<p>‘ಡ್ಯಾಡೀ, ನಮ್ಮ ಎಸ್ಸೆಸ್ಸೆಲ್ಸಿ ಎಕ್ಸಾಂ ರದ್ದು ಮಾಡಿ, ರೀ-ಎಕ್ಸಾಂ ಮಾಡ್ತಾರಾ?’ ಮಗಳು ಆತಂಕದಿಂದ ಕೇಳಿದಳು.</p>.<p>‘ಇಲ್ಲವಲ್ಲಾ, ಪರೀಕ್ಷೆ ಮುಗಿದು ರಿಸೆಲ್ಟ್ ಅನೌನ್ಸ್ ಆಗಿ ನಿನಗೆ ಎಬೋ ನೈಂಟಿ ಪರ್ಸೆಂಟ್ ಬಂದಿದೆ, ಮರು ಪರೀಕ್ಷೆ ಇಲ್ಲ, ಆತಂಕಪಡಬೇಡ...’ ಅಂದ ಶಂಕ್ರಿ.</p>.<p>‘ಹಾಗಲ್ಲಾ, ಪ್ರತಿ ಪರೀಕ್ಷೆಯಲ್ಲೂ ಬಾಲಕಿಯರೇ ಮೇಲುಗೈ ಸಾಧಿಸುತ್ತಾರೆ, ಪರೀಕ್ಷೆಯಲ್ಲಿ ಅಕ್ರಮ ನಡೆದಿರಬಹುದು, ಮರು ಪರೀಕ್ಷೆ ನಡೆಸಲು ಒತ್ತಾಯಿಸಬೇಕು ಎಂದು ಹುಡುಗರು ಮಾತನಾಡಿಕೊಳ್ತಿದ್ರು...’</p>.<p>‘ಬಾಲಕರಿಗೆ ಮಂಪರು ಪರೀಕ್ಷೆ ನಡೆಸಬಹುದೇ ಹೊರತು ಎಸ್ಸೆಸ್ಸೆಲ್ಸಿ ಮರು ಪರೀಕ್ಷೆ ಮಾಡೋದಿಲ್ಲ’ ಮಗಳಿಗೆ ಸಮಾಧಾನ ಹೇಳಿ ಕಳಿಸಿದೆ.</p>.<p>‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆಯಂತೆ, ಕಾಪಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಕಣ್ರೀ’ ಎಂದಳು ಸುಮಿ.</p>.<p>‘ಹೌದು. ಅಕ್ರಮಗಳನ್ನು ತಡೆಯಲಾಗದಿದ್ದರೆ ಪರೀಕ್ಷೆ ನಡೆಸುವುದರಲ್ಲಿ ಅರ್ಥವಿಲ್ಲ’.</p>.<p>‘ಪರೀಕ್ಷಾ ಪದ್ಧತಿಯನ್ನೇ ರದ್ದು ಮಾಡಿಬಿಡಬೇಕು ಕಣ್ರೀ...’</p>.<p>‘ವಿದ್ಯಾರ್ಥಿಗಳ ಜ್ಞಾನಮಾಪನ ಮಾಡಲು ಪರೀಕ್ಷೆ ಬೇಕಲ್ವೇ?’</p>.<p>‘ಮಂಪರು ಪರೀಕ್ಷೆ ನಡೆಸಿಯೋ, ತಾಂಬೂಲ ಪ್ರಶ್ನೆಯಿಂದಲೋ ವಿದ್ಯಾರ್ಥಿಗಳ ಜ್ಞಾನ ಪರೀಕ್ಷಿಸಿ ಮಾರ್ಕ್ಸ್ ನೀಡುವ ಪದ್ಧತಿ ಜಾರಿಗೆ ತರಬೇಕು’.</p>.<p>‘ಪಠ್ಯಪುಸ್ತಕ ಸಿದ್ಧಪಡಿಸುವವರಿಗೂ ಮಂಪರು ಪರೀಕ್ಷೆ ಅಗತ್ಯವಿದೆ ಅನ್ಸುತ್ತೆ. ಪಾಠದ ಆಯ್ಕೆಯೇ ಪಡಿಪಾಟಲಾಗಿ ನಗೆಪಾಟಲಾಗಿದೆ’.</p>.<p>‘ಅದು ಪಂಥ ವಿವಾದ. ಮಕ್ಕಳು ಎಡ ಪಂಥದ ಪಾಠ ಓದಬೇಕೊ, ಬಲ ಪಂಥದ್ದು ಓದಬೇಕೊ ಅಂತ’.</p>.<p>‘ಪಂಥ ಫಜೀತಿ ಮುಗಿಯುವಂತಿಲ್ಲ. ಪಂಕ್ತಿ ಭೇದಕ್ಕಿಂತ ಪಂಥೀ ಭೇದ ಅಪಾಯಕಾರಿ’.</p>.<p>‘ಪಠ್ಯದಲ್ಲಿ ಎಡ ಪಂಥಕ್ಕೆ 50, ಬಲ ಪಂಥಕ್ಕೆ 50 ಅಂಕದ ಪಾಠ ಸಿದ್ಧಪಡಿಸಲು ಸರ್ಕಾರ ಅವಕಾಶ ನೀಡಿದ್ರೆ ವಿವಾದ ಬಗೆಹರಿಯಬಹುದು. ಮಕ್ಕಳು ತಮಗೆ ಬೇಕಾದ ಪಂಥ ಓದಿಕೊಳ್ತಾರೆ...’ ಬೇಸರದಿಂದ ಹೇಳಿದಳು ಸುಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಡ್ಯಾಡೀ, ನಮ್ಮ ಎಸ್ಸೆಸ್ಸೆಲ್ಸಿ ಎಕ್ಸಾಂ ರದ್ದು ಮಾಡಿ, ರೀ-ಎಕ್ಸಾಂ ಮಾಡ್ತಾರಾ?’ ಮಗಳು ಆತಂಕದಿಂದ ಕೇಳಿದಳು.</p>.<p>‘ಇಲ್ಲವಲ್ಲಾ, ಪರೀಕ್ಷೆ ಮುಗಿದು ರಿಸೆಲ್ಟ್ ಅನೌನ್ಸ್ ಆಗಿ ನಿನಗೆ ಎಬೋ ನೈಂಟಿ ಪರ್ಸೆಂಟ್ ಬಂದಿದೆ, ಮರು ಪರೀಕ್ಷೆ ಇಲ್ಲ, ಆತಂಕಪಡಬೇಡ...’ ಅಂದ ಶಂಕ್ರಿ.</p>.<p>‘ಹಾಗಲ್ಲಾ, ಪ್ರತಿ ಪರೀಕ್ಷೆಯಲ್ಲೂ ಬಾಲಕಿಯರೇ ಮೇಲುಗೈ ಸಾಧಿಸುತ್ತಾರೆ, ಪರೀಕ್ಷೆಯಲ್ಲಿ ಅಕ್ರಮ ನಡೆದಿರಬಹುದು, ಮರು ಪರೀಕ್ಷೆ ನಡೆಸಲು ಒತ್ತಾಯಿಸಬೇಕು ಎಂದು ಹುಡುಗರು ಮಾತನಾಡಿಕೊಳ್ತಿದ್ರು...’</p>.<p>‘ಬಾಲಕರಿಗೆ ಮಂಪರು ಪರೀಕ್ಷೆ ನಡೆಸಬಹುದೇ ಹೊರತು ಎಸ್ಸೆಸ್ಸೆಲ್ಸಿ ಮರು ಪರೀಕ್ಷೆ ಮಾಡೋದಿಲ್ಲ’ ಮಗಳಿಗೆ ಸಮಾಧಾನ ಹೇಳಿ ಕಳಿಸಿದೆ.</p>.<p>‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆಯಂತೆ, ಕಾಪಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಕಣ್ರೀ’ ಎಂದಳು ಸುಮಿ.</p>.<p>‘ಹೌದು. ಅಕ್ರಮಗಳನ್ನು ತಡೆಯಲಾಗದಿದ್ದರೆ ಪರೀಕ್ಷೆ ನಡೆಸುವುದರಲ್ಲಿ ಅರ್ಥವಿಲ್ಲ’.</p>.<p>‘ಪರೀಕ್ಷಾ ಪದ್ಧತಿಯನ್ನೇ ರದ್ದು ಮಾಡಿಬಿಡಬೇಕು ಕಣ್ರೀ...’</p>.<p>‘ವಿದ್ಯಾರ್ಥಿಗಳ ಜ್ಞಾನಮಾಪನ ಮಾಡಲು ಪರೀಕ್ಷೆ ಬೇಕಲ್ವೇ?’</p>.<p>‘ಮಂಪರು ಪರೀಕ್ಷೆ ನಡೆಸಿಯೋ, ತಾಂಬೂಲ ಪ್ರಶ್ನೆಯಿಂದಲೋ ವಿದ್ಯಾರ್ಥಿಗಳ ಜ್ಞಾನ ಪರೀಕ್ಷಿಸಿ ಮಾರ್ಕ್ಸ್ ನೀಡುವ ಪದ್ಧತಿ ಜಾರಿಗೆ ತರಬೇಕು’.</p>.<p>‘ಪಠ್ಯಪುಸ್ತಕ ಸಿದ್ಧಪಡಿಸುವವರಿಗೂ ಮಂಪರು ಪರೀಕ್ಷೆ ಅಗತ್ಯವಿದೆ ಅನ್ಸುತ್ತೆ. ಪಾಠದ ಆಯ್ಕೆಯೇ ಪಡಿಪಾಟಲಾಗಿ ನಗೆಪಾಟಲಾಗಿದೆ’.</p>.<p>‘ಅದು ಪಂಥ ವಿವಾದ. ಮಕ್ಕಳು ಎಡ ಪಂಥದ ಪಾಠ ಓದಬೇಕೊ, ಬಲ ಪಂಥದ್ದು ಓದಬೇಕೊ ಅಂತ’.</p>.<p>‘ಪಂಥ ಫಜೀತಿ ಮುಗಿಯುವಂತಿಲ್ಲ. ಪಂಕ್ತಿ ಭೇದಕ್ಕಿಂತ ಪಂಥೀ ಭೇದ ಅಪಾಯಕಾರಿ’.</p>.<p>‘ಪಠ್ಯದಲ್ಲಿ ಎಡ ಪಂಥಕ್ಕೆ 50, ಬಲ ಪಂಥಕ್ಕೆ 50 ಅಂಕದ ಪಾಠ ಸಿದ್ಧಪಡಿಸಲು ಸರ್ಕಾರ ಅವಕಾಶ ನೀಡಿದ್ರೆ ವಿವಾದ ಬಗೆಹರಿಯಬಹುದು. ಮಕ್ಕಳು ತಮಗೆ ಬೇಕಾದ ಪಂಥ ಓದಿಕೊಳ್ತಾರೆ...’ ಬೇಸರದಿಂದ ಹೇಳಿದಳು ಸುಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>