<p><strong>ಪಾಕ್ಗೆ ಅಮೆರಿಕ ಶಸ್ತ್ರಾಸ್ತ್ರದಿಂದ ಭಾರತಕ್ಕೆ ಆಪತ್ತು– ಮಧೋಕ್</strong></p>.<p><strong>ನವದೆಹಲಿ, ಅ. 11–</strong> ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳ ಸರಬರಾಜನ್ನು ಪುನರಾರಂಭಿಸುವ ಅಮೆರಿಕದ ನಿರ್ಧಾರವನ್ನು ಜನಸಂಘದ ನಾಯಕ ಶ್ರೀ ಬಲರಾಜ ಮಧೋಕ್ ಅವರು ಇಂದು ಟೀಕಿಸಿದರು.</p>.<p>ಪಾಕಿಸ್ತಾನದೊಡನೆ ತನ್ನ ಬಾಂಧವ್ಯ ಸುಧಾರಿಸಿಕೊಳ್ಳಲು ಭಾರತ ಸರ್ವಪ್ರಯತ್ನ ನಡೆಸುತ್ತಿರುವಾಗ ಯಾವುದೇ ಹೊಸ ಶಸ್ತ್ರಾಸ್ತ್ರ ಒಪ್ಪಂದವು ಅದು ಭಾರತದ ವಿರುದ್ಧ ಜಗಳಗಂಟಿಯಾಗುವಂತೆ ಪ್ರಚೋದಿಸುವುದೆಂದು ಶ್ರೀ ಮಧೋಕ್ ಅವರು ಯುಎನ್ಐಗೆ ತಿಳಿಸಿದರು.</p>.<p>ಪಡೆಗಳ ಜಮಾವಣೆ: ಭಾರತ–ಪಾಕಿಸ್ತಾನ ಗಡಿಯಲ್ಲಿ ಈಗಾಗಲೇ ಪಾಕಿಸ್ತಾನಿ ಪಡೆಗಳು ಜಮಾಯಿಸುತ್ತಿವೆಯೆಂದ ಶ್ರೀ ಮಧೋಕ್ ಅವರು ಅಮೆರಿಕದ ಈ ‘ಅತ್ಯಂತ ಖಂಡನೀಯ’ ಕ್ರಮವು ರಾಷ್ಟ್ರಕ್ಕೆ ತತ್ಕ್ಷಣ ಆಪತ್ತು ಒಡ್ಡಿದೆಯೆಂದರು.</p>.<p>ಅಮೆರಿಕದ ವಿರುದ್ಧ ಭಾರತ ತ್ವರಿತವಾಗಿ ಪ್ರತಿಭಟಿಸಿದೆ. ರಷ್ಯಾವು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಸುರಿದಾಗ ಅದು ಈಗಿನಂತೆ ನಡೆದುಕೊಳ್ಳಲಿಲ್ಲವೆಂದು ಶ್ರೀ ಮಧೋಕ್ ಹೇಳಿದರು.</p>.<p><strong>ಶಾಸ್ತ್ರಿ ನಿಧನ ಕುರಿತು ನ್ಯಾಯಾಂಗ ತನಿಖೆ ಇಲ್ಲ</strong></p>.<p><strong>ಜೋಧ್ಪುರ, ಅ. 11– </strong>ತಷ್ಕೆಂಟ್ನಲ್ಲಿ ಸಂಭವಿಸಿದ ದಿವಂಗತ ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ನಿಧನಕ್ಕೆ ಕಾರಣ ಕುರಿತು ನ್ಯಾಯಾಂಗ ತನಿಖೆ ನಡೆಸುವ ಉದ್ದೇಶ ಸರ್ಕಾರಕ್ಕಿಲ್ಲವೆಂದು ಕೇಂದ್ರ, ಗೃಹ ಶಾಖೆ ಸ್ಟೇಟ್ ಸಚಿವ ರಾಮ್ನಿವಾಸ್ ಮಿರ್ಧಾ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಕ್ಗೆ ಅಮೆರಿಕ ಶಸ್ತ್ರಾಸ್ತ್ರದಿಂದ ಭಾರತಕ್ಕೆ ಆಪತ್ತು– ಮಧೋಕ್</strong></p>.<p><strong>ನವದೆಹಲಿ, ಅ. 11–</strong> ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳ ಸರಬರಾಜನ್ನು ಪುನರಾರಂಭಿಸುವ ಅಮೆರಿಕದ ನಿರ್ಧಾರವನ್ನು ಜನಸಂಘದ ನಾಯಕ ಶ್ರೀ ಬಲರಾಜ ಮಧೋಕ್ ಅವರು ಇಂದು ಟೀಕಿಸಿದರು.</p>.<p>ಪಾಕಿಸ್ತಾನದೊಡನೆ ತನ್ನ ಬಾಂಧವ್ಯ ಸುಧಾರಿಸಿಕೊಳ್ಳಲು ಭಾರತ ಸರ್ವಪ್ರಯತ್ನ ನಡೆಸುತ್ತಿರುವಾಗ ಯಾವುದೇ ಹೊಸ ಶಸ್ತ್ರಾಸ್ತ್ರ ಒಪ್ಪಂದವು ಅದು ಭಾರತದ ವಿರುದ್ಧ ಜಗಳಗಂಟಿಯಾಗುವಂತೆ ಪ್ರಚೋದಿಸುವುದೆಂದು ಶ್ರೀ ಮಧೋಕ್ ಅವರು ಯುಎನ್ಐಗೆ ತಿಳಿಸಿದರು.</p>.<p>ಪಡೆಗಳ ಜಮಾವಣೆ: ಭಾರತ–ಪಾಕಿಸ್ತಾನ ಗಡಿಯಲ್ಲಿ ಈಗಾಗಲೇ ಪಾಕಿಸ್ತಾನಿ ಪಡೆಗಳು ಜಮಾಯಿಸುತ್ತಿವೆಯೆಂದ ಶ್ರೀ ಮಧೋಕ್ ಅವರು ಅಮೆರಿಕದ ಈ ‘ಅತ್ಯಂತ ಖಂಡನೀಯ’ ಕ್ರಮವು ರಾಷ್ಟ್ರಕ್ಕೆ ತತ್ಕ್ಷಣ ಆಪತ್ತು ಒಡ್ಡಿದೆಯೆಂದರು.</p>.<p>ಅಮೆರಿಕದ ವಿರುದ್ಧ ಭಾರತ ತ್ವರಿತವಾಗಿ ಪ್ರತಿಭಟಿಸಿದೆ. ರಷ್ಯಾವು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಸುರಿದಾಗ ಅದು ಈಗಿನಂತೆ ನಡೆದುಕೊಳ್ಳಲಿಲ್ಲವೆಂದು ಶ್ರೀ ಮಧೋಕ್ ಹೇಳಿದರು.</p>.<p><strong>ಶಾಸ್ತ್ರಿ ನಿಧನ ಕುರಿತು ನ್ಯಾಯಾಂಗ ತನಿಖೆ ಇಲ್ಲ</strong></p>.<p><strong>ಜೋಧ್ಪುರ, ಅ. 11– </strong>ತಷ್ಕೆಂಟ್ನಲ್ಲಿ ಸಂಭವಿಸಿದ ದಿವಂಗತ ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ನಿಧನಕ್ಕೆ ಕಾರಣ ಕುರಿತು ನ್ಯಾಯಾಂಗ ತನಿಖೆ ನಡೆಸುವ ಉದ್ದೇಶ ಸರ್ಕಾರಕ್ಕಿಲ್ಲವೆಂದು ಕೇಂದ್ರ, ಗೃಹ ಶಾಖೆ ಸ್ಟೇಟ್ ಸಚಿವ ರಾಮ್ನಿವಾಸ್ ಮಿರ್ಧಾ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>