‘ಅವ್ನ ಕೈ ಮುರಿದ ತೀರತೈನಿ. ಶ್ಯಾಣ್ಯಾ ಆಗಲಿ ಅಂತಹೇಳಿ, ದಿನಾ ಬಂಡಿ ತುಪ್ಪಾ ತಿನ್ಸತಿದ್ದಿ. ತಿಂದು ಬಲಂಡ್ ಆಗಿ ಮೈ ಬೆಳಿಸ್ಯಾನ್. ಆದ್ರ ತಲಿಯಾಗ ಹೆಂಡಿ ತುಂಬೇತಿ. ಕೈಯಿಲ್ಲದ ಬಡವರ ಹುಡುಗ ಕಾಲಿನಿಂದ ಪರೀಕ್ಷೆ ಬರೆದು ಡಿಸ್ಟಿಂಕ್ಷನ್ನಲ್ಲಿ ಪಾಸ್ ಆಗ್ಯಾನ್. ಮನೆ ಕೆಲಸದಾಕಿ ಮಗ ಗೌಂಡಿ ಕೆಲಸ ಮಾಡುತ್ತ ಓದಿ ಹೆಮ್ಮೆಯ ಸಾಧನೆ ಮಾಡ್ಯಾನ್. ಸ್ವತಃ ಮಂತ್ರಿಗಳೇ ಅವನ ಜೋಪಡಿಗೆ ಹೋಗಿ ಹಾರ ಹಾಕಿ, ಬಹುಮಾನ ಕೊಟ್ಟು ಸನ್ಮಾನಿಸ್ಯಾರ್. ಇವನಿಗೆ ಬೆಣ್ಣೆ ತುಪ್ಪ ತಿನಿಸಿ, ಟ್ಯೂಷನ್ ಕೊಡಿಸಿ, ಬೇಕಾದಷ್ಟು ಸವಲತ್ತು ಮಾಡಿಕೊಟ್ಟರೂ ಪರೀಕ್ಷೆಯಲ್ಲಿ ಫೇಲ್ ಆಗಿ ನನ್ನ ಮರ್ಯಾದೆ ತೆಗೆದಾನ್’ ಎಂದು ಮಲ್ಲೇಶಿ ಉರಿದು ಬಿದ್ದ.