<p>‘ಅದೇನೋ ಇನ್ವೇಸ್ಟ್ ಕರ್ನಾಟಕ ಅಂತೆ, 10 ಲಕ್ಷ ಕೋಟಿ ದುಡ್ಡು ಹರ್ಕಂಡ್ ಬತ್ತದಂತೆ ಕಣ್ಲಾ’ ಎಂದ ಗುದ್ಲಿಂಗ ಹರಟೆಕಟ್ಟೇಲಿ.</p>.<p>‘ಅದು ಇನ್ವೇಸ್ಟ್ ಅಲ್ಲಲೇ, ಇನ್ವೆಸ್ಟ್ ಕರ್ನಾಟಕ’ ತಿದ್ದಿದ ಮಾಲಿಂಗ. ‘ಆದ್ರೆ ನಮ್ ರಾಜಕೀಯದೋರ್ಗೆ ಉಪ್ಯೋಗ ಆಗೋ ಅಂತದ್ದೇನೂ ಕಂಡಂಗಾಗ್ಲಿಲ್ಲ’ ಎಂದ ಗುದ್ಲಿಂಗ.</p>.<p>‘ದುಡ್ಡು ಬರ್ಬೇಕು ಅಂತ ನೋಟು ಇಂಡಸ್ಟ್ರಿ ಮಾಡಕ್ಕಾಗುತ್ತೇನ್ಲಾ? ಕೂತ್ಕಳ್ಳ ಸುಮ್ಕೆ’ ಎಂದ ಕಲ್ಲೇಶಿ.</p>.<p>‘ಅಂಗಲ್ಲಲೇ, ಈಗ ನೋಡು, ಸರ್ಕಾರ ಲಕ್ಷಾಂತರ ಎಕರೆ ಒತ್ತುವರಿ ತೆರವು ಮಾಡಕ್ಕೆ ಒಂಟದೆ. ಅಂದ್ಮ್ಯಾಗೆ ಬುಲ್ಡೋಜರ್ ಕಂಪನಿಗೆ ಪ್ರೋತ್ಸಾಹ ಕೊಡ್ಬೇಕಲ್ವಾ?’</p>.<p>‘ಅದ್ಯಾವುದೋ ಊರಲ್ಲಿ ಕಟ್ಟಿದ ಮನೇನೆ ಅನಾಮತ್ ತಳಪಾಯದ ಸಮೇತ ಹಿಂದಕ್ಕೆ ಸರಿಸವ್ರಂತೆ. ಇಂಗೇ ಇವತ್ತು ಹಿಂದಕ್ಕೆ ಸರ್ಸದು, ಸರ್ವೆ ಆದ್ಮ್ಯಾಗೆ ಮತ್ತೆ ಎತ್ತಿ ಮುಂದಕ್ಕೆ ಮಡಿಕ್ಕಳಾದು. ಒಡೆಯೋ ಪ್ರಶ್ನೆನೇ ಬರಕ್ಕಿಲ್ವಲ್ಲ’.</p>.<p>‘ಅಂಗಾರೆ ಆ ‘ಹೌಸ್ ಮೂವರ್’ ಕಂಪನಿನೇ ತಂದು ನಮ್ ರಾಜ್ಯದಲ್ಲಿ ಮಡಿಕ್ಕಬೇಕು ಬುಡು. ಉದ್ಯೋಗನೂ ಸೃಷ್ಟಿ ಆಯ್ತದೆ’.</p>.<p>‘ಉದ್ಯೋಗದ ವಿಷಯ ಬಿಡ್ಲಾ. ಯಾರಿಗ್ ಬೇಕು ಹೂಡಿಕೆ? ಉದ್ಯೋಗ? ಇಂಡಸ್ಟ್ರಿಯೋರು, ರಾಜಕೀಯದೋರು ಇಬ್ರೂ ತಮ್ ಮೂಲ ಸೌಕರ್ಯ ನೋಡ್ಕತಾರೆ ಅಷ್ಟೇ!</p>.<p>‘ಅದೇನೋ ಸರೀನೆ, ಈಗ ಅಕ್ಕಿ ತಯಾರ್ ಮಾಡೋ ಕಂಪನಿಗಳಿದ್ರೆ ಅರ್ಜೆಂಟ್ ಕರುಸ್ಬೇಕು’.</p>.<p>‘ಇಂಡಸ್ಟ್ರಿ ಮಾಡ್ತೀವಿ ಅಂತ ಸಾವಿರಾರು ಎಕ್ರೆ ರೈತನ್ ನೆಲ ಗೆಬರ್ಕಂಡ್ರೆ ಅಕ್ಕಿ ಏನ್ ಆಕಾಶದಿಂದ ಉದುರುತ್ತೇನ್ಲಾ?’</p>.<p>‘ಅಂಗಿದ್ಮೇಲೆ ಊರಾಗಿರೋ ಬಂಡೆ ಗಿಂಡೆ ಎಲ್ಲಾ ಎಂಗೂ ಅರ್ಧಕ್ಕರ್ಧ ಒಡ್ದವ್ರೆ. ಪೂರಾ ಒಡೆದು ಸಮತಟ್ ಮಾಡ್ಬುಟ್ರೆ ಭತ್ತ ಬೆಳೀಬಹುದು. ಬಂಡೆ ಒಡೆಯೋ ಇಂಡಸ್ಟ್ರಿಗೇ ಮೊದ್ಲು ಪ್ರಿಫರೆನ್ಸ್ ಕೊಟ್ರಾಯ್ತು’.</p>.<p>‘ಈಗ ಮಾಡ್ತಿರೋದು ಅದೇ! ಬಂಡೆ ಒಡೆಯೋ ಕೆಲಸ. ಈ ಮೈತ್ರಿ, ಕೂಡಿಕೆ ಅಂದ್ರೆ ಹೂಡಿಕೆಗೆ ಬಂಡೆನೇ ಬೇಕಾಗಿತ್ತು. ಈಗ ಹೂ-ಡಿಕೆ? ಎನ್ನುವಂತಾಗಿದೆ’ ಎಂದ ಪರ್ಮೇಶಿ.</p>.<p>ಎಲ್ಲಾ ಗೊಳ್ಳನೆ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಅದೇನೋ ಇನ್ವೇಸ್ಟ್ ಕರ್ನಾಟಕ ಅಂತೆ, 10 ಲಕ್ಷ ಕೋಟಿ ದುಡ್ಡು ಹರ್ಕಂಡ್ ಬತ್ತದಂತೆ ಕಣ್ಲಾ’ ಎಂದ ಗುದ್ಲಿಂಗ ಹರಟೆಕಟ್ಟೇಲಿ.</p>.<p>‘ಅದು ಇನ್ವೇಸ್ಟ್ ಅಲ್ಲಲೇ, ಇನ್ವೆಸ್ಟ್ ಕರ್ನಾಟಕ’ ತಿದ್ದಿದ ಮಾಲಿಂಗ. ‘ಆದ್ರೆ ನಮ್ ರಾಜಕೀಯದೋರ್ಗೆ ಉಪ್ಯೋಗ ಆಗೋ ಅಂತದ್ದೇನೂ ಕಂಡಂಗಾಗ್ಲಿಲ್ಲ’ ಎಂದ ಗುದ್ಲಿಂಗ.</p>.<p>‘ದುಡ್ಡು ಬರ್ಬೇಕು ಅಂತ ನೋಟು ಇಂಡಸ್ಟ್ರಿ ಮಾಡಕ್ಕಾಗುತ್ತೇನ್ಲಾ? ಕೂತ್ಕಳ್ಳ ಸುಮ್ಕೆ’ ಎಂದ ಕಲ್ಲೇಶಿ.</p>.<p>‘ಅಂಗಲ್ಲಲೇ, ಈಗ ನೋಡು, ಸರ್ಕಾರ ಲಕ್ಷಾಂತರ ಎಕರೆ ಒತ್ತುವರಿ ತೆರವು ಮಾಡಕ್ಕೆ ಒಂಟದೆ. ಅಂದ್ಮ್ಯಾಗೆ ಬುಲ್ಡೋಜರ್ ಕಂಪನಿಗೆ ಪ್ರೋತ್ಸಾಹ ಕೊಡ್ಬೇಕಲ್ವಾ?’</p>.<p>‘ಅದ್ಯಾವುದೋ ಊರಲ್ಲಿ ಕಟ್ಟಿದ ಮನೇನೆ ಅನಾಮತ್ ತಳಪಾಯದ ಸಮೇತ ಹಿಂದಕ್ಕೆ ಸರಿಸವ್ರಂತೆ. ಇಂಗೇ ಇವತ್ತು ಹಿಂದಕ್ಕೆ ಸರ್ಸದು, ಸರ್ವೆ ಆದ್ಮ್ಯಾಗೆ ಮತ್ತೆ ಎತ್ತಿ ಮುಂದಕ್ಕೆ ಮಡಿಕ್ಕಳಾದು. ಒಡೆಯೋ ಪ್ರಶ್ನೆನೇ ಬರಕ್ಕಿಲ್ವಲ್ಲ’.</p>.<p>‘ಅಂಗಾರೆ ಆ ‘ಹೌಸ್ ಮೂವರ್’ ಕಂಪನಿನೇ ತಂದು ನಮ್ ರಾಜ್ಯದಲ್ಲಿ ಮಡಿಕ್ಕಬೇಕು ಬುಡು. ಉದ್ಯೋಗನೂ ಸೃಷ್ಟಿ ಆಯ್ತದೆ’.</p>.<p>‘ಉದ್ಯೋಗದ ವಿಷಯ ಬಿಡ್ಲಾ. ಯಾರಿಗ್ ಬೇಕು ಹೂಡಿಕೆ? ಉದ್ಯೋಗ? ಇಂಡಸ್ಟ್ರಿಯೋರು, ರಾಜಕೀಯದೋರು ಇಬ್ರೂ ತಮ್ ಮೂಲ ಸೌಕರ್ಯ ನೋಡ್ಕತಾರೆ ಅಷ್ಟೇ!</p>.<p>‘ಅದೇನೋ ಸರೀನೆ, ಈಗ ಅಕ್ಕಿ ತಯಾರ್ ಮಾಡೋ ಕಂಪನಿಗಳಿದ್ರೆ ಅರ್ಜೆಂಟ್ ಕರುಸ್ಬೇಕು’.</p>.<p>‘ಇಂಡಸ್ಟ್ರಿ ಮಾಡ್ತೀವಿ ಅಂತ ಸಾವಿರಾರು ಎಕ್ರೆ ರೈತನ್ ನೆಲ ಗೆಬರ್ಕಂಡ್ರೆ ಅಕ್ಕಿ ಏನ್ ಆಕಾಶದಿಂದ ಉದುರುತ್ತೇನ್ಲಾ?’</p>.<p>‘ಅಂಗಿದ್ಮೇಲೆ ಊರಾಗಿರೋ ಬಂಡೆ ಗಿಂಡೆ ಎಲ್ಲಾ ಎಂಗೂ ಅರ್ಧಕ್ಕರ್ಧ ಒಡ್ದವ್ರೆ. ಪೂರಾ ಒಡೆದು ಸಮತಟ್ ಮಾಡ್ಬುಟ್ರೆ ಭತ್ತ ಬೆಳೀಬಹುದು. ಬಂಡೆ ಒಡೆಯೋ ಇಂಡಸ್ಟ್ರಿಗೇ ಮೊದ್ಲು ಪ್ರಿಫರೆನ್ಸ್ ಕೊಟ್ರಾಯ್ತು’.</p>.<p>‘ಈಗ ಮಾಡ್ತಿರೋದು ಅದೇ! ಬಂಡೆ ಒಡೆಯೋ ಕೆಲಸ. ಈ ಮೈತ್ರಿ, ಕೂಡಿಕೆ ಅಂದ್ರೆ ಹೂಡಿಕೆಗೆ ಬಂಡೆನೇ ಬೇಕಾಗಿತ್ತು. ಈಗ ಹೂ-ಡಿಕೆ? ಎನ್ನುವಂತಾಗಿದೆ’ ಎಂದ ಪರ್ಮೇಶಿ.</p>.<p>ಎಲ್ಲಾ ಗೊಳ್ಳನೆ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>