ಬಿರ್ಲಾ ಸಂಸ್ಥೆಗೆ ಗೋವಾ ಕಾರ್ಖಾನೆ: ಯಂಗ್ ಟರ್ಕ್ಸ್ ತೀವ್ರ ವಿರೋಧ
ಪಣಜಿ, ಜ. 1– ಬಿರ್ಲಾ ಸಂಸ್ಥೆಗೆ ಗೋವಾದಲ್ಲಿ ಭಾರಿ ರಾಸಾಯನಿಕ ಗೊಬ್ಬರ ಕಾರ್ಖಾನೆ ಸ್ಥಾಪಿಸಲು ರಹದಾರಿ ಇತ್ತ ಕೇಂದ್ರ ಸರ್ಕಾರದ ಕ್ರಮವು ‘ದುರದೃಷ್ಟಕರ’ವಷ್ಟೇ ಅಲ್ಲದೆ ಮೂಲಭೂತವಾದ ತಪ್ಪು ಕೂಡ ಎಂದು ‘ಯಂಗ್ ಟರ್ಕ್ಸ್’ ಹಾಗೂ ಸಂಸತ್ ಸದಸ್ಯರುಗಳಾದ ಚಂದ್ರಶೇಖರ್, ಕೃಷ್ಣಕಾಂತ್, ಪ್ರೊ. ಶಾಂತಿ ಕೊತಾರಿ ಮತ್ತು ಓಂ ಮೆಹ್ತಾ ಅವರು ಇಂದು ಇಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದರು.