<p><strong>ದೇಶದಾದ್ಯಂತ ‘ಭೂ ಗ್ರಹಣ’ ಚಳವಳಿ<br />ಬೆಂಗಳೂರು, ಆ. 8–</strong> ಭೂಮಿ ಇಲ್ಲದವರಿಗೆ ಹಂಚುವುದಕ್ಕಾಗಿ ಸರ್ಕಾರಕ್ಕೆ ಮತ್ತು ಖಾಸಗಿಯವರಿಗೆ ಸೇರಿದ ಹೆಚ್ಚುವರಿ ಭೂಮಿಯನ್ನು ಆಕ್ರಮಿಸಿಕೊಳ್ಳಲು ದೇಶದ ನಾನಾ ಭಾಗಗಳಲ್ಲಿ ಭಾನುವಾರ ‘ಭೂ ಗ್ರಹಣ’ ಚಳವಳಿ ಪ್ರಾರಂಭವಾಯಿತು.</p>.<p>ಕೆಲವು ರಾಜ್ಯಗಳಲ್ಲಿ ಸಂಯುಕ್ತ ಸೋಷಲಿಸ್ಟ್ ಪಕ್ಷ ಮತ್ತು ಪ್ರಜಾ ಸೋಷಲಿಸ್ಟ್ ಪಕ್ಷಗಳು ಸಂಯುಕ್ತವಾಗಿ, ಇನ್ನು ಕೆಲವು ರಾಜ್ಯಗಳಲ್ಲಿ ಎಸ್.ಎಸ್.ಪಿ ಮಾತ್ರ ಮತ್ತು ಇತರ ರಾಜ್ಯಗಳಲ್ಲಿ ಸ್ವತಂತ್ರವಾಗಿ ಭಾರತ ಕಮ್ಯುನಿಷ್ಟ್ ಪಕ್ಷ ಈ ‘ಭೂ ಗ್ರಹಣ’ ಚಳವಳಿಯನ್ನು ಪ್ರಾರಂಭಿಸಿವೆ.</p>.<p>ವಾರಾಣಸಿಯಲ್ಲಿ ಸಂಸತ್ತಿನ ಎಸ್.ಎಸ್.ಪಿ ಸದಸ್ಯ ಶ್ರೀ ಮಧುಲಿಮಯೆ, ಮುಂಬೈಯಲ್ಲಿ ಪಿ.ಎಸ್.ಪಿ.ಯ ಸಂಸತ್ ಸದಸ್ಯ ಶ್ರೀ ನಾಥ್ಪೈ ಇಂದು ಬಂಧಿತರಾದವರಲ್ಲಿ ಮುಖ್ಯರು.</p>.<p>ಚಳವಳಿಯಲ್ಲಿ ಭಾಗವಹಿಸಿದವರಲ್ಲಿ ಅನೇಕ ಸಾವಿರ ಮಂದಿಯನ್ನು ಪೊಲೀಸರು ಬಂಧಿಸಿದರು. ತಮಿಳುನಾಡಿನಲ್ಲಿ ಬಂಧಿತರಾದವರ ಸಂಖ್ಯೆಯೇ ಹೆಚ್ಚು. ಅಲ್ಲಿ ಇಂದು ಮಧ್ಯಾಹ್ನದವರೆಗೆ 3,193 ಮಂದಿಯನ್ನು ಬಂಧಿಸಲಾಗಿತ್ತು.</p>.<p><strong>ಸಣ್ಣ ಕಾರು ಕಾರ್ಖಾನೆಗೆ ಎಚ್ಎಂಟಿ ನೆರವು<br />ನವದೆಹಲಿ, ಆ. 9–</strong> ಕಳೆದ ವಾರ ಕೇಂದ್ರ ಸಂಪುಟವು ಒಪ್ಪಿಗೆ ನೀಡಿದ ಸಣ್ಣ ಕಾರು ಯೋಜನೆಯನ್ನು ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಸಂಸ್ಥೆಯ ನೆರವಿನೊಡನೆ ಕಾರ್ಯಗತಗೊಳಿಸುವುದು ಈಗ ಖಚಿತವೆನಿಸಿದೆ.</p>.<p>ಸಣ್ಣ ಕಾರು ಕಾರ್ಖಾನೆಗೆ ಬೇಕಾದ ಬಹುತೇಕ ಯಂತ್ರೋಪಕರಣಗಳನ್ನು ತಯಾರಿಸಲು ಎಚ್ಎಂಟಿಯಲ್ಲಿ ಸೌಲಭ್ಯವಿರುವುದು ಇದಕ್ಕೆ ಕಾರಣ.</p>.<p>ಎಚ್ಎಂಟಿ ಅಧ್ಯಕ್ಷ ಶ್ರೀ ಎಸ್.ಎಂ.ಪಾಟೀಲರು ಈ ಸಂಬಂಧದಲ್ಲಿ ಪೂರ್ವಭಾವಿ ಮಾತುಕತೆಗಾಗಿ ಈಗಾಗಲೇ ದೆಹಲಿಗೆ ಬಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇಶದಾದ್ಯಂತ ‘ಭೂ ಗ್ರಹಣ’ ಚಳವಳಿ<br />ಬೆಂಗಳೂರು, ಆ. 8–</strong> ಭೂಮಿ ಇಲ್ಲದವರಿಗೆ ಹಂಚುವುದಕ್ಕಾಗಿ ಸರ್ಕಾರಕ್ಕೆ ಮತ್ತು ಖಾಸಗಿಯವರಿಗೆ ಸೇರಿದ ಹೆಚ್ಚುವರಿ ಭೂಮಿಯನ್ನು ಆಕ್ರಮಿಸಿಕೊಳ್ಳಲು ದೇಶದ ನಾನಾ ಭಾಗಗಳಲ್ಲಿ ಭಾನುವಾರ ‘ಭೂ ಗ್ರಹಣ’ ಚಳವಳಿ ಪ್ರಾರಂಭವಾಯಿತು.</p>.<p>ಕೆಲವು ರಾಜ್ಯಗಳಲ್ಲಿ ಸಂಯುಕ್ತ ಸೋಷಲಿಸ್ಟ್ ಪಕ್ಷ ಮತ್ತು ಪ್ರಜಾ ಸೋಷಲಿಸ್ಟ್ ಪಕ್ಷಗಳು ಸಂಯುಕ್ತವಾಗಿ, ಇನ್ನು ಕೆಲವು ರಾಜ್ಯಗಳಲ್ಲಿ ಎಸ್.ಎಸ್.ಪಿ ಮಾತ್ರ ಮತ್ತು ಇತರ ರಾಜ್ಯಗಳಲ್ಲಿ ಸ್ವತಂತ್ರವಾಗಿ ಭಾರತ ಕಮ್ಯುನಿಷ್ಟ್ ಪಕ್ಷ ಈ ‘ಭೂ ಗ್ರಹಣ’ ಚಳವಳಿಯನ್ನು ಪ್ರಾರಂಭಿಸಿವೆ.</p>.<p>ವಾರಾಣಸಿಯಲ್ಲಿ ಸಂಸತ್ತಿನ ಎಸ್.ಎಸ್.ಪಿ ಸದಸ್ಯ ಶ್ರೀ ಮಧುಲಿಮಯೆ, ಮುಂಬೈಯಲ್ಲಿ ಪಿ.ಎಸ್.ಪಿ.ಯ ಸಂಸತ್ ಸದಸ್ಯ ಶ್ರೀ ನಾಥ್ಪೈ ಇಂದು ಬಂಧಿತರಾದವರಲ್ಲಿ ಮುಖ್ಯರು.</p>.<p>ಚಳವಳಿಯಲ್ಲಿ ಭಾಗವಹಿಸಿದವರಲ್ಲಿ ಅನೇಕ ಸಾವಿರ ಮಂದಿಯನ್ನು ಪೊಲೀಸರು ಬಂಧಿಸಿದರು. ತಮಿಳುನಾಡಿನಲ್ಲಿ ಬಂಧಿತರಾದವರ ಸಂಖ್ಯೆಯೇ ಹೆಚ್ಚು. ಅಲ್ಲಿ ಇಂದು ಮಧ್ಯಾಹ್ನದವರೆಗೆ 3,193 ಮಂದಿಯನ್ನು ಬಂಧಿಸಲಾಗಿತ್ತು.</p>.<p><strong>ಸಣ್ಣ ಕಾರು ಕಾರ್ಖಾನೆಗೆ ಎಚ್ಎಂಟಿ ನೆರವು<br />ನವದೆಹಲಿ, ಆ. 9–</strong> ಕಳೆದ ವಾರ ಕೇಂದ್ರ ಸಂಪುಟವು ಒಪ್ಪಿಗೆ ನೀಡಿದ ಸಣ್ಣ ಕಾರು ಯೋಜನೆಯನ್ನು ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಸಂಸ್ಥೆಯ ನೆರವಿನೊಡನೆ ಕಾರ್ಯಗತಗೊಳಿಸುವುದು ಈಗ ಖಚಿತವೆನಿಸಿದೆ.</p>.<p>ಸಣ್ಣ ಕಾರು ಕಾರ್ಖಾನೆಗೆ ಬೇಕಾದ ಬಹುತೇಕ ಯಂತ್ರೋಪಕರಣಗಳನ್ನು ತಯಾರಿಸಲು ಎಚ್ಎಂಟಿಯಲ್ಲಿ ಸೌಲಭ್ಯವಿರುವುದು ಇದಕ್ಕೆ ಕಾರಣ.</p>.<p>ಎಚ್ಎಂಟಿ ಅಧ್ಯಕ್ಷ ಶ್ರೀ ಎಸ್.ಎಂ.ಪಾಟೀಲರು ಈ ಸಂಬಂಧದಲ್ಲಿ ಪೂರ್ವಭಾವಿ ಮಾತುಕತೆಗಾಗಿ ಈಗಾಗಲೇ ದೆಹಲಿಗೆ ಬಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>