ಬಂಗಾಳ: ನಕ್ಸಲೀಯರ ದಾಳಿ, ಕೊಲೆಗಳ ಸಂಖ್ಯೆ ಏರಿಕೆ; ಚವಾಣ್
ನವದೆಹಲಿ, ಏ. 29– ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದ ನಂತರ ಅಂತರಪಕ್ಷ ಕಲಹಗಳು ಕಡಿಮೆಯಾಗಿವೆಯಲ್ಲದೆ ಘೇರಾವೊಗಳು ಸಾಕಷ್ಟು ಪ್ರಮಾಣದಲ್ಲಿ ಇಳಿಮುಖವಾಗಿವೆ ಎಂಬುದು ಅಪರಾಧದ ಅಂಕಿ ಸಂಖ್ಯೆಗಳ ಪ್ರಕಾರ ಗೊತ್ತಾಗಿದೆ ಎಂದು ಗೃಹ ಸಚಿವ ಶ್ರೀ ವೈ.ಬಿ. ಚವಾಣ್ ಅವರು ಇಂದು ರಾಜ್ಯಸಭೆಯಲ್ಲಿ ತಿಳಿಸಿದರು.