ಕನ್ನಡಿಗರಿಗೆ ಮಹಾಜನ್ ವರದಿಯೊಂದೇ ಒಪ್ಪಿಗೆ
ನವದೆಹಲಿ, ಆ. 19– ಮೈಸೂರು– ಮಹಾರಾಷ್ಟ್ರ ಗಡಿ ವಿಷಯದಲ್ಲಿ ಮಹಾಜನ್ ಆಯೋಗದ ವರದಿಯನ್ನು ಕಾರ್ಯಗತಗೊಳಿಸಬೇಕೆಂದು ಮೈಸೂರು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಇಂದು ಒತ್ತಾಯ ಸಲ್ಲಿಸಿ, ಬೇರಾವುದೇ ಮಾರ್ಗವು ತಮ್ಮ ರಾಜ್ಯದ ಜನತೆಗೆ ಸಮ್ಮತಾರ್ಹವಲ್ಲವೆಂದು ಸ್ಪಷ್ಟಪಡಿಸಿದರು.