ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಗುರುವಾರ, 11–6–1970

Last Updated 10 ಜೂನ್ 2020, 18:40 IST
ಅಕ್ಷರ ಗಾತ್ರ

‘ರಾಜ್ಯ ಸರ್ಕಾರ ಉರುಳಿಸಲು ದೆಹಲಿಯಲ್ಲಿ ಹಣ ಸಿದ್ಧ ಎಂಬಮಾತು ತೀರಾ ತಪ್ಪು’
ಬೆಂಗಳೂರು, ಜೂನ್‌ 10–
ಮೈಸೂರು ಸರ್ಕಾರವನ್ನು ಉರುಳಿಸಲು ದೆಹಲಿಯಲ್ಲಿ ಹಣ ಸಿದ್ಧವಾಗಿದೆ ಎಂಬ ಹೇಳಿಕೆ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಶ್ರೀ ಕೆ.ಕೆ.ಷಾ ಅವರು ‘ಇಂದು ಈ ರೀತಿಯ ಹೇಳಿಕೆ ನೀಡುವುದು ತೀರಾ ತಪ್ಪು. ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಇದ್ದರೂ ವ್ಯಕ್ತಿಶಃ ಮಿತ್ರರಾಗಿರುವ ಮನೋಭಾವ ಬೇಕು’ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

‘ಆಡಳಿತ ಕಾಂಗ್ರೆಸ್ಸಿಗೆ ಹೊಸ ಕಚೇರಿಗಳನ್ನು ಕೊಳ್ಳಲು ಹಣ ಇಲ್ಲ. ವಾಹನಗಳಿಗಂತೂ ಇಲ್ಲವೇ ಇಲ್ಲ. ಕಚೇರಿಗಳ ಕನಿಷ್ಠ ಅಗತ್ಯ ಪೂರೈಸಲೇ ಸಾಧ್ಯವಾಗದಿರುವಾಗ ಸರ್ಕಾರ ಉರುಳಿಸಲು ಹಣ ಸಿದ್ಧ ಎಂಬ ಮಾತು ಕೇಳಿ ನಗಬೇಕಾಗಿದೆ’ ಎಂದು ಅವರು ವರದಿಗಾರರೊಡನೆ ಮಾತನಾಡುತ್ತಾ ಹೇಳಿದರು.

ಅಧಿಕ ಉದ್ಯೋಗಾವಕಾಶ: ಪ್ರೋತ್ಸಾಹಕ ವಿಧಾನಕ್ಕೆರಾಷ್ಟ್ರಪತಿ ಒತ್ತಾಯ
ಜಿನೀವಾ, ಜೂನ್‌ 10–
ಅಭಿವೃದ್ಧಿಯ ಎಲ್ಲ ಮಾರ್ಗಗಳ ಮೂಲಕವೂ ಇಡೀ ಹೆಚ್ಚುವರಿ ಜನಶಕ್ತಿಯನ್ನು ಬಳಸಿಕೊಳ್ಳಲು ಸಾಧ್ಯವಾಗುವಂತೆ ಹೆಚ್ಚು ಉದ್ಯೋಗಾವಕಾಶಗಳನ್ನು ಪ್ರೋತ್ಸಾಹಿಸಬಲ್ಲ ವಿಧಾನವೊಂದನ್ನು ರೂಪಿಸಬೇಕೆಂದು ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರು ಇಂದು ಕರೆ ಕೊಟ್ಟಿದ್ದಾರೆ.

121 ರಾಷ್ಟ್ರಗಳ ಅಂತರರಾಷ್ಟ್ರೀಯ ವಾರ್ಷಿಕ ಕಾರ್ಮಿಕ ಸಮ್ಮೇಳನವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ‘ಹೆಚ್ಚುವರಿ ಜನಶಕ್ತಿಯನ್ನು ಕ್ರಿಯಾಶೀಲಗೊಳಿಸಬಲ್ಲ ರಾಷ್ಟ್ರವ್ಯಾಪಿ ವಿವಿಧೋದ್ದೇಶ ಪೈಲಟ್‌ ಯೋಜನೆಗಳ ಜಾಲ ರಚಿಸಬೇಕೆಂದು ನಾನು ಒತ್ತಾಯ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT