<p><strong>‘ಜನತೆಯನ್ನು ಮರುಳು ಮಾಡಲು ಏನೆಲ್ಲ ನಾಟಕ’</strong></p>.<p><strong>ಬೆಂಗಳೂರು, ಜುಲೈ 10–</strong> ಬ್ಯಾಂಕ್ ರಾಷ್ಟ್ರೀಕರಣದಿಂದ ಹಿಡಿದು ಈಗ ಆಡಿಕೊಳ್ಳುತ್ತಿರುವ ಔಷಧಿ ಬೆಲೆ ನಿಯಂತ್ರಣದವರೆಗಿನ ಮಾತುಕತೆಗಳೆಲ್ಲ ಶ್ರೀಸಾಮಾನ್ಯರ ಎದುರು ‘ಹೊಗೆ ಪರದೆ’ ಹಿಡಿಯುವ ಪ್ರಯತ್ನವಾಗಿದೆ ಎಂದು ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪನವರು ಇಂದು ಇಲ್ಲಿ ಹೇಳಿದರು.</p>.<p>‘ಬ್ಯಾಂಕ್ ರಾಷ್ಟ್ರೀಕರಣದಿಂದ ಏನಾಯಿತು? ನೀವೇ ಒಂದು ಸಮೀಕ್ಷೆ ಮಾಡಿ ತಿಳಿದುಕೊಳ್ಳಿ’ ಎಂದು ಅವರು ವರದಿಗಾರರಿಗೆ ಹೇಳಿದರು.</p>.<p><strong>ಆಜ್ಞೆಪಾಲಕರು</strong></p>.<p><strong>ಬೆಂಗಳೂರು, ಜುಲೈ 10–</strong> ‘ಸಿಂಡಿಕೇಟ್’ ಎಂಬ ಶಬ್ದ ಕೇಳಿದರೆ ಕೆಲವು ದಿನಗಳ ಹಿಂದಿನವರೆಗೂ ಅಸಮಾಧಾನ ಸೂಚಿಸುತ್ತಿದ್ದ ಸಂಸ್ಥಾ ಕಾಂಗ್ರೆಸ್ಸಿನ ಅಧ್ಯಕ್ಷ ಶ್ರೀ ನಿಜಲಿಂಗಪ್ಪನವರು, ಇಂದು ಆ ಶಬ್ದದ ಅರ್ಥವ್ಯಾಪ್ತಿಯ ದೃಷ್ಟಿಯಿಂದ ಅದು ತಮ್ಮ ಪಕ್ಷದ ಹೆಸರಾಗಬಹುದು ಎಂದು ಒಪ್ಪಿಕೊಂಡರು.</p>.<p>‘ಸಿಂಡಿಕೇಟ್’ ಎಂದರೆ ಹಲವರು ಸೇರಿರುವ ಒಂದು ಗುಂಪು. ಆದರೆ ‘ಇಂಡಿಕೇಟ್’ ಎಂದರೆ ಒಂದು ವ್ಯಕ್ತಿಯ ಸಂಸ್ಥೆ. ಇಂದು ಸಿಂಡಿಕೇಟಿಗೇ ಜನಬಲ ಹೆಚ್ಚು ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.</p>.<p>ಪ್ರಧಾನಿ ಸರ್ವಾಧಿಕಾರಿಯಾಗುತ್ತಿದ್ದಾರೆ ಎಂಬ ತಮ್ಮ ವಾದವನ್ನು ಪುನರ್ ಪ್ರತಿಪಾದಿಸಿ, ಈಚಿನ ಸಚಿವ ಸಂಪುಟದ ಪುನರ್ರಚನೆ ಅದನ್ನು ಸಾಧಿಸಿ ತೋರಿಸಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಜನತೆಯನ್ನು ಮರುಳು ಮಾಡಲು ಏನೆಲ್ಲ ನಾಟಕ’</strong></p>.<p><strong>ಬೆಂಗಳೂರು, ಜುಲೈ 10–</strong> ಬ್ಯಾಂಕ್ ರಾಷ್ಟ್ರೀಕರಣದಿಂದ ಹಿಡಿದು ಈಗ ಆಡಿಕೊಳ್ಳುತ್ತಿರುವ ಔಷಧಿ ಬೆಲೆ ನಿಯಂತ್ರಣದವರೆಗಿನ ಮಾತುಕತೆಗಳೆಲ್ಲ ಶ್ರೀಸಾಮಾನ್ಯರ ಎದುರು ‘ಹೊಗೆ ಪರದೆ’ ಹಿಡಿಯುವ ಪ್ರಯತ್ನವಾಗಿದೆ ಎಂದು ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪನವರು ಇಂದು ಇಲ್ಲಿ ಹೇಳಿದರು.</p>.<p>‘ಬ್ಯಾಂಕ್ ರಾಷ್ಟ್ರೀಕರಣದಿಂದ ಏನಾಯಿತು? ನೀವೇ ಒಂದು ಸಮೀಕ್ಷೆ ಮಾಡಿ ತಿಳಿದುಕೊಳ್ಳಿ’ ಎಂದು ಅವರು ವರದಿಗಾರರಿಗೆ ಹೇಳಿದರು.</p>.<p><strong>ಆಜ್ಞೆಪಾಲಕರು</strong></p>.<p><strong>ಬೆಂಗಳೂರು, ಜುಲೈ 10–</strong> ‘ಸಿಂಡಿಕೇಟ್’ ಎಂಬ ಶಬ್ದ ಕೇಳಿದರೆ ಕೆಲವು ದಿನಗಳ ಹಿಂದಿನವರೆಗೂ ಅಸಮಾಧಾನ ಸೂಚಿಸುತ್ತಿದ್ದ ಸಂಸ್ಥಾ ಕಾಂಗ್ರೆಸ್ಸಿನ ಅಧ್ಯಕ್ಷ ಶ್ರೀ ನಿಜಲಿಂಗಪ್ಪನವರು, ಇಂದು ಆ ಶಬ್ದದ ಅರ್ಥವ್ಯಾಪ್ತಿಯ ದೃಷ್ಟಿಯಿಂದ ಅದು ತಮ್ಮ ಪಕ್ಷದ ಹೆಸರಾಗಬಹುದು ಎಂದು ಒಪ್ಪಿಕೊಂಡರು.</p>.<p>‘ಸಿಂಡಿಕೇಟ್’ ಎಂದರೆ ಹಲವರು ಸೇರಿರುವ ಒಂದು ಗುಂಪು. ಆದರೆ ‘ಇಂಡಿಕೇಟ್’ ಎಂದರೆ ಒಂದು ವ್ಯಕ್ತಿಯ ಸಂಸ್ಥೆ. ಇಂದು ಸಿಂಡಿಕೇಟಿಗೇ ಜನಬಲ ಹೆಚ್ಚು ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.</p>.<p>ಪ್ರಧಾನಿ ಸರ್ವಾಧಿಕಾರಿಯಾಗುತ್ತಿದ್ದಾರೆ ಎಂಬ ತಮ್ಮ ವಾದವನ್ನು ಪುನರ್ ಪ್ರತಿಪಾದಿಸಿ, ಈಚಿನ ಸಚಿವ ಸಂಪುಟದ ಪುನರ್ರಚನೆ ಅದನ್ನು ಸಾಧಿಸಿ ತೋರಿಸಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>