ಬೆಂಗಳೂರು, ಜುಲೈ 10– ಬ್ಯಾಂಕ್ ರಾಷ್ಟ್ರೀಕರಣದಿಂದ ಹಿಡಿದು ಈಗ ಆಡಿಕೊಳ್ಳುತ್ತಿರುವ ಔಷಧಿ ಬೆಲೆ ನಿಯಂತ್ರಣದವರೆಗಿನ ಮಾತುಕತೆಗಳೆಲ್ಲ ಶ್ರೀಸಾಮಾನ್ಯರ ಎದುರು ‘ಹೊಗೆ ಪರದೆ’ ಹಿಡಿಯುವ ಪ್ರಯತ್ನವಾಗಿದೆ ಎಂದು ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪನವರು ಇಂದು ಇಲ್ಲಿ ಹೇಳಿದರು.
‘ಬ್ಯಾಂಕ್ ರಾಷ್ಟ್ರೀಕರಣದಿಂದ ಏನಾಯಿತು? ನೀವೇ ಒಂದು ಸಮೀಕ್ಷೆ ಮಾಡಿ ತಿಳಿದುಕೊಳ್ಳಿ’ ಎಂದು ಅವರು ವರದಿಗಾರರಿಗೆ ಹೇಳಿದರು.
ಆಜ್ಞೆಪಾಲಕರು
ಬೆಂಗಳೂರು, ಜುಲೈ 10– ‘ಸಿಂಡಿಕೇಟ್’ ಎಂಬ ಶಬ್ದ ಕೇಳಿದರೆ ಕೆಲವು ದಿನಗಳ ಹಿಂದಿನವರೆಗೂ ಅಸಮಾಧಾನ ಸೂಚಿಸುತ್ತಿದ್ದ ಸಂಸ್ಥಾ ಕಾಂಗ್ರೆಸ್ಸಿನ ಅಧ್ಯಕ್ಷ ಶ್ರೀ ನಿಜಲಿಂಗಪ್ಪನವರು, ಇಂದು ಆ ಶಬ್ದದ ಅರ್ಥವ್ಯಾಪ್ತಿಯ ದೃಷ್ಟಿಯಿಂದ ಅದು ತಮ್ಮ ಪಕ್ಷದ ಹೆಸರಾಗಬಹುದು ಎಂದು ಒಪ್ಪಿಕೊಂಡರು.
‘ಸಿಂಡಿಕೇಟ್’ ಎಂದರೆ ಹಲವರು ಸೇರಿರುವ ಒಂದು ಗುಂಪು. ಆದರೆ ‘ಇಂಡಿಕೇಟ್’ ಎಂದರೆ ಒಂದು ವ್ಯಕ್ತಿಯ ಸಂಸ್ಥೆ. ಇಂದು ಸಿಂಡಿಕೇಟಿಗೇ ಜನಬಲ ಹೆಚ್ಚು ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ಪ್ರಧಾನಿ ಸರ್ವಾಧಿಕಾರಿಯಾಗುತ್ತಿದ್ದಾರೆ ಎಂಬ ತಮ್ಮ ವಾದವನ್ನು ಪುನರ್ ಪ್ರತಿಪಾದಿಸಿ, ಈಚಿನ ಸಚಿವ ಸಂಪುಟದ ಪುನರ್ರಚನೆ ಅದನ್ನು ಸಾಧಿಸಿ ತೋರಿಸಿದೆ ಎಂದರು.