ರಾಜ್ಯದಾದ್ಯಂತ ಕೊತ್ತಂಬರಿ ಸೊಪ್ಪಿಗೆ ಸಿಕ್ಕ ದಿಢೀರ್ ಜನಪ್ರಿಯತೆ ಕಂಡು ಕಂಗಾಲಾದ ಕರಿಬೇವು, ಪುದೀನಾ, ಮೆಂತ್ಯೆ ಸೊಪ್ಪುಗಳೆಲ್ಲ ತುರ್ತು ಸಭೆ ಸೇರಿದವು. ‘ಏನಿದು ಅನ್ಯಾಯ? ಯಾರ ಬಾಯಲ್ಲಿ ಕೇಳಿದ್ರೂ ಬರೀ ಕೊತ್ತಿಮಿರಿ ಕೊತ್ತಿಮಿರಿ... ನಮಗೇನು ಬೆಲೆನೇ ಇಲ್ವ?’ ಕರಿಬೇವು ಸಿಡಿಮಿಡಿಗೊಂಡಿತು.
‘ಕೊತ್ತಂಬರಿ ಹೋಗಿ ಕೊತ್ತಿಮಿರಿ ಆಗಿದೆ? ಹೆಸರು ಬೇರೆ ಬದಲು! ಜುಜುಬಿ ತಿಂಡಿ ಮೇಲೆ ಉದುರಿಸೋ ಅದಕ್ಕೇ ಇಷ್ಟಿರಬೇಕಾದ್ರೆ ಅಡುಗೆಗೆ ಬಳಸೋ ನಮಗೆಷ್ಟಿರಬೇಕು...’ ಮೆಂತ್ಯೆ ಕೂಡ ಆಕ್ರೋಶ ವ್ಯಕ್ತಪಡಿಸಿತು.
‘ನನಗಿರೋ ಘಮ, ಔಷಧೀಯ ಗುಣ ಅದಕ್ಕೆಲ್ಲಿದೇರಿ?’ ಪುದೀನಾಕ್ಕೂ ಕೋಪ.