‘ಮಹಾಮಾರಿ, ಮಹಾಸೋಂಕು... ಇವೆಲ್ಲ ಮತ್ತೆ ಚಾಲೂ ಆದ್ವು ನೋಡು ಮಾಧ್ಯಮದಾಗೆ’ ಎಂದೆ ಮಡದಿ ಕೊಟ್ಟ ಕಾಫಿ ಕುಡಿಯುತ್ತ.
‘ಹೋದ್ಯಾ ಪಿಶಾಚಿ ಅಂದ್ರೆ ಇದೇನ್ರಿ ಮತ್ ಬಂತಲ್ಲ. ಮತ್ತೆ ಮಾಸ್ಕು, ಮಣ್ಣು ಮಸಿ ತೆಲಿನೋವು’.
‘ಕೊರೊನಾ ಸೋಂಕಿನ ಈ ಹೊಸ ಉಪತಳಿ ಡೀಸೆಂಟಂತೆ ಬಿಡು, ಹೆಸರು ನೋಡು ಜೆಎನ್.1 ಅಂತೆ. ಸರಿಗಮಪ ಸೀಸನ್ ಒನ್ ಟೂ ತ್ರೀ ತರ. ಆದ್ರೆ ಹಿಂದೆ ಬಂದಿತ್ತಲ್ಲ ಕೊರೊನಾ, ಅದು ನಿನ್ ತರ, ಡೈರೆಕ್ಟ್ ಅಟ್ಯಾಕ್!’
‘ಏನು, ನನ್ ತರಾನ? ಹೆಂಗೈತಿ ಮೈಯಾಗೆ? ನೀವು ಟಿ.ವಿ ಬಿಟ್ಟು ಪೇಪರ್ ಓದಿ. ನಮ್ ಸಿದ್ರಾಮಣ್ಣ ನೋಡಿ, ಮೋದಿ ಸಾಹೇಬ್ರತ್ರ ಹೆಂಗ್ ನಗ್ತಾ ನಗ್ತ ಮಾತಾಡ್ತದಾರೆ. ಒಳ್ಳೆ ಸುದ್ದಿ ಓದೋದು ಆರೋಗ್ಯಕ್ಕೆ ಒಳ್ಳೇದು’.
‘ಅಲ್ಲ ಮೋದಿ ಸಾಹೇಬ್ರು ನಿಮ್ ಡಿಸಿಎಂ ಡಿ.ಕೆ.ಶಿವಕುಮಾರ್ ಹೆಂಗದಾರೆ ಅಂತಾನೂ ವಿಚಾರಿಸಿದ್ರಂತೆ. ಅದೇನು ಅಷ್ಟ್ ಪ್ರೀತಿ ಅವರ ಮೇಲೆ?’