‘ಅಂಗಾಗ್ಬಾರ್ದು, ಜನನ್ ಸೇರ್ಸಿ ಹೈಕಮಾಂಡ್ಗೆ ಒತ್ತಡ ತರಾಣ ಅಂದ್ರೆ ಎಲೆಕ್ಷನ್ ಕಮಿಷನ್ನೋರು ತೊಡ್ರುಗಾಲು ಹಾಕ್ತಾವ್ರೆ. ಲೋಕಲ್ಲಲ್ಲೂ ಅಲ್ಲಾಡದಂಗೆ ಆಗೋಗೈತೆ. ನಾಯಕ್ರು ನನ್ ಮೇಲೆ ನಂಬ್ಕೆ ಮಡಗಿ ಭಾರೀ ಟಾಸ್ಕ್ ಕೊಟ್ಟವ್ರೆ. ಆದ್ರೆ ಸೀರೆ, ಪಂಚೆ, ಮೂಗ್ಬಟ್ಟು, ಲಿಖ್ಖರ್ರು, ಕುಕ್ಕರ್ರು ಏನೂ ಹಂಚೋಕೇ ಆಯ್ತಿಲ್ಲ. ಬೇರೆ ಪಾರ್ಟಿಯೋರು ಕಣ್ ಕಿಸ್ಕೊಂಡು ಕಾಯ್ತಾವ್ರೆ. ಆ ಬದ್ಮಾಶ್ ನನ್ಮಗ ಕೊಟ್ರೇಶಿ ನಂಗ್ ಶಾನೆ ಕಾಲೆಳೀತಾವ್ನೆ’.