<p>ಎಲ್ಲಾ ಮಾದರಿಯ ಕ್ರಿಕೆಟ್ಗೆ ಶಂಕ್ರಿ ವಿದಾಯ ಹೇಳಿದ್ದ.</p>.<p>‘ಕ್ರಿಕೆಟ್ ಬಗ್ಗೆ ನಿನಗಿನ್ನೂ ಏಜು, ಕ್ರೇಜು ಉಳಿದಿದೆ. ನಿರ್ಧಾರ ವಾಪಸ್ ತಗೊ...’ ಗೆಳೆಯ ಗೋಪಾಲಿ ಮನವೊಲಿಸಲೆತ್ನಿಸಿದ.</p>.<p>‘ಆರ್ಸಿಬಿ ಕಪ್ ಗೆದ್ದ ನಂತರದ ಬೆಳವಣಿಗೆ ಕ್ರಿಕೆಟ್ ಬಗ್ಗೆ ಜಿಗುಪ್ಸೆ ಮೂಡಿಸಿದೆ’ ಶಂಕ್ರಿಗೆ ಬೇಸರ.</p>.<p>‘ನೀನು ಆಟಗಾರನಲ್ಲ, ಕ್ರಿಕೆಟ್ ನೋಟಗಾರ. ನಿನ್ನಂಥವರೇ ವಿದಾಯ ಹೇಳಿಬಿಟ್ಟರೆ ಕ್ರಿಕೆಟ್ ಉಳಿಯುತ್ತಾ?’</p>.<p>‘11 ಜನ ಗೆದ್ದ ಕಪ್ಗೆ 11 ಅಭಿಮಾನಿಗಳು ಬಲಿಯಾದರು. ಗೆದ್ದವರಿಗೂ ಆನಂದ ಕೊಡಲಿಲ್ಲ, ನಾವೂ ಸಂಭ್ರಮಪಡಲಿಲ್ಲ, ಛೇ...’</p>.<p>‘ಕಪ್ ನಮ್ದೆ, ಕಪ್ ನಮ್ದೆ ಅಂತ ನಾವೇ ಆತುರಪಟ್ವಿ, ತಪ್ ನಮ್ದೇ...’ ಸುಮಿ ಕಾಫಿ ತಂದುಕೊಟ್ಟಳು.</p>.<p>‘ನಮಗೇನೋ ಆತುರವಿತ್ತು. ಆರ್ಸಿಬಿಗೆ ಕಪ್ ಗೆಲ್ಲುವ ಅವಸರವೇನಿತ್ತು? 18 ವರ್ಷದ ಜೊತೆಗೆ ಇನ್ನಷ್ಟು ವರ್ಷ ತೆಪ್ಪಗಿರಬೇಕಾಗಿತ್ತು, ತಪ್ ಅವರ್ದೇ...’ ಅಂದ ಗೋಪಾಲಿ.</p>.<p>‘ಮುಂದಿನ ವರ್ಷ ಆರ್ಸಿಬಿ ಕಪ್ ಗೆದ್ದಾಗ ಸಂಭ್ರಮಿಸೋಣ ಬಿಡು’.</p>.<p>‘ಇಷ್ಟೆಲ್ಲಾ ಅವಾಂತರ ಆಗಿರುವಾಗ ಆರ್ಸಿಬಿಗೆ ಕಪ್ ಗೆಲ್ಲೋ ಹುಮ್ಮಸ್ಸು ಬರುತ್ತಾ?’</p>.<p>‘ಕಪ್ ಗೆಲ್ಲೋದಿರಲಿ, ಅಭಿಮಾನಿಗಳ ಉನ್ಮಾದಕ್ಕೆ ಹೆದರಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್ ಆಡೋದಿಲ್ಲ, ಇಲ್ಲಿ ಆಡಬೇಕಾದ ಮ್ಯಾಚ್ಗಳನ್ನು ತಟಸ್ಥ ಸ್ಥಳದಲ್ಲಿ ಆಡ್ತೀವಿ ಅಂತ ಆರ್ಸಿಬಿ ತಂಡ ಹಟ ಮಾಡಬಹುದು’.</p>.<p>‘ಅಭಿಮಾನಿ ಪ್ರೇಕ್ಷಕರನ್ನು ಸ್ಟೇಡಿಯಂನಿಂದ ಹೊರಗಿಟ್ಟು, ಸಿ.ಸಿ.ಟಿ.ವಿ. ಕ್ಯಾಮೆರಾ, ಟಿ.ವಿ. ಕ್ಯಾಮೆರಾ ಕಾವಲಿನಲ್ಲಿ ಆಟವಾಡಲು ಅವಕಾಶ ಮಾಡಿಕೊಡಬಹುದು’.</p>.<p>‘ಶಿಳ್ಳೆ, ಚಪ್ಪಾಳೆ ಹೊಡೆಯೊ ಪ್ರೇಕ್ಷಕರಿಲ್ಲದಿದ್ದರೆ ಆಟಗಾರರಿಗೆ ಬೌಂಡರಿ, ಸಿಕ್ಸರ್ ಬಾರಿಸಲು ಮೂಡ್ ಬರೊಲ್ಲ, ಸಿಂಗಲ್ಸ್ ಆಡಿಕೊಂಡು ಮ್ಯಾಚ್ ಮುಗುಸ್ತಾರೆ’.</p>.<p>‘ಇನ್ನು ಮುಂದೆ ಆರ್ಸಿಬಿ ಕಪ್ ಗೆದ್ದರೆ ಸಾರ್ವಜನಿಕ ಸೆಲೆಬ್ರೇಷನ್ ನಿರ್ಬಂಧಿಸಿ ಮನೆಗಳಲ್ಲೇ ಸಂಭ್ರಮ ಆಚರಿಸಿಕೊಳ್ಳುವಂತೆ ಸರ್ಕಾರ ಎಚ್ಚರಿಕೆ ವಹಿಸುತ್ತದೆ’ ಎಂದು ಹೇಳಿ ಗೋಪಾಲಿ ಹೊರಟ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಎಲ್ಲಾ ಮಾದರಿಯ ಕ್ರಿಕೆಟ್ಗೆ ಶಂಕ್ರಿ ವಿದಾಯ ಹೇಳಿದ್ದ.</p>.<p>‘ಕ್ರಿಕೆಟ್ ಬಗ್ಗೆ ನಿನಗಿನ್ನೂ ಏಜು, ಕ್ರೇಜು ಉಳಿದಿದೆ. ನಿರ್ಧಾರ ವಾಪಸ್ ತಗೊ...’ ಗೆಳೆಯ ಗೋಪಾಲಿ ಮನವೊಲಿಸಲೆತ್ನಿಸಿದ.</p>.<p>‘ಆರ್ಸಿಬಿ ಕಪ್ ಗೆದ್ದ ನಂತರದ ಬೆಳವಣಿಗೆ ಕ್ರಿಕೆಟ್ ಬಗ್ಗೆ ಜಿಗುಪ್ಸೆ ಮೂಡಿಸಿದೆ’ ಶಂಕ್ರಿಗೆ ಬೇಸರ.</p>.<p>‘ನೀನು ಆಟಗಾರನಲ್ಲ, ಕ್ರಿಕೆಟ್ ನೋಟಗಾರ. ನಿನ್ನಂಥವರೇ ವಿದಾಯ ಹೇಳಿಬಿಟ್ಟರೆ ಕ್ರಿಕೆಟ್ ಉಳಿಯುತ್ತಾ?’</p>.<p>‘11 ಜನ ಗೆದ್ದ ಕಪ್ಗೆ 11 ಅಭಿಮಾನಿಗಳು ಬಲಿಯಾದರು. ಗೆದ್ದವರಿಗೂ ಆನಂದ ಕೊಡಲಿಲ್ಲ, ನಾವೂ ಸಂಭ್ರಮಪಡಲಿಲ್ಲ, ಛೇ...’</p>.<p>‘ಕಪ್ ನಮ್ದೆ, ಕಪ್ ನಮ್ದೆ ಅಂತ ನಾವೇ ಆತುರಪಟ್ವಿ, ತಪ್ ನಮ್ದೇ...’ ಸುಮಿ ಕಾಫಿ ತಂದುಕೊಟ್ಟಳು.</p>.<p>‘ನಮಗೇನೋ ಆತುರವಿತ್ತು. ಆರ್ಸಿಬಿಗೆ ಕಪ್ ಗೆಲ್ಲುವ ಅವಸರವೇನಿತ್ತು? 18 ವರ್ಷದ ಜೊತೆಗೆ ಇನ್ನಷ್ಟು ವರ್ಷ ತೆಪ್ಪಗಿರಬೇಕಾಗಿತ್ತು, ತಪ್ ಅವರ್ದೇ...’ ಅಂದ ಗೋಪಾಲಿ.</p>.<p>‘ಮುಂದಿನ ವರ್ಷ ಆರ್ಸಿಬಿ ಕಪ್ ಗೆದ್ದಾಗ ಸಂಭ್ರಮಿಸೋಣ ಬಿಡು’.</p>.<p>‘ಇಷ್ಟೆಲ್ಲಾ ಅವಾಂತರ ಆಗಿರುವಾಗ ಆರ್ಸಿಬಿಗೆ ಕಪ್ ಗೆಲ್ಲೋ ಹುಮ್ಮಸ್ಸು ಬರುತ್ತಾ?’</p>.<p>‘ಕಪ್ ಗೆಲ್ಲೋದಿರಲಿ, ಅಭಿಮಾನಿಗಳ ಉನ್ಮಾದಕ್ಕೆ ಹೆದರಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್ ಆಡೋದಿಲ್ಲ, ಇಲ್ಲಿ ಆಡಬೇಕಾದ ಮ್ಯಾಚ್ಗಳನ್ನು ತಟಸ್ಥ ಸ್ಥಳದಲ್ಲಿ ಆಡ್ತೀವಿ ಅಂತ ಆರ್ಸಿಬಿ ತಂಡ ಹಟ ಮಾಡಬಹುದು’.</p>.<p>‘ಅಭಿಮಾನಿ ಪ್ರೇಕ್ಷಕರನ್ನು ಸ್ಟೇಡಿಯಂನಿಂದ ಹೊರಗಿಟ್ಟು, ಸಿ.ಸಿ.ಟಿ.ವಿ. ಕ್ಯಾಮೆರಾ, ಟಿ.ವಿ. ಕ್ಯಾಮೆರಾ ಕಾವಲಿನಲ್ಲಿ ಆಟವಾಡಲು ಅವಕಾಶ ಮಾಡಿಕೊಡಬಹುದು’.</p>.<p>‘ಶಿಳ್ಳೆ, ಚಪ್ಪಾಳೆ ಹೊಡೆಯೊ ಪ್ರೇಕ್ಷಕರಿಲ್ಲದಿದ್ದರೆ ಆಟಗಾರರಿಗೆ ಬೌಂಡರಿ, ಸಿಕ್ಸರ್ ಬಾರಿಸಲು ಮೂಡ್ ಬರೊಲ್ಲ, ಸಿಂಗಲ್ಸ್ ಆಡಿಕೊಂಡು ಮ್ಯಾಚ್ ಮುಗುಸ್ತಾರೆ’.</p>.<p>‘ಇನ್ನು ಮುಂದೆ ಆರ್ಸಿಬಿ ಕಪ್ ಗೆದ್ದರೆ ಸಾರ್ವಜನಿಕ ಸೆಲೆಬ್ರೇಷನ್ ನಿರ್ಬಂಧಿಸಿ ಮನೆಗಳಲ್ಲೇ ಸಂಭ್ರಮ ಆಚರಿಸಿಕೊಳ್ಳುವಂತೆ ಸರ್ಕಾರ ಎಚ್ಚರಿಕೆ ವಹಿಸುತ್ತದೆ’ ಎಂದು ಹೇಳಿ ಗೋಪಾಲಿ ಹೊರಟ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>