<p>‘ಲೇ ತೆಪರ, ಮೊನ್ನಿ ನಿಮ್ ಟೀವ್ಯಾಗೆ, ನಮ್ಮಲ್ಲೇ ಮೊದಲು ಅಂತ ತೋರಿಸ್ತಿದ್ರೆಲ್ಲ, ಆ ಮಾಸ್ಕ್ ಮ್ಯಾನ್ ತಪ್ಪು ಒಪ್ಕಂಡ ಅಂತ ಇಡೀ ದಿನ ಪುಂಗಿದ್ರೆಪ, ಬರೀ ಸುಳ್ಳು...’ ಹರಟೆಕಟ್ಟೆಯಲ್ಲಿ ದುಬ್ಬೀರ ಆಕ್ಷೇಪಿಸಿದ.</p>.<p>‘ಅಯ್ಯೋ, ಈ ತೆಪರನ ಕತಿ ನಿಂಗೊತ್ತಿಲ್ಲ. ಅಲ್ಲಿ 15 ವರ್ಷದ ಹಿಂದೆ ಬಾಲಕಿ ಶವ ಹೂತು ಹಾಕಿದ್ರಂತೆ. ಈಗ ಗುಂಡಿ ಅಗೆದ್ರೆ ಹೆಂಗಸಿನ ಶವ ಸಿಕ್ತಂತೆ. ಅದೆಂಗೆ ಅಂದ್ರೆ, 15 ವರ್ಷದಲ್ಲಿ ಬಾಲಕಿ ದೊಡ್ಡೋಳಾಗಿರಲ್ವ ಅಂತಾನೆ?’ ಗುಡ್ಡೆ ಜೋರಾಗಿ ನಕ್ಕ.</p>.<p>‘ಗುಡ್ಡೆ ಬ್ಯಾಡ ನೋಡು...’ ತೆಪರೇಸಿಗೆ ಸಿಟ್ಟು ಬಂತು.</p>.<p>‘ಶಾಂತಿ ಶಾಂತಿ, ಮೊದ್ಲೇ ಮುಸುಕಿನ ಗುದ್ದಾಟ ನಡೆಸಿರೋ ಸಿಎಂ, ಡಿಸಿಎಂ ಕೈಗೆ ಮೊನ್ನೆ ಅದ್ಯಾರೋ <br />ಗದೆ ಕೊಟ್ಟಂಗೆ ಆಗಬಾರ್ದು. ಆದ್ರೂ ಟೀವಿ ತುಂಬಾ ಅದೇನ್ ತೋರಿಸ್ತೀರಪ, ತೆಲಿ ಚಿಟ್ಟಿಡೀತತಿ...’ ಎಂದಳು <br />ಮಂಜಮ್ಮ.</p>.<p>‘ಆ ಮಾಸ್ಕ್ ಮ್ಯಾನ್ಗೆ ಎಷ್ಟು ಪ್ರಚಾರ ಸಿಕ್ಕೇತಿ ಅಂದ್ರೆ, ನಾಳೇನೆ ಎಲೆಕ್ಷನ್ಗೆ ನಿಂತ್ರೂ ಗೆದ್ದುಬಿಡ್ತಾನೆ ನೋಡು’ ಎಂದ ಕೊಟ್ರ.</p>.<p>‘ಲೇ ತಮಾ... ಅವ್ನು ಎಲ್ರಿಗೂ ಕಾಣಂಗೆ ಮುಖವಾಡ ಹಾಕ್ಕಂಡಿದಾನೆ. ನಮ್ ರಾಜಕಾರಣಿಗಳದ್ದು ಮುಖ ಯಾವುದು, ಮುಖವಾಡ ಯಾವುದು ಗೊತ್ತೇ ಆಗಲ್ಲ...’ ದುಬ್ಬೀರ ನಕ್ಕ.</p>.<p>‘ಈ ತೆಪರ ಅವನ ಟೀವೀಲಿ ಅಂಥೋರ ಮುಖವಾಡ ಕಳಚಲೆ ಅಂದ್ರೆ ಬರೀ ಬುರುಡೆ ಬಿಡ್ತಾನೆ. ಬಿಗ್ ಟ್ವಿಸ್ಟ್ ಅಂತೆ, ಮಹಾ ಎಕ್ಸ್ಕ್ಲೂಸಿವ್ ಅಂತೆ... ಮಣ್ಣಾಂಗಟ್ಟಿ...’ ಗುಡ್ಡೆಗೂ ಸಿಟ್ಟು ಬಂತು.</p>.<p>‘ಲೇ ಗುಡ್ಡೆ, ಜಾಸ್ತಿ ಮಾತಾಡಿದ್ರೆ ಗುಂಡಿ ಅಗೆಯೋವಾಗ ನಿಂದೇ ತೆಲಿ ಬುರುಡೆ ಸಿಕ್ತು ಅಂತ ಬ್ರೇಕಿಂಗ್ ನ್ಯೂಸ್ ಕೊಟ್ ಬಿಡ್ತೀನಿ ನೋಡು...’ ತೆಪರೇಸಿ ಎಚ್ಚರಿಸಿದ.</p>.<p>‘ಅದನ್ನ ಯಾರೂ ನಂಬಲ್ಲ ಬಿಡು’ ಎಂದಳು ಮಂಜಮ್ಮ.</p>.<p>‘ನಂಬಲ್ವಾ? ಯಾಕೆ?’</p>.<p>‘ಯಾಕಂದ್ರೆ ಗುಡ್ಡೆಗೆ ತೆಲಿನೇ ಇಲ್ಲ, ಇನ್ನು ಬುರುಡೆ ಹೆಂಗೆ ಸಿಕ್ತತಿ?’ ಮಂಜಮ್ಮನ ಜೋಕಿಗೆ ಎಲ್ಲರೂ ಗೊಳ್ಳಂತ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಲೇ ತೆಪರ, ಮೊನ್ನಿ ನಿಮ್ ಟೀವ್ಯಾಗೆ, ನಮ್ಮಲ್ಲೇ ಮೊದಲು ಅಂತ ತೋರಿಸ್ತಿದ್ರೆಲ್ಲ, ಆ ಮಾಸ್ಕ್ ಮ್ಯಾನ್ ತಪ್ಪು ಒಪ್ಕಂಡ ಅಂತ ಇಡೀ ದಿನ ಪುಂಗಿದ್ರೆಪ, ಬರೀ ಸುಳ್ಳು...’ ಹರಟೆಕಟ್ಟೆಯಲ್ಲಿ ದುಬ್ಬೀರ ಆಕ್ಷೇಪಿಸಿದ.</p>.<p>‘ಅಯ್ಯೋ, ಈ ತೆಪರನ ಕತಿ ನಿಂಗೊತ್ತಿಲ್ಲ. ಅಲ್ಲಿ 15 ವರ್ಷದ ಹಿಂದೆ ಬಾಲಕಿ ಶವ ಹೂತು ಹಾಕಿದ್ರಂತೆ. ಈಗ ಗುಂಡಿ ಅಗೆದ್ರೆ ಹೆಂಗಸಿನ ಶವ ಸಿಕ್ತಂತೆ. ಅದೆಂಗೆ ಅಂದ್ರೆ, 15 ವರ್ಷದಲ್ಲಿ ಬಾಲಕಿ ದೊಡ್ಡೋಳಾಗಿರಲ್ವ ಅಂತಾನೆ?’ ಗುಡ್ಡೆ ಜೋರಾಗಿ ನಕ್ಕ.</p>.<p>‘ಗುಡ್ಡೆ ಬ್ಯಾಡ ನೋಡು...’ ತೆಪರೇಸಿಗೆ ಸಿಟ್ಟು ಬಂತು.</p>.<p>‘ಶಾಂತಿ ಶಾಂತಿ, ಮೊದ್ಲೇ ಮುಸುಕಿನ ಗುದ್ದಾಟ ನಡೆಸಿರೋ ಸಿಎಂ, ಡಿಸಿಎಂ ಕೈಗೆ ಮೊನ್ನೆ ಅದ್ಯಾರೋ <br />ಗದೆ ಕೊಟ್ಟಂಗೆ ಆಗಬಾರ್ದು. ಆದ್ರೂ ಟೀವಿ ತುಂಬಾ ಅದೇನ್ ತೋರಿಸ್ತೀರಪ, ತೆಲಿ ಚಿಟ್ಟಿಡೀತತಿ...’ ಎಂದಳು <br />ಮಂಜಮ್ಮ.</p>.<p>‘ಆ ಮಾಸ್ಕ್ ಮ್ಯಾನ್ಗೆ ಎಷ್ಟು ಪ್ರಚಾರ ಸಿಕ್ಕೇತಿ ಅಂದ್ರೆ, ನಾಳೇನೆ ಎಲೆಕ್ಷನ್ಗೆ ನಿಂತ್ರೂ ಗೆದ್ದುಬಿಡ್ತಾನೆ ನೋಡು’ ಎಂದ ಕೊಟ್ರ.</p>.<p>‘ಲೇ ತಮಾ... ಅವ್ನು ಎಲ್ರಿಗೂ ಕಾಣಂಗೆ ಮುಖವಾಡ ಹಾಕ್ಕಂಡಿದಾನೆ. ನಮ್ ರಾಜಕಾರಣಿಗಳದ್ದು ಮುಖ ಯಾವುದು, ಮುಖವಾಡ ಯಾವುದು ಗೊತ್ತೇ ಆಗಲ್ಲ...’ ದುಬ್ಬೀರ ನಕ್ಕ.</p>.<p>‘ಈ ತೆಪರ ಅವನ ಟೀವೀಲಿ ಅಂಥೋರ ಮುಖವಾಡ ಕಳಚಲೆ ಅಂದ್ರೆ ಬರೀ ಬುರುಡೆ ಬಿಡ್ತಾನೆ. ಬಿಗ್ ಟ್ವಿಸ್ಟ್ ಅಂತೆ, ಮಹಾ ಎಕ್ಸ್ಕ್ಲೂಸಿವ್ ಅಂತೆ... ಮಣ್ಣಾಂಗಟ್ಟಿ...’ ಗುಡ್ಡೆಗೂ ಸಿಟ್ಟು ಬಂತು.</p>.<p>‘ಲೇ ಗುಡ್ಡೆ, ಜಾಸ್ತಿ ಮಾತಾಡಿದ್ರೆ ಗುಂಡಿ ಅಗೆಯೋವಾಗ ನಿಂದೇ ತೆಲಿ ಬುರುಡೆ ಸಿಕ್ತು ಅಂತ ಬ್ರೇಕಿಂಗ್ ನ್ಯೂಸ್ ಕೊಟ್ ಬಿಡ್ತೀನಿ ನೋಡು...’ ತೆಪರೇಸಿ ಎಚ್ಚರಿಸಿದ.</p>.<p>‘ಅದನ್ನ ಯಾರೂ ನಂಬಲ್ಲ ಬಿಡು’ ಎಂದಳು ಮಂಜಮ್ಮ.</p>.<p>‘ನಂಬಲ್ವಾ? ಯಾಕೆ?’</p>.<p>‘ಯಾಕಂದ್ರೆ ಗುಡ್ಡೆಗೆ ತೆಲಿನೇ ಇಲ್ಲ, ಇನ್ನು ಬುರುಡೆ ಹೆಂಗೆ ಸಿಕ್ತತಿ?’ ಮಂಜಮ್ಮನ ಜೋಕಿಗೆ ಎಲ್ಲರೂ ಗೊಳ್ಳಂತ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>