<p>ಸರ್ವ ಸಮಸ್ಯೆಗೂ ರಿಯಾಯಿತಿ ದರದಲ್ಲಿ ಪರಿಹಾರ ಸೂಚಿಸುವ ಫ್ಯಾಮಿಲಿ ಜ್ಯೋತಿಷಿ ಬಳಿ ಬಂದು ಶಂಕ್ರಿ, ಸುಮಿ ಕೈಮುಗಿದರು. ‘ಏನು ನಿಮ್ಮ ಸಮಸ್ಯೆ?’ ಕೇಳಿದರು ಜ್ಯೋತಿಷಿ.</p>.<p>‘ಸತಿ-ಪತಿ ಕಲಹ...’ ಶಂಕ್ರಿ ಸಂಕಟ ಹೇಳಿಕೊಂಡ.</p>.<p>‘ಎಲ್ಲರ ಮನೆಯ ಕಾಮನ್ ಕಾಯಿಲೆ...’</p>.<p>‘ಗಂಡ ನೆಟ್ಟಗಿದ್ದರೆ ಹೆಂಡತಿ ತೆಪ್ಪಗಿರುತ್ತಾಳೆ ಗುರೂಜಿ, ಇವ್ರಿಗೆ ಬುದ್ಧಿ ಹೇಳಿ...’ ಸುಮಿಗೆ ಸಿಟ್ಟು.</p>.<p>‘ಲೆಕ್ಕಾಚಾರ, ವ್ಯವಹಾರಪ್ರಜ್ಞೆ ಇಲ್ಲ ಅನ್ನುವುದು ಬಿಟ್ಟರೆ ಶಂಕ್ರಿಯವರು ಬುದ್ಧಿವಂತರೇ...’ ಜ್ಯೋತಿಷಿಯ ಸಮರ್ಥನೆ.</p>.<p>‘ದುಡ್ಡಿಲ್ಲ, ಕಾಸಿಲ್ಲ ನನ್ನ ಗಂಡನೂ ಸರದಾರ ಅನ್ನುವಂತಾಗಿದೆ, ಆದಾಯವಿಲ್ಲದ ಗಂಡನನ್ನು ಕಟ್ಟಿಕೊಂಡು...’ ಸುಮಿ ಕಣ್ಣು ಒರೆಸಿಕೊಂಡಳು.</p>.<p>‘ಆರ್ಥಿಕ ಸಂಕಷ್ಟ ಗುರೂಜಿ. ಆದಾಯವಿಲ್ಲ, ಇನ್ಕಂನ ಇನ್ಕಮಿಂಗ್ ಕಟ್ಟಾಗಿದೆ, ಎಕಾನಮಿ ಯಡವಟ್ಟಾಗಿದೆ...’ ಶಂಕ್ರಿ ಸೋತು ಹೇಳಿದ.</p>.<p>‘ದುಡಿಯಲಾರದವರು ಜೇಬು ತೂತು ಅಂದರಂತೆ, ದುಡ್ಡಿನ ಸಮಸ್ಯೆಗೆ ದೇವರು ಕಾರಣ ಅಂದುಬಿಟ್ಟರೆ ಸಂಸಾರ ಸಾಗುತ್ತಾ ಗುರೂಜೀ?’</p>.<p>‘ಭಾಗ್ಯ ಕೊಡುವ ಭಗವಂತ ಮುನಿಸಿ<br />ಕೊಂಡಿದ್ದಾನೆ, ಆರ್ಥಿಕ ಸಂಕಷ್ಟಕ್ಕೆ ದೇವರು ಕಾರಣ ಅಂತ ಹಣಕಾಸಿನ ಅಮ್ಮ ನಿರ್ಮಲಮ್ಮ ಹೇಳಿಲ್ವಾ, ಅವರಿಗೇ ಕಷ್ಟ ಬಂದಿರುವಾಗ ಈ ಸಾಮಾನ್ಯ ಗಂಡನಿಗೆ ಬರದಿರುತ್ತದೆಯೇ...’</p>.<p>‘ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿರುವ ದೇವರು ಯಾರು ಹೇಳಿ ಗುರೂಜಿ, ತಕ್ಕ ಪೂಜೆ ಮಾಡ್ತೀನಿ’.</p>.<p>‘ದೇವರು ಯಾವ ರೂಪದಲ್ಲಿರುವನೋ ಹೇಳಲಾಗದು. ನಿರ್ಮಲಮ್ಮನ ಪ್ರಕಾರ ಈಗ ದೇವರು ಕೊರೊನಾ ಅವತಾರದಲ್ಲಿ ಕಷ್ಟ ಕೊಡುತ್ತಿದ್ದಾನಂತೆ’.</p>.<p>‘ಕೊರೊನಾ ದೇವರ ಕೃಪೆ ಪಡೆಯಲು ಪೂಜೆ, ಹೋಮ ಮಾಡಬೇಕೆ, ಮುಡಿ ಕೊಡಬೇಕೆ ಹೇಳಿ’.</p>.<p>‘ಏನೂ ಬೇಡಮ್ಮ, ದೇವರು ಶಾಂತವಾಗುವ<br />ತನಕ ಬಾಯಿಗೆ ಮಾಸ್ಕ್ ಹಾಕಿಕೊಂಡು, ಗಂಡನ ಜೊತೆ ಡಿಸ್ಟೆನ್ಸ್ ಕಾಪಾಡಿಕೊಂಡು<br />ಮೌನ ವ್ರತ ಆಚರಿಸು...’ ಜ್ಯೋತಿಷಿ ಸಲಹೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸರ್ವ ಸಮಸ್ಯೆಗೂ ರಿಯಾಯಿತಿ ದರದಲ್ಲಿ ಪರಿಹಾರ ಸೂಚಿಸುವ ಫ್ಯಾಮಿಲಿ ಜ್ಯೋತಿಷಿ ಬಳಿ ಬಂದು ಶಂಕ್ರಿ, ಸುಮಿ ಕೈಮುಗಿದರು. ‘ಏನು ನಿಮ್ಮ ಸಮಸ್ಯೆ?’ ಕೇಳಿದರು ಜ್ಯೋತಿಷಿ.</p>.<p>‘ಸತಿ-ಪತಿ ಕಲಹ...’ ಶಂಕ್ರಿ ಸಂಕಟ ಹೇಳಿಕೊಂಡ.</p>.<p>‘ಎಲ್ಲರ ಮನೆಯ ಕಾಮನ್ ಕಾಯಿಲೆ...’</p>.<p>‘ಗಂಡ ನೆಟ್ಟಗಿದ್ದರೆ ಹೆಂಡತಿ ತೆಪ್ಪಗಿರುತ್ತಾಳೆ ಗುರೂಜಿ, ಇವ್ರಿಗೆ ಬುದ್ಧಿ ಹೇಳಿ...’ ಸುಮಿಗೆ ಸಿಟ್ಟು.</p>.<p>‘ಲೆಕ್ಕಾಚಾರ, ವ್ಯವಹಾರಪ್ರಜ್ಞೆ ಇಲ್ಲ ಅನ್ನುವುದು ಬಿಟ್ಟರೆ ಶಂಕ್ರಿಯವರು ಬುದ್ಧಿವಂತರೇ...’ ಜ್ಯೋತಿಷಿಯ ಸಮರ್ಥನೆ.</p>.<p>‘ದುಡ್ಡಿಲ್ಲ, ಕಾಸಿಲ್ಲ ನನ್ನ ಗಂಡನೂ ಸರದಾರ ಅನ್ನುವಂತಾಗಿದೆ, ಆದಾಯವಿಲ್ಲದ ಗಂಡನನ್ನು ಕಟ್ಟಿಕೊಂಡು...’ ಸುಮಿ ಕಣ್ಣು ಒರೆಸಿಕೊಂಡಳು.</p>.<p>‘ಆರ್ಥಿಕ ಸಂಕಷ್ಟ ಗುರೂಜಿ. ಆದಾಯವಿಲ್ಲ, ಇನ್ಕಂನ ಇನ್ಕಮಿಂಗ್ ಕಟ್ಟಾಗಿದೆ, ಎಕಾನಮಿ ಯಡವಟ್ಟಾಗಿದೆ...’ ಶಂಕ್ರಿ ಸೋತು ಹೇಳಿದ.</p>.<p>‘ದುಡಿಯಲಾರದವರು ಜೇಬು ತೂತು ಅಂದರಂತೆ, ದುಡ್ಡಿನ ಸಮಸ್ಯೆಗೆ ದೇವರು ಕಾರಣ ಅಂದುಬಿಟ್ಟರೆ ಸಂಸಾರ ಸಾಗುತ್ತಾ ಗುರೂಜೀ?’</p>.<p>‘ಭಾಗ್ಯ ಕೊಡುವ ಭಗವಂತ ಮುನಿಸಿ<br />ಕೊಂಡಿದ್ದಾನೆ, ಆರ್ಥಿಕ ಸಂಕಷ್ಟಕ್ಕೆ ದೇವರು ಕಾರಣ ಅಂತ ಹಣಕಾಸಿನ ಅಮ್ಮ ನಿರ್ಮಲಮ್ಮ ಹೇಳಿಲ್ವಾ, ಅವರಿಗೇ ಕಷ್ಟ ಬಂದಿರುವಾಗ ಈ ಸಾಮಾನ್ಯ ಗಂಡನಿಗೆ ಬರದಿರುತ್ತದೆಯೇ...’</p>.<p>‘ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿರುವ ದೇವರು ಯಾರು ಹೇಳಿ ಗುರೂಜಿ, ತಕ್ಕ ಪೂಜೆ ಮಾಡ್ತೀನಿ’.</p>.<p>‘ದೇವರು ಯಾವ ರೂಪದಲ್ಲಿರುವನೋ ಹೇಳಲಾಗದು. ನಿರ್ಮಲಮ್ಮನ ಪ್ರಕಾರ ಈಗ ದೇವರು ಕೊರೊನಾ ಅವತಾರದಲ್ಲಿ ಕಷ್ಟ ಕೊಡುತ್ತಿದ್ದಾನಂತೆ’.</p>.<p>‘ಕೊರೊನಾ ದೇವರ ಕೃಪೆ ಪಡೆಯಲು ಪೂಜೆ, ಹೋಮ ಮಾಡಬೇಕೆ, ಮುಡಿ ಕೊಡಬೇಕೆ ಹೇಳಿ’.</p>.<p>‘ಏನೂ ಬೇಡಮ್ಮ, ದೇವರು ಶಾಂತವಾಗುವ<br />ತನಕ ಬಾಯಿಗೆ ಮಾಸ್ಕ್ ಹಾಕಿಕೊಂಡು, ಗಂಡನ ಜೊತೆ ಡಿಸ್ಟೆನ್ಸ್ ಕಾಪಾಡಿಕೊಂಡು<br />ಮೌನ ವ್ರತ ಆಚರಿಸು...’ ಜ್ಯೋತಿಷಿ ಸಲಹೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>