲ್ಲ, ಕುರ್ಚಿ, ಬೆಂಚು ಚೇಂಜಾಗಬಹುದು ಅಷ್ಟೇ...’</p>.<p>‘ಮೊದಲ ಸಂಚಿಕೆಯ ಎಲ್ಲಾ ಖಾತೆದಾರರಿಗೆ ಕುರ್ಚಿ ಸಿಗಬಹುದಾ?’</p>.<p>‘ಕಷ್ಟ, ಆ ಸಂಚಿಕೆಯಲ್ಲಿ ಕ್ಯಾತೆ ಮಾಡಿದವರನ್ನು ಕೈಬಿಟ್ಟು ಒಬೀಡಿಯೆಂಟ್ ಖಾತೆದಾರರ ಕೈ ಹಿಡಿಯಬಹುದು’.</p>.<p>‘ಖಾತೆದಾರರು ಪ್ರತ್ಯೇಕ ಪರೀಕ್ಷೆ ಎದುರಿಸಬೇಕೋ ಅಥವಾ ಅವರೂ ಕೃಪಾಂಕದ ಕೋಟಾದಲ್ಲಿ ಪಾಸಾಗ್ತಾರೋ?’</p>.<p>‘ಖಾತೆದಾರಿಕೆಗೆ ರಿಯಾಯಿತಿ ಪಾಸು, ಸಾಂಪ್ರದಾಯಿಕ ಶಿಫಾರಸು ನಡೆಯುವುದಿಲ್ಲ<br />ವಂತೆ. ಅನುಭವ, ಜಾತಿ, ಪ್ರದೇಶ, ಶಕ್ತಿ ಸಾಮರ್ಥ್ಯದ ಆಧಾರದಲ್ಲಿ ಸೂಕ್ತ ಖಾತೆದಾರರನ್ನು ಪರೀಕ್ಷಾ ಮಂಡಳಿಯೇ ಆಯ್ಕೆ ಮಾಡುವುದಂತೆ. ಅದರಲ್ಲೂ ಮಠಾಧೀಶರ ಶಿಫಾರಸು ತರುವ ಖಾತೆದಾರರನ್ನು ಡಿಸ್ಕ್ವಾಲಿಫೈ ಮಾಡಲಾಗುತ್ತದೆ ಎಂದು ಹೆಡ್ ಆಫೀಸಿನಿಂದ ಎಚ್ಚರಿಕೆ ಸಂದೇಶ ಬಂದಿದೆಯಂತೆ’ ಶಂಕ್ರಿ ಅಂದಾಜು ಮಾಡಿದ.</p>.<p>‘ಪದವಿತ್ಯಾಗಿ ಯಡಿಯೂರಪ್ಪನವರಿಗೆ ಕುರ್ಚಿ, ಬೆಂಚು ಸಿಗಬಹುದಾ?’</p>.<p>‘ಅವರು ಸರ್ಕಾರಿ ಕುರ್ಚಿ ಒಲ್ಲೆ ಎಂದಿದ್ದಾರೆ. ಖಾಸಗಿ ಕುರ್ಚಿ ಹಾಕಿಕೊಂಡು ಮನೆ ಯಜಮಾನನಂತೆ ಆಗುಹೋಗು ನಿಭಾಯಿಸುವ ಅವಕಾಶ ಕೊಡಿ ಎಂದು ಕೇಳಬಹುದು’.</p>.<p>‘ಕೇಳಬಹುದು, ತಮಗೆ ಕಾಟ ಕೊಟ್ಟವರಿಗೆ ಪಾಠ ಕಲಿಸಲು ಯಡಿಯೂರಪ್ಪನವ್ರಿಗೆ ಇದು ಒಳ್ಳೆ ಅವಕಾಶವಾಗಬಹುದು ಅಲ್ವೇನ್ರೀ?...’ ಎಂದಳು ಸುಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಕೋವಿಡ್ ಕಾಟದಲ್ಲಿ ಮಕ್ಕಳು ಪರೀಕ್ಷೆಗೆ ಹಾಜರಾಗದೆ ಪಾಸಾದಂತೆ, ಹೈಕಮಾಂಡ್ ಆಟದಲ್ಲಿ ಬಸವರಾಜ ಬೊಮ್ಮಾಯಿ ಪಾಸಾಗಿ ಪದವೀಧರರಾಗಿಬಿಟ್ರು...’ ಸುಮಿ ಹೇಳಿದಳು.</p>.<p>‘ಹೌದು, ಪರೀಕ್ಷೆಯಲ್ಲಿ ಉತ್ತರ ಬರೆಯದೆ ಉತ್ತರಾಧಿಕಾರಿ ಆಗಿಬಿಟ್ಟರು’ ಎಂದ ಶಂಕ್ರಿ.</p>.<p>‘ಬೊಮ್ಮಾಯಿಯ ಅಂಕಪಟ್ಟಿಯಲ್ಲಿ ಯಡಿಯೂರಪ್ಪನವರ ಕೃಪಾಂಕ ಕಾಣ್ತಿದೆ ಅಲ್ವೇನ್ರೀ?’</p>.<p>‘ಹೌದು, ಇದು ಕೃಪಾಪೋಷಿತ ಪರೀಕ್ಷಾ ಪದ್ಧತಿ, ಕೃಪಾಕಟಾಕ್ಷ ಇಲ್ಲದೆ ಪಾಸಾಗಲಾಗಲ್ಲ. ಆಮೇಲೆ ಎದುರಾಗುವ ಸತ್ವಪರೀಕ್ಷೆ ಎದುರಿಸುವುದು ಅವರವರ ಸಾಮರ್ಥ್ಯ’.</p>.<p>‘ಹಾಗಾದ್ರೆ ಬೊಮ್ಮಾಯಿಯವರು ಹೊಸ ಸಿಲೆಬಸ್ ಅಧ್ಯಯನ ಮಾಡಬೇಕೇನ್ರೀ?’</p>.<p>‘ಅದೇ ಸಂಪುಟದ ಎರಡನೇ ಸಂಚಿಕೆ ಆಗಿರೋದ್ರಿಂದ ಸಿಲೆಬಸ್ ಬದಲಾಗಲ್ಲ, ಕುರ್ಚಿ, ಬೆಂಚು ಚೇಂಜಾಗಬಹುದು ಅಷ್ಟೇ...’</p>.<p>‘ಮೊದಲ ಸಂಚಿಕೆಯ ಎಲ್ಲಾ ಖಾತೆದಾರರಿಗೆ ಕುರ್ಚಿ ಸಿಗಬಹುದಾ?’</p>.<p>‘ಕಷ್ಟ, ಆ ಸಂಚಿಕೆಯಲ್ಲಿ ಕ್ಯಾತೆ ಮಾಡಿದವರನ್ನು ಕೈಬಿಟ್ಟು ಒಬೀಡಿಯೆಂಟ್ ಖಾತೆದಾರರ ಕೈ ಹಿಡಿಯಬಹುದು’.</p>.<p>‘ಖಾತೆದಾರರು ಪ್ರತ್ಯೇಕ ಪರೀಕ್ಷೆ ಎದುರಿಸಬೇಕೋ ಅಥವಾ ಅವರೂ ಕೃಪಾಂಕದ ಕೋಟಾದಲ್ಲಿ ಪಾಸಾಗ್ತಾರೋ?’</p>.<p>‘ಖಾತೆದಾರಿಕೆಗೆ ರಿಯಾಯಿತಿ ಪಾಸು, ಸಾಂಪ್ರದಾಯಿಕ ಶಿಫಾರಸು ನಡೆಯುವುದಿಲ್ಲ<br />ವಂತೆ. ಅನುಭವ, ಜಾತಿ, ಪ್ರದೇಶ, ಶಕ್ತಿ ಸಾಮರ್ಥ್ಯದ ಆಧಾರದಲ್ಲಿ ಸೂಕ್ತ ಖಾತೆದಾರರನ್ನು ಪರೀಕ್ಷಾ ಮಂಡಳಿಯೇ ಆಯ್ಕೆ ಮಾಡುವುದಂತೆ. ಅದರಲ್ಲೂ ಮಠಾಧೀಶರ ಶಿಫಾರಸು ತರುವ ಖಾತೆದಾರರನ್ನು ಡಿಸ್ಕ್ವಾಲಿಫೈ ಮಾಡಲಾಗುತ್ತದೆ ಎಂದು ಹೆಡ್ ಆಫೀಸಿನಿಂದ ಎಚ್ಚರಿಕೆ ಸಂದೇಶ ಬಂದಿದೆಯಂತೆ’ ಶಂಕ್ರಿ ಅಂದಾಜು ಮಾಡಿದ.</p>.<p>‘ಪದವಿತ್ಯಾಗಿ ಯಡಿಯೂರಪ್ಪನವರಿಗೆ ಕುರ್ಚಿ, ಬೆಂಚು ಸಿಗಬಹುದಾ?’</p>.<p>‘ಅವರು ಸರ್ಕಾರಿ ಕುರ್ಚಿ ಒಲ್ಲೆ ಎಂದಿದ್ದಾರೆ. ಖಾಸಗಿ ಕುರ್ಚಿ ಹಾಕಿಕೊಂಡು ಮನೆ ಯಜಮಾನನಂತೆ ಆಗುಹೋಗು ನಿಭಾಯಿಸುವ ಅವಕಾಶ ಕೊಡಿ ಎಂದು ಕೇಳಬಹುದು’.</p>.<p>‘ಕೇಳಬಹುದು, ತಮಗೆ ಕಾಟ ಕೊಟ್ಟವರಿಗೆ ಪಾಠ ಕಲಿಸಲು ಯಡಿಯೂರಪ್ಪನವ್ರಿಗೆ ಇದು ಒಳ್ಳೆ ಅವಕಾಶವಾಗಬಹುದು ಅಲ್ವೇನ್ರೀ?...’ ಎಂದಳು ಸುಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>