<p><strong>ಪಕ್ಷಾಂತರ ಕುರಿತ ಸಂಸತ್ ಸಮಿತಿ ಶಿಫಾರಸು ಕಾರ್ಯಗತಕ್ಕೆ ಸಂವಿಧಾನ ತಿದ್ದುಪಡಿ ಅಗತ್ಯ<br />ನವದೆಹಲಿ, ಏ. 27–</strong> ಸಂಸತ್ ಸದಸ್ಯರು ಮತ್ತು ರಾಜ್ಯ ಶಾಸಕರು ಪಕ್ಷಾಂತರ ಮತ್ತು ಮತಾಂತರಗಳಲ್ಲಿ ತೊಡಗುವುದನ್ನು ಕಾನೂನು ಮೂಲಕ ನಿಷೇಧಿಸಬೇಕೆಂದು ಇಂದು ರಾಜ್ಯಸಭೆಯಲ್ಲಿ ಒಬ್ಬ ಯಂಗ್ ಟರ್ಕ್ ಮತ್ತು ವಿರೋಧ ಪಕ್ಷಗಳ ಕೆಲವು ಸದಸ್ಯರು ಒತ್ತಾಯ ಮಾಡಿದರು.</p>.<p>ಪಕ್ಷಾಂತರ ಕುರಿತ ಸಂಸತ್ ಸಮಿತಿ ಶಿಫಾರಸುಗಳನ್ನು ಗೃಹ ಸಚಿವರು ಪರಿಷ್ಕರಿಸುತ್ತಿದ್ದಾರೆಂದು ಕಾನೂನು ಸಚಿವ ಶ್ರೀ ಪಿ.ಗೋವಿಂದ ಮೆನನ್ ನುಡಿದು, ಅವುಗಳ ಅನುಷ್ಠಾನಕ್ಕೆ ಸಂವಿಧಾನದ ತಿದ್ದುಪಡಿ ಅವಶ್ಯ ಎಂದರು.</p>.<p>ಶ್ರೀ ಮೋಹನ್ ಧಾರಿಯಾ ಅವರು ಪಕ್ಷಾಂತರವನ್ನು ‘ಸ್ವಯಂ ಹರಾಜು’ ಎಂದು ವರ್ಣಿಸಿದರೆ, ಶ್ರೀ ಕೃಷ್ಣಕಾಂತ್ ಅವರು ‘ತೀವ್ರ ಭ್ರಷ್ಟಾಚಾರ’ವೆನಿಸುವ ಪಕ್ಷಾಂತರ ನಿಲ್ಲಿಸಲು ಸರ್ಕಾರ ಏನು ಮಾಡಿದೆಯೆಂದು ಕೇಳಿದರು.</p>.<p><strong>ಕೋರ್ಟ್ ತೀರ್ಪಿನ ಟೀಕೆಗೆ ಎಲ್ಲರಿಗೂ ಹಕ್ಕು: ಹಿದಾಯತ್ ಉಲ್ಲಾ<br />ನವದೆಹಲಿ, ಏ. 27– </strong>ಕೋರ್ಟ್ ತೀರ್ಪನ್ನು ಟೀಕಿಸಲು ಪ್ರತಿಯೊಬ್ಬ ಪ್ರಜೆಗೂ ಅಧಿಕಾರವಿದೆ ಎಂದು ಶ್ರೇಷ್ಠ ನ್ಯಾಯಮೂರ್ತಿ ಎಂ.ಹಿದಾಯತ್ ಉಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.<p>ಕೇಂದ್ರ ಸಚಿವ ಆರ್.ಕೆ.ಖಾಡಿಲ್ಕರ್ ಅವರ ವಿರುದ್ಧದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಇಂದು ತೀರ್ಪನ್ನು ಕಾದಿರಿಸಿದ ಸಂದರ್ಭದಲ್ಲಿ ಅವರು ಮೇಲಿನಂತೆ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಕ್ಷಾಂತರ ಕುರಿತ ಸಂಸತ್ ಸಮಿತಿ ಶಿಫಾರಸು ಕಾರ್ಯಗತಕ್ಕೆ ಸಂವಿಧಾನ ತಿದ್ದುಪಡಿ ಅಗತ್ಯ<br />ನವದೆಹಲಿ, ಏ. 27–</strong> ಸಂಸತ್ ಸದಸ್ಯರು ಮತ್ತು ರಾಜ್ಯ ಶಾಸಕರು ಪಕ್ಷಾಂತರ ಮತ್ತು ಮತಾಂತರಗಳಲ್ಲಿ ತೊಡಗುವುದನ್ನು ಕಾನೂನು ಮೂಲಕ ನಿಷೇಧಿಸಬೇಕೆಂದು ಇಂದು ರಾಜ್ಯಸಭೆಯಲ್ಲಿ ಒಬ್ಬ ಯಂಗ್ ಟರ್ಕ್ ಮತ್ತು ವಿರೋಧ ಪಕ್ಷಗಳ ಕೆಲವು ಸದಸ್ಯರು ಒತ್ತಾಯ ಮಾಡಿದರು.</p>.<p>ಪಕ್ಷಾಂತರ ಕುರಿತ ಸಂಸತ್ ಸಮಿತಿ ಶಿಫಾರಸುಗಳನ್ನು ಗೃಹ ಸಚಿವರು ಪರಿಷ್ಕರಿಸುತ್ತಿದ್ದಾರೆಂದು ಕಾನೂನು ಸಚಿವ ಶ್ರೀ ಪಿ.ಗೋವಿಂದ ಮೆನನ್ ನುಡಿದು, ಅವುಗಳ ಅನುಷ್ಠಾನಕ್ಕೆ ಸಂವಿಧಾನದ ತಿದ್ದುಪಡಿ ಅವಶ್ಯ ಎಂದರು.</p>.<p>ಶ್ರೀ ಮೋಹನ್ ಧಾರಿಯಾ ಅವರು ಪಕ್ಷಾಂತರವನ್ನು ‘ಸ್ವಯಂ ಹರಾಜು’ ಎಂದು ವರ್ಣಿಸಿದರೆ, ಶ್ರೀ ಕೃಷ್ಣಕಾಂತ್ ಅವರು ‘ತೀವ್ರ ಭ್ರಷ್ಟಾಚಾರ’ವೆನಿಸುವ ಪಕ್ಷಾಂತರ ನಿಲ್ಲಿಸಲು ಸರ್ಕಾರ ಏನು ಮಾಡಿದೆಯೆಂದು ಕೇಳಿದರು.</p>.<p><strong>ಕೋರ್ಟ್ ತೀರ್ಪಿನ ಟೀಕೆಗೆ ಎಲ್ಲರಿಗೂ ಹಕ್ಕು: ಹಿದಾಯತ್ ಉಲ್ಲಾ<br />ನವದೆಹಲಿ, ಏ. 27– </strong>ಕೋರ್ಟ್ ತೀರ್ಪನ್ನು ಟೀಕಿಸಲು ಪ್ರತಿಯೊಬ್ಬ ಪ್ರಜೆಗೂ ಅಧಿಕಾರವಿದೆ ಎಂದು ಶ್ರೇಷ್ಠ ನ್ಯಾಯಮೂರ್ತಿ ಎಂ.ಹಿದಾಯತ್ ಉಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.<p>ಕೇಂದ್ರ ಸಚಿವ ಆರ್.ಕೆ.ಖಾಡಿಲ್ಕರ್ ಅವರ ವಿರುದ್ಧದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಇಂದು ತೀರ್ಪನ್ನು ಕಾದಿರಿಸಿದ ಸಂದರ್ಭದಲ್ಲಿ ಅವರು ಮೇಲಿನಂತೆ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>