ರಾಜಧನ ರದ್ದು ಮಸೂದೆಗೆ ರಾಜ್ಯಸಭೆಯಲ್ಲಿ ಪರಾಭವ
ನವದೆಹಲಿ, ಸೆ.5– ರಾಜಧನ ಮತ್ತು ಮಾಜಿ ಅರಸರ ವಿಶೇಷ ಹಕ್ಕುಗಳನ್ನು ರದ್ದುಗೊಳಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆ ಇಂದು ಕೇವಲ ಒಂದು ಮತದಿಂದ ತಿರಸ್ಕರಿಸಿತು. ಮಸೂದೆಯನ್ನು ಪರಿಶೀಲನೆಗೆ ತೆಗೆದುಕೊಳ್ಳಬೇಕೆಂಬ ಅಧಿಕೃತ ಸೂಚನೆಯ ಪರವಾಗಿ 149 ಮತಗಳೂ ವಿರುದ್ಧವಾಗಿ 75 ಮತಗಳೂ ಬಂದವು.