‘ರಾಜ್ಯ ಸರ್ಕಾರ ಉರುಳಿಸಲು ದೆಹಲಿಯಲ್ಲಿ ಹಣ ಸಿದ್ಧ ಎಂಬಮಾತು ತೀರಾ ತಪ್ಪು’
ಬೆಂಗಳೂರು, ಜೂನ್ 10– ಮೈಸೂರು ಸರ್ಕಾರವನ್ನು ಉರುಳಿಸಲು ದೆಹಲಿಯಲ್ಲಿ ಹಣ ಸಿದ್ಧವಾಗಿದೆ ಎಂಬ ಹೇಳಿಕೆ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಶ್ರೀ ಕೆ.ಕೆ.ಷಾ ಅವರು ‘ಇಂದು ಈ ರೀತಿಯ ಹೇಳಿಕೆ ನೀಡುವುದು ತೀರಾ ತಪ್ಪು. ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಇದ್ದರೂ ವ್ಯಕ್ತಿಶಃ ಮಿತ್ರರಾಗಿರುವ ಮನೋಭಾವ ಬೇಕು’ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.