<p>ರಾಜ್ಯದಾದ್ಯಂತ ಕೊತ್ತಂಬರಿ ಸೊಪ್ಪಿಗೆ ಸಿಕ್ಕ ದಿಢೀರ್ ಜನಪ್ರಿಯತೆ ಕಂಡು ಕಂಗಾಲಾದ ಕರಿಬೇವು, ಪುದೀನಾ, ಮೆಂತ್ಯೆ ಸೊಪ್ಪುಗಳೆಲ್ಲ ತುರ್ತು ಸಭೆ ಸೇರಿದವು. ‘ಏನಿದು ಅನ್ಯಾಯ? ಯಾರ ಬಾಯಲ್ಲಿ ಕೇಳಿದ್ರೂ ಬರೀ ಕೊತ್ತಿಮಿರಿ ಕೊತ್ತಿಮಿರಿ... ನಮಗೇನು ಬೆಲೆನೇ ಇಲ್ವ?’ ಕರಿಬೇವು ಸಿಡಿಮಿಡಿಗೊಂಡಿತು.</p>.<p>‘ಕೊತ್ತಂಬರಿ ಹೋಗಿ ಕೊತ್ತಿಮಿರಿ ಆಗಿದೆ? ಹೆಸರು ಬೇರೆ ಬದಲು! ಜುಜುಬಿ ತಿಂಡಿ ಮೇಲೆ ಉದುರಿಸೋ ಅದಕ್ಕೇ ಇಷ್ಟಿರಬೇಕಾದ್ರೆ ಅಡುಗೆಗೆ ಬಳಸೋ ನಮಗೆಷ್ಟಿರಬೇಕು...’ ಮೆಂತ್ಯೆ ಕೂಡ ಆಕ್ರೋಶ ವ್ಯಕ್ತಪಡಿಸಿತು.</p>.<p>‘ನನಗಿರೋ ಘಮ, ಔಷಧೀಯ ಗುಣ ಅದಕ್ಕೆಲ್ಲಿದೇರಿ?’ ಪುದೀನಾಕ್ಕೂ ಕೋಪ.</p>.<p>‘ಅಂದ್ರೆ? ನನ್ ಘಮ ಏನ್ ಕಡಿಮೆನಾ?’ ಕರಿಬೇವು ಆಕ್ಷೇಪಿಸಿದಾಗ, ‘ಸುಮ್ನಿರಪ್ಪ, ನಿನ್ಯಾರು ತಿಂತಾರೆ? ತಟ್ಟೆಯಿಂದ ತೆಗೆದು ಹಾಕ್ತಾರೆ’ ಪುದೀನಾ ತಿರುಗೇಟು ಕೊಟ್ಟಿತು.</p>.<p>‘ಈಗ ನಮ್ ನಮ್ಮಲ್ಲಿ ಜಗಳ ಬೇಡ. ಈ ಅನ್ಯಾಯದ ಬಗ್ಗೆ ರಾಜಾಹುಲಿಗೆ ದೂರು ಕೊಟ್ರೆ ಹೆಂಗೆ?’ ಮೆಂತ್ಯೆ ಪ್ರಶ್ನೆ.</p>.<p>‘ಅಯ್ಯೋ, ನಿನ್ನೆನೇ ದೂರು ಕೊಟ್ಟೆ. ಆದ್ರೆ ರಾಜಾಹುಲಿ ಸಾಹೇಬ್ರು ಕೊತ್ತಿಮಿರಿ ವಿಷಯ ಬಿಟ್ಟು, ಅರ್ಧ ರಾತ್ರೀಲಿ ಅದನ್ನ ಮಾರ್ತಿದ್ದೋರು ಯಾರು, ಅವರಿಗೆ ಪರ್ಮಿಶನ್ ಕೊಟ್ಟಿದ್ದು ಯಾರು, ಎಳ್ಕಂಡ್ ಬರ್ರಿ ಅವನನ್ನ ಅಂತ ರಾಂಗಾದ್ರು’ ಕರಿಬೇವು ಬೇಸರ ವ್ಯಕ್ತಪಡಿಸಿತು.</p>.<p>‘ಹೌದಾ? ನಮ್ ‘ಬಂಡೆ’ ಸಾಹೇಬ್ರಿಗೆ ಹೇಳ್ಬೇಕಿತ್ತು?’</p>.<p>‘ಹೇಳಿದೆ, ಅವ್ರು ಕೊತ್ತಿಮಿರಿ ಪರವಾಗೇ ಮಾತಾಡಿದ್ರು. ಅರ್ಧ ರಾತ್ರೀಲಿ ಕೊತ್ತಿಮಿರಿ ಯಾಕ್ರೀ ಮಾರಬಾರ್ದು? ಏನ್ ತಪ್ಪು? ನೀವು ಕೊತ್ತಿಮಿರೀಲಿ ಕಲ್ಲು ಹುಡುಕ್ತೀರಾ?’ ಅಂತ ಎಗರಾಡಿದ್ರು.</p>.<p>‘ಥೋತ್ತೆರಿ, ಹೋಗ್ಲಿ ನಮ್ ಕುಮಾರಣ್ಣಂಗಾದ್ರೂ ಹೇಳಿದ್ರೆ ಬೆಂಡೆತ್ತಿರೋರು...’</p>.<p>‘ಅವರಿಗೂ ಹೇಳ್ದೆ ಬಿಡಪ್ಪ...’</p>.<p>‘ಹೌದಾ? ಏನಂದ್ರು?’</p>.<p>‘ಈ ಕೊತ್ತಿಮಿರಿಗೆ ಇಷ್ಟು ಡಿಮ್ಯಾಂಡ್ ಬರುತ್ತೆ ಅಂತ ಎರಡು ವರ್ಷದ ಮೊದ್ಲೇ ನಂಗೆ ಗೊತ್ತಿತ್ತು ಅಂದ್ರು!’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯದಾದ್ಯಂತ ಕೊತ್ತಂಬರಿ ಸೊಪ್ಪಿಗೆ ಸಿಕ್ಕ ದಿಢೀರ್ ಜನಪ್ರಿಯತೆ ಕಂಡು ಕಂಗಾಲಾದ ಕರಿಬೇವು, ಪುದೀನಾ, ಮೆಂತ್ಯೆ ಸೊಪ್ಪುಗಳೆಲ್ಲ ತುರ್ತು ಸಭೆ ಸೇರಿದವು. ‘ಏನಿದು ಅನ್ಯಾಯ? ಯಾರ ಬಾಯಲ್ಲಿ ಕೇಳಿದ್ರೂ ಬರೀ ಕೊತ್ತಿಮಿರಿ ಕೊತ್ತಿಮಿರಿ... ನಮಗೇನು ಬೆಲೆನೇ ಇಲ್ವ?’ ಕರಿಬೇವು ಸಿಡಿಮಿಡಿಗೊಂಡಿತು.</p>.<p>‘ಕೊತ್ತಂಬರಿ ಹೋಗಿ ಕೊತ್ತಿಮಿರಿ ಆಗಿದೆ? ಹೆಸರು ಬೇರೆ ಬದಲು! ಜುಜುಬಿ ತಿಂಡಿ ಮೇಲೆ ಉದುರಿಸೋ ಅದಕ್ಕೇ ಇಷ್ಟಿರಬೇಕಾದ್ರೆ ಅಡುಗೆಗೆ ಬಳಸೋ ನಮಗೆಷ್ಟಿರಬೇಕು...’ ಮೆಂತ್ಯೆ ಕೂಡ ಆಕ್ರೋಶ ವ್ಯಕ್ತಪಡಿಸಿತು.</p>.<p>‘ನನಗಿರೋ ಘಮ, ಔಷಧೀಯ ಗುಣ ಅದಕ್ಕೆಲ್ಲಿದೇರಿ?’ ಪುದೀನಾಕ್ಕೂ ಕೋಪ.</p>.<p>‘ಅಂದ್ರೆ? ನನ್ ಘಮ ಏನ್ ಕಡಿಮೆನಾ?’ ಕರಿಬೇವು ಆಕ್ಷೇಪಿಸಿದಾಗ, ‘ಸುಮ್ನಿರಪ್ಪ, ನಿನ್ಯಾರು ತಿಂತಾರೆ? ತಟ್ಟೆಯಿಂದ ತೆಗೆದು ಹಾಕ್ತಾರೆ’ ಪುದೀನಾ ತಿರುಗೇಟು ಕೊಟ್ಟಿತು.</p>.<p>‘ಈಗ ನಮ್ ನಮ್ಮಲ್ಲಿ ಜಗಳ ಬೇಡ. ಈ ಅನ್ಯಾಯದ ಬಗ್ಗೆ ರಾಜಾಹುಲಿಗೆ ದೂರು ಕೊಟ್ರೆ ಹೆಂಗೆ?’ ಮೆಂತ್ಯೆ ಪ್ರಶ್ನೆ.</p>.<p>‘ಅಯ್ಯೋ, ನಿನ್ನೆನೇ ದೂರು ಕೊಟ್ಟೆ. ಆದ್ರೆ ರಾಜಾಹುಲಿ ಸಾಹೇಬ್ರು ಕೊತ್ತಿಮಿರಿ ವಿಷಯ ಬಿಟ್ಟು, ಅರ್ಧ ರಾತ್ರೀಲಿ ಅದನ್ನ ಮಾರ್ತಿದ್ದೋರು ಯಾರು, ಅವರಿಗೆ ಪರ್ಮಿಶನ್ ಕೊಟ್ಟಿದ್ದು ಯಾರು, ಎಳ್ಕಂಡ್ ಬರ್ರಿ ಅವನನ್ನ ಅಂತ ರಾಂಗಾದ್ರು’ ಕರಿಬೇವು ಬೇಸರ ವ್ಯಕ್ತಪಡಿಸಿತು.</p>.<p>‘ಹೌದಾ? ನಮ್ ‘ಬಂಡೆ’ ಸಾಹೇಬ್ರಿಗೆ ಹೇಳ್ಬೇಕಿತ್ತು?’</p>.<p>‘ಹೇಳಿದೆ, ಅವ್ರು ಕೊತ್ತಿಮಿರಿ ಪರವಾಗೇ ಮಾತಾಡಿದ್ರು. ಅರ್ಧ ರಾತ್ರೀಲಿ ಕೊತ್ತಿಮಿರಿ ಯಾಕ್ರೀ ಮಾರಬಾರ್ದು? ಏನ್ ತಪ್ಪು? ನೀವು ಕೊತ್ತಿಮಿರೀಲಿ ಕಲ್ಲು ಹುಡುಕ್ತೀರಾ?’ ಅಂತ ಎಗರಾಡಿದ್ರು.</p>.<p>‘ಥೋತ್ತೆರಿ, ಹೋಗ್ಲಿ ನಮ್ ಕುಮಾರಣ್ಣಂಗಾದ್ರೂ ಹೇಳಿದ್ರೆ ಬೆಂಡೆತ್ತಿರೋರು...’</p>.<p>‘ಅವರಿಗೂ ಹೇಳ್ದೆ ಬಿಡಪ್ಪ...’</p>.<p>‘ಹೌದಾ? ಏನಂದ್ರು?’</p>.<p>‘ಈ ಕೊತ್ತಿಮಿರಿಗೆ ಇಷ್ಟು ಡಿಮ್ಯಾಂಡ್ ಬರುತ್ತೆ ಅಂತ ಎರಡು ವರ್ಷದ ಮೊದ್ಲೇ ನಂಗೆ ಗೊತ್ತಿತ್ತು ಅಂದ್ರು!’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>