<p>‘ರಾಜಧಾನೀಲಿ ದಿನದಿನಕ್ಕೂ ಕೊಲೆ, ಸುಲಿಗೆ, ದಬಾವಣೆ, ಹಲ್ಲೆ, ಅಕ್ರಮ, ಲಂಚ ಪ್ರಕರಣ, ಬುಕ್ಕಿಗಳ ಗ್ಯಾಂಬ್ಲಿಂಗ್ ಜಾಸ್ತಿಯಾಯ್ತಾ ಅದೆ’ ಅಂತ ಕೊರಗಿದೆ.</p>.<p>‘ಅದೀಯೇ! ನಿಗಮ, ಮಂಡಳಿಗಳ ಕಾಸು ಹೆಂಡದಂಗಡಿ, ಚಿನ್ನದ ಅಂಗಡಿ ಸೇರ್ಯದಂತೆ. ನಿಗಮದ ಕಾಸು ಯಾರ ಮನೇಲೋ ಸಿಕ್ತಂತೆ. ಇದು ಯುಕ್ತಿ ಯೋಜನೆ ಇರಬಕು’ ಯಂಟಪ್ಪಣ್ಣ ಬೆರಗಾಯ್ತು.</p>.<p>‘ಜನ ಮಳ್ಳಿಯಂಗಿದ್ರೆ ಇನ್ನೇನಾದದು? ಗುಂಡಿ ಬಿದ್ದು ಗಟಾರಾಗಿರ ರೋಡು ಬಿಬಿಎಂಪಿಯೋರು ಮುಚ್ತಿಲ್ಲ. ಜನ ಮಾತ್ರ ‘ಹಳೆ ಕಲ್ಲು, ಹೊಸ ಬಿಲ್ಲು’ ಅಂತ ನಗಾಡಿಕ್ಯಂಡು ಸುಮ್ಮಗಾಯ್ತರೆ. ಪಾಪದ ಪೋಲೀಸಿನೋರು ಸವಾರರ ಕಷ್ಟ ನೋಡನಾರದೇ ತ್ಯಾಪೆ ಹಾಕಬೇಕಾಗ್ಯದೆ. ಅಧಿಕಾರಸ್ಥರು ಜನದ ಕಷ್ಟ ನೀಸದು ಬುಟ್ಟು ಪೆಟ್ರೋಲ್-ಡೀಸೆಲ್ ರೇಟ್ ಏರಿಸೋ ಕ್ಯಾಮೆ ಮಾಡ್ತಾವ್ರೆ’ ಚಂದ್ರು ಗರಂ ಆದ.</p>.<p>‘ಮೊನ್ನೆ ‘ಜನ ಯಂಗೆ ಎದ್ದೇಳಬಕು’ ಅಂತ ಕರೆ ಕೊಟ್ಟವ್ರೆ ರಾಜಕಾರಣಿಗಳು. ಜನ ಮಾತ್ರ ‘ಟೈಂ ವೇಸ್ಟು. ನೋಡನ ತಡೀರಿ ಆಮೇಲೆ. ಈಗ ಆಪೀಸಿಗೋಗ್ಬಕು’ ಅಂತ ಹಂಗೆ ಕುಕಂತರೆ’ ಯಂಟಪ್ಪಣ್ಣ ಹೇಳಿತು.</p>.<p>‘ರಾಜಕಾರಣಿಗಳ ಗ್ಯಪ್ತಿಗೆ ತಕ್ಕಬ್ಯಾಡ ಕನೋ. ನೆನೆಸಿಗ್ಯಂಡೇಟಿಗೆ ‘ಹೋದಾ ರಾಜಕಾರಣಿ ಅಂದ್ರೆ ಇಲ್ಲ ಕನಣೈ ಬಂದೆ ವಾಟ್ಸಪ್ ಗವಾಕ್ಷೀಲಿ’ ಅಂತ ಪ್ರತ್ಯಕ್ಷ ಆಯ್ತವೆ’ ಅಂತ ತುರೇಮಣೆ ಚುಚ್ಚಿದರು.</p>.<p>‘ಸರಿ ಕಾ ಬುಡಿ ಸಾ. ಇಂಥಾ ಅವಕಾಶವಾದಿ ರಾಜಕೀಯ ದೌರ್ಜನ್ಯದಿಂದ ಪಾರಾಗದು ಯಂಗೇ ಅಂತ?’ ಪರಿಹಾರ ಕೇಳಿದೆ.</p>.<p>‘ರಾಜಕೀಯದವುಕ್ಕೆ ಮೂರುಭಂಗದ ಭಯವೇ ಇಲ್ಲಾಗ್ಯದೆ’ ಯಂಟಪ್ಪಣ್ಣನಿಗೆ ಬೇಜಾರಾಯ್ತು.</p>.<p>‘ಏನಾದ್ರೂ ಉಪಾಯ ವೇದಾಂತ ಹೇಳಿ ಸಾ’ ಅಂತ ಗೋಗರೆದೆ.</p>.<p>‘ಇದು ಕಲಿಗಾಲ ಕಯ್ಯಾ. ಕರ್ಮಕ್ಕೆ ಬಲ ಜಾಸ್ತಿ. ಅವಸಾನ ಪರ್ವದಲ್ಲಿ ಕರ್ಮಗೇಡಿಗಳಿಗೇ ಭವಿಷ್ಯ ಅಂತ ಹೇಳ್ಯದೆ. ಇದು ಹಿಂಗೇ ನಡೀತಿದ್ರೆ ಬೆಂಗಳೂರು ಹೆಸರನ್ನ ಗ್ಯಾಂಬಲೂರು ಅಂತ ಬದ್ಲಾಸಬೇಕಾಯ್ತದೆ’ ತುರೇಮಣೆ ಉವಾಚ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ರಾಜಧಾನೀಲಿ ದಿನದಿನಕ್ಕೂ ಕೊಲೆ, ಸುಲಿಗೆ, ದಬಾವಣೆ, ಹಲ್ಲೆ, ಅಕ್ರಮ, ಲಂಚ ಪ್ರಕರಣ, ಬುಕ್ಕಿಗಳ ಗ್ಯಾಂಬ್ಲಿಂಗ್ ಜಾಸ್ತಿಯಾಯ್ತಾ ಅದೆ’ ಅಂತ ಕೊರಗಿದೆ.</p>.<p>‘ಅದೀಯೇ! ನಿಗಮ, ಮಂಡಳಿಗಳ ಕಾಸು ಹೆಂಡದಂಗಡಿ, ಚಿನ್ನದ ಅಂಗಡಿ ಸೇರ್ಯದಂತೆ. ನಿಗಮದ ಕಾಸು ಯಾರ ಮನೇಲೋ ಸಿಕ್ತಂತೆ. ಇದು ಯುಕ್ತಿ ಯೋಜನೆ ಇರಬಕು’ ಯಂಟಪ್ಪಣ್ಣ ಬೆರಗಾಯ್ತು.</p>.<p>‘ಜನ ಮಳ್ಳಿಯಂಗಿದ್ರೆ ಇನ್ನೇನಾದದು? ಗುಂಡಿ ಬಿದ್ದು ಗಟಾರಾಗಿರ ರೋಡು ಬಿಬಿಎಂಪಿಯೋರು ಮುಚ್ತಿಲ್ಲ. ಜನ ಮಾತ್ರ ‘ಹಳೆ ಕಲ್ಲು, ಹೊಸ ಬಿಲ್ಲು’ ಅಂತ ನಗಾಡಿಕ್ಯಂಡು ಸುಮ್ಮಗಾಯ್ತರೆ. ಪಾಪದ ಪೋಲೀಸಿನೋರು ಸವಾರರ ಕಷ್ಟ ನೋಡನಾರದೇ ತ್ಯಾಪೆ ಹಾಕಬೇಕಾಗ್ಯದೆ. ಅಧಿಕಾರಸ್ಥರು ಜನದ ಕಷ್ಟ ನೀಸದು ಬುಟ್ಟು ಪೆಟ್ರೋಲ್-ಡೀಸೆಲ್ ರೇಟ್ ಏರಿಸೋ ಕ್ಯಾಮೆ ಮಾಡ್ತಾವ್ರೆ’ ಚಂದ್ರು ಗರಂ ಆದ.</p>.<p>‘ಮೊನ್ನೆ ‘ಜನ ಯಂಗೆ ಎದ್ದೇಳಬಕು’ ಅಂತ ಕರೆ ಕೊಟ್ಟವ್ರೆ ರಾಜಕಾರಣಿಗಳು. ಜನ ಮಾತ್ರ ‘ಟೈಂ ವೇಸ್ಟು. ನೋಡನ ತಡೀರಿ ಆಮೇಲೆ. ಈಗ ಆಪೀಸಿಗೋಗ್ಬಕು’ ಅಂತ ಹಂಗೆ ಕುಕಂತರೆ’ ಯಂಟಪ್ಪಣ್ಣ ಹೇಳಿತು.</p>.<p>‘ರಾಜಕಾರಣಿಗಳ ಗ್ಯಪ್ತಿಗೆ ತಕ್ಕಬ್ಯಾಡ ಕನೋ. ನೆನೆಸಿಗ್ಯಂಡೇಟಿಗೆ ‘ಹೋದಾ ರಾಜಕಾರಣಿ ಅಂದ್ರೆ ಇಲ್ಲ ಕನಣೈ ಬಂದೆ ವಾಟ್ಸಪ್ ಗವಾಕ್ಷೀಲಿ’ ಅಂತ ಪ್ರತ್ಯಕ್ಷ ಆಯ್ತವೆ’ ಅಂತ ತುರೇಮಣೆ ಚುಚ್ಚಿದರು.</p>.<p>‘ಸರಿ ಕಾ ಬುಡಿ ಸಾ. ಇಂಥಾ ಅವಕಾಶವಾದಿ ರಾಜಕೀಯ ದೌರ್ಜನ್ಯದಿಂದ ಪಾರಾಗದು ಯಂಗೇ ಅಂತ?’ ಪರಿಹಾರ ಕೇಳಿದೆ.</p>.<p>‘ರಾಜಕೀಯದವುಕ್ಕೆ ಮೂರುಭಂಗದ ಭಯವೇ ಇಲ್ಲಾಗ್ಯದೆ’ ಯಂಟಪ್ಪಣ್ಣನಿಗೆ ಬೇಜಾರಾಯ್ತು.</p>.<p>‘ಏನಾದ್ರೂ ಉಪಾಯ ವೇದಾಂತ ಹೇಳಿ ಸಾ’ ಅಂತ ಗೋಗರೆದೆ.</p>.<p>‘ಇದು ಕಲಿಗಾಲ ಕಯ್ಯಾ. ಕರ್ಮಕ್ಕೆ ಬಲ ಜಾಸ್ತಿ. ಅವಸಾನ ಪರ್ವದಲ್ಲಿ ಕರ್ಮಗೇಡಿಗಳಿಗೇ ಭವಿಷ್ಯ ಅಂತ ಹೇಳ್ಯದೆ. ಇದು ಹಿಂಗೇ ನಡೀತಿದ್ರೆ ಬೆಂಗಳೂರು ಹೆಸರನ್ನ ಗ್ಯಾಂಬಲೂರು ಅಂತ ಬದ್ಲಾಸಬೇಕಾಯ್ತದೆ’ ತುರೇಮಣೆ ಉವಾಚ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>