ರಾಷ್ಟ್ರಪತಿ ಭವನಕ್ಕಾಗಿ ದುಂದು ವೆಚ್ಚ: ತನಿಖೆಗೆ ಎಸ್.ಎಸ್.ಪಿ. ಆಗ್ರಹ
ಬೆಂಗಳೂರು, ಅ.10– ರಾಷ್ಟ್ರಪತಿ ಭವನದ ಅದ್ದೂರಿ ವೆಚ್ಚದ ಸಂಬಂಧದಲ್ಲಿ ವಿಚಾರಣೆಗಾಗಿ ಸಂಸತ್ ಸಮಿತಿಯೊಂದನ್ನು ನೇಮಿಸಬೇಕೆಂದು ಸಂಯುಕ್ತ ಸೋಷಲಿಸ್ಟ್ ಪಕ್ಷದ ಸಂಘಟನಾ ಕಾರ್ಯದರ್ಶಿ ಲಾಡ್ಲಿ ಮೋಹನ್ ನಿಘಂ ಅವರು ಶುಕ್ರವಾರ ಇಲ್ಲಿ ಒತ್ತಾಯಪಡಿಸಿದರು.
ಈ ವರ್ಷ ರಾಷ್ಟ್ರಪತಿ ಭವನಕ್ಕಾಗಿ ಮುಂಗಡ ಪತ್ರದಲ್ಲಿ ₹ 42 ಲಕ್ಷ ಒದಗಿಸಿರುವುದನ್ನು ನಿಘಂ ಅವರು ಪ್ರಶ್ನಿಸಿ ಈ ದುಂದುಗಾರಿಕೆ ವೆಚ್ಚದ ಬಗ್ಗೆ ವಿಚಾರಣೆ ನಡೆಸಲು ತಮ್ಮ ಪಕ್ಷ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.