<p><strong>ಉಗುರಿನ ಬುಡಕ್ಕೆ ಶಾಯಿ ಗುರುತು</strong><br /><strong>ಬೆಂಗಳೂರು, ಏ. 29–</strong> ಬೆರಳಿನ ಮೇಲೆ ಬದಲಾಗಿ ಉಗುರಿನ ಬುಡದಲ್ಲಿ ಶಾಯಿ ಹಚ್ಚುವುದು ಬರುವ ಉಪಚುನಾವಣೆಯಲ್ಲಿ ಮತ ಭ್ರಷ್ಟಾಚಾರ ತಪ್ಪಿಸಲು ಜಾರಿಗೆ ತರಲು ಉದ್ದೇಶಿಸಿರುವ ಮೂರು ಹೊಸ ವಿಧಾನಗಳಲ್ಲಿ ಒಂದು. ಉಳಿದ ಎರಡು: ಮತಪತ್ರಗಳ ಟಖಾವಣೆ ಮತ್ತು ಪ್ರತೀ ಮತಪತ್ರದ ಮೇಲೂ ಮತಗಟ್ಟೆ ಅಧಿಕಾರಿ ಸಹಿ.</p>.<p>ಮತಪತ್ರಗಳ ಟಖಾವಣೆಯು ಮತದಾನದ ರಹಸ್ಯವನ್ನು ಪೂರ್ಣವಾಗಿ ರಕ್ಷಿಸಲು ನೆರವಾಗುವುದೆಂದು ರಾಜ್ಯದ ಚುನಾವಣಾಧಿಕಾರಿ ಶ್ರೀ ಮಹಮದ್ ಪೀರ್ ಅವರು ಇಂದು ಇಲ್ಲಿ ತಿಳಿಸಿದರಲ್ಲದೆ ಅಧಿಕಾರಿ ಸಹಿಯು ಮತಪತ್ರಗಳು ಬೆರಕೆಯಾಗುವುದು ಹಾಗೂ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ಹರಿಯುವುದನ್ನು ತಡೆಗಟ್ಟುವುದೆಂದರು.</p>.<p><strong>ಬಂಗಾಳ: ನಕ್ಸಲೀಯರ ದಾಳಿ, ಕೊಲೆಗಳ ಸಂಖ್ಯೆ ಏರಿಕೆ; ಚವಾಣ್</strong><br /><strong>ನವದೆಹಲಿ, ಏ. 29–</strong> ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದ ನಂತರ ಅಂತರಪಕ್ಷ ಕಲಹಗಳು ಕಡಿಮೆಯಾಗಿವೆಯಲ್ಲದೆ ಘೇರಾವೊಗಳು ಸಾಕಷ್ಟು ಪ್ರಮಾಣದಲ್ಲಿ ಇಳಿಮುಖವಾಗಿವೆ ಎಂಬುದು ಅಪರಾಧದ ಅಂಕಿ ಸಂಖ್ಯೆಗಳ ಪ್ರಕಾರ ಗೊತ್ತಾಗಿದೆ ಎಂದು ಗೃಹ ಸಚಿವ ಶ್ರೀ ವೈ.ಬಿ. ಚವಾಣ್ ಅವರು ಇಂದು ರಾಜ್ಯಸಭೆಯಲ್ಲಿ ತಿಳಿಸಿದರು.</p>.<p>ಆದರೆ, ನಕ್ಸಲೀಯರ ದಾಳಿಗಳು ಮತ್ತು ಕೊಲೆಗಳು ಹೆಚ್ಚಿವೆಯೆಂದೂ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದ ಕೂಡಲೇ ಕೆಲವು ದೇಹಗಳು ಪತ್ತೆಯಾದವೆಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಗುರಿನ ಬುಡಕ್ಕೆ ಶಾಯಿ ಗುರುತು</strong><br /><strong>ಬೆಂಗಳೂರು, ಏ. 29–</strong> ಬೆರಳಿನ ಮೇಲೆ ಬದಲಾಗಿ ಉಗುರಿನ ಬುಡದಲ್ಲಿ ಶಾಯಿ ಹಚ್ಚುವುದು ಬರುವ ಉಪಚುನಾವಣೆಯಲ್ಲಿ ಮತ ಭ್ರಷ್ಟಾಚಾರ ತಪ್ಪಿಸಲು ಜಾರಿಗೆ ತರಲು ಉದ್ದೇಶಿಸಿರುವ ಮೂರು ಹೊಸ ವಿಧಾನಗಳಲ್ಲಿ ಒಂದು. ಉಳಿದ ಎರಡು: ಮತಪತ್ರಗಳ ಟಖಾವಣೆ ಮತ್ತು ಪ್ರತೀ ಮತಪತ್ರದ ಮೇಲೂ ಮತಗಟ್ಟೆ ಅಧಿಕಾರಿ ಸಹಿ.</p>.<p>ಮತಪತ್ರಗಳ ಟಖಾವಣೆಯು ಮತದಾನದ ರಹಸ್ಯವನ್ನು ಪೂರ್ಣವಾಗಿ ರಕ್ಷಿಸಲು ನೆರವಾಗುವುದೆಂದು ರಾಜ್ಯದ ಚುನಾವಣಾಧಿಕಾರಿ ಶ್ರೀ ಮಹಮದ್ ಪೀರ್ ಅವರು ಇಂದು ಇಲ್ಲಿ ತಿಳಿಸಿದರಲ್ಲದೆ ಅಧಿಕಾರಿ ಸಹಿಯು ಮತಪತ್ರಗಳು ಬೆರಕೆಯಾಗುವುದು ಹಾಗೂ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ಹರಿಯುವುದನ್ನು ತಡೆಗಟ್ಟುವುದೆಂದರು.</p>.<p><strong>ಬಂಗಾಳ: ನಕ್ಸಲೀಯರ ದಾಳಿ, ಕೊಲೆಗಳ ಸಂಖ್ಯೆ ಏರಿಕೆ; ಚವಾಣ್</strong><br /><strong>ನವದೆಹಲಿ, ಏ. 29–</strong> ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದ ನಂತರ ಅಂತರಪಕ್ಷ ಕಲಹಗಳು ಕಡಿಮೆಯಾಗಿವೆಯಲ್ಲದೆ ಘೇರಾವೊಗಳು ಸಾಕಷ್ಟು ಪ್ರಮಾಣದಲ್ಲಿ ಇಳಿಮುಖವಾಗಿವೆ ಎಂಬುದು ಅಪರಾಧದ ಅಂಕಿ ಸಂಖ್ಯೆಗಳ ಪ್ರಕಾರ ಗೊತ್ತಾಗಿದೆ ಎಂದು ಗೃಹ ಸಚಿವ ಶ್ರೀ ವೈ.ಬಿ. ಚವಾಣ್ ಅವರು ಇಂದು ರಾಜ್ಯಸಭೆಯಲ್ಲಿ ತಿಳಿಸಿದರು.</p>.<p>ಆದರೆ, ನಕ್ಸಲೀಯರ ದಾಳಿಗಳು ಮತ್ತು ಕೊಲೆಗಳು ಹೆಚ್ಚಿವೆಯೆಂದೂ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದ ಕೂಡಲೇ ಕೆಲವು ದೇಹಗಳು ಪತ್ತೆಯಾದವೆಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>