<p><strong>‘ರಾಜ್ಯ ಸರ್ಕಾರ ಉರುಳಿಸಲು ದೆಹಲಿಯಲ್ಲಿ ಹಣ ಸಿದ್ಧ ಎಂಬಮಾತು ತೀರಾ ತಪ್ಪು’<br />ಬೆಂಗಳೂರು, ಜೂನ್ 10–</strong> ಮೈಸೂರು ಸರ್ಕಾರವನ್ನು ಉರುಳಿಸಲು ದೆಹಲಿಯಲ್ಲಿ ಹಣ ಸಿದ್ಧವಾಗಿದೆ ಎಂಬ ಹೇಳಿಕೆ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಶ್ರೀ ಕೆ.ಕೆ.ಷಾ ಅವರು ‘ಇಂದು ಈ ರೀತಿಯ ಹೇಳಿಕೆ ನೀಡುವುದು ತೀರಾ ತಪ್ಪು. ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಇದ್ದರೂ ವ್ಯಕ್ತಿಶಃ ಮಿತ್ರರಾಗಿರುವ ಮನೋಭಾವ ಬೇಕು’ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.</p>.<p>‘ಆಡಳಿತ ಕಾಂಗ್ರೆಸ್ಸಿಗೆ ಹೊಸ ಕಚೇರಿಗಳನ್ನು ಕೊಳ್ಳಲು ಹಣ ಇಲ್ಲ. ವಾಹನಗಳಿಗಂತೂ ಇಲ್ಲವೇ ಇಲ್ಲ. ಕಚೇರಿಗಳ ಕನಿಷ್ಠ ಅಗತ್ಯ ಪೂರೈಸಲೇ ಸಾಧ್ಯವಾಗದಿರುವಾಗ ಸರ್ಕಾರ ಉರುಳಿಸಲು ಹಣ ಸಿದ್ಧ ಎಂಬ ಮಾತು ಕೇಳಿ ನಗಬೇಕಾಗಿದೆ’ ಎಂದು ಅವರು ವರದಿಗಾರರೊಡನೆ ಮಾತನಾಡುತ್ತಾ ಹೇಳಿದರು.</p>.<p><strong>ಅಧಿಕ ಉದ್ಯೋಗಾವಕಾಶ: ಪ್ರೋತ್ಸಾಹಕ ವಿಧಾನಕ್ಕೆರಾಷ್ಟ್ರಪತಿ ಒತ್ತಾಯ<br />ಜಿನೀವಾ, ಜೂನ್ 10– </strong>ಅಭಿವೃದ್ಧಿಯ ಎಲ್ಲ ಮಾರ್ಗಗಳ ಮೂಲಕವೂ ಇಡೀ ಹೆಚ್ಚುವರಿ ಜನಶಕ್ತಿಯನ್ನು ಬಳಸಿಕೊಳ್ಳಲು ಸಾಧ್ಯವಾಗುವಂತೆ ಹೆಚ್ಚು ಉದ್ಯೋಗಾವಕಾಶಗಳನ್ನು ಪ್ರೋತ್ಸಾಹಿಸಬಲ್ಲ ವಿಧಾನವೊಂದನ್ನು ರೂಪಿಸಬೇಕೆಂದು ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರು ಇಂದು ಕರೆ ಕೊಟ್ಟಿದ್ದಾರೆ.</p>.<p>121 ರಾಷ್ಟ್ರಗಳ ಅಂತರರಾಷ್ಟ್ರೀಯ ವಾರ್ಷಿಕ ಕಾರ್ಮಿಕ ಸಮ್ಮೇಳನವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ‘ಹೆಚ್ಚುವರಿ ಜನಶಕ್ತಿಯನ್ನು ಕ್ರಿಯಾಶೀಲಗೊಳಿಸಬಲ್ಲ ರಾಷ್ಟ್ರವ್ಯಾಪಿ ವಿವಿಧೋದ್ದೇಶ ಪೈಲಟ್ ಯೋಜನೆಗಳ ಜಾಲ ರಚಿಸಬೇಕೆಂದು ನಾನು ಒತ್ತಾಯ ಮಾಡುತ್ತೇನೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ರಾಜ್ಯ ಸರ್ಕಾರ ಉರುಳಿಸಲು ದೆಹಲಿಯಲ್ಲಿ ಹಣ ಸಿದ್ಧ ಎಂಬಮಾತು ತೀರಾ ತಪ್ಪು’<br />ಬೆಂಗಳೂರು, ಜೂನ್ 10–</strong> ಮೈಸೂರು ಸರ್ಕಾರವನ್ನು ಉರುಳಿಸಲು ದೆಹಲಿಯಲ್ಲಿ ಹಣ ಸಿದ್ಧವಾಗಿದೆ ಎಂಬ ಹೇಳಿಕೆ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಶ್ರೀ ಕೆ.ಕೆ.ಷಾ ಅವರು ‘ಇಂದು ಈ ರೀತಿಯ ಹೇಳಿಕೆ ನೀಡುವುದು ತೀರಾ ತಪ್ಪು. ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಇದ್ದರೂ ವ್ಯಕ್ತಿಶಃ ಮಿತ್ರರಾಗಿರುವ ಮನೋಭಾವ ಬೇಕು’ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.</p>.<p>‘ಆಡಳಿತ ಕಾಂಗ್ರೆಸ್ಸಿಗೆ ಹೊಸ ಕಚೇರಿಗಳನ್ನು ಕೊಳ್ಳಲು ಹಣ ಇಲ್ಲ. ವಾಹನಗಳಿಗಂತೂ ಇಲ್ಲವೇ ಇಲ್ಲ. ಕಚೇರಿಗಳ ಕನಿಷ್ಠ ಅಗತ್ಯ ಪೂರೈಸಲೇ ಸಾಧ್ಯವಾಗದಿರುವಾಗ ಸರ್ಕಾರ ಉರುಳಿಸಲು ಹಣ ಸಿದ್ಧ ಎಂಬ ಮಾತು ಕೇಳಿ ನಗಬೇಕಾಗಿದೆ’ ಎಂದು ಅವರು ವರದಿಗಾರರೊಡನೆ ಮಾತನಾಡುತ್ತಾ ಹೇಳಿದರು.</p>.<p><strong>ಅಧಿಕ ಉದ್ಯೋಗಾವಕಾಶ: ಪ್ರೋತ್ಸಾಹಕ ವಿಧಾನಕ್ಕೆರಾಷ್ಟ್ರಪತಿ ಒತ್ತಾಯ<br />ಜಿನೀವಾ, ಜೂನ್ 10– </strong>ಅಭಿವೃದ್ಧಿಯ ಎಲ್ಲ ಮಾರ್ಗಗಳ ಮೂಲಕವೂ ಇಡೀ ಹೆಚ್ಚುವರಿ ಜನಶಕ್ತಿಯನ್ನು ಬಳಸಿಕೊಳ್ಳಲು ಸಾಧ್ಯವಾಗುವಂತೆ ಹೆಚ್ಚು ಉದ್ಯೋಗಾವಕಾಶಗಳನ್ನು ಪ್ರೋತ್ಸಾಹಿಸಬಲ್ಲ ವಿಧಾನವೊಂದನ್ನು ರೂಪಿಸಬೇಕೆಂದು ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರು ಇಂದು ಕರೆ ಕೊಟ್ಟಿದ್ದಾರೆ.</p>.<p>121 ರಾಷ್ಟ್ರಗಳ ಅಂತರರಾಷ್ಟ್ರೀಯ ವಾರ್ಷಿಕ ಕಾರ್ಮಿಕ ಸಮ್ಮೇಳನವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ‘ಹೆಚ್ಚುವರಿ ಜನಶಕ್ತಿಯನ್ನು ಕ್ರಿಯಾಶೀಲಗೊಳಿಸಬಲ್ಲ ರಾಷ್ಟ್ರವ್ಯಾಪಿ ವಿವಿಧೋದ್ದೇಶ ಪೈಲಟ್ ಯೋಜನೆಗಳ ಜಾಲ ರಚಿಸಬೇಕೆಂದು ನಾನು ಒತ್ತಾಯ ಮಾಡುತ್ತೇನೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>