ಕಾಡೇ ಸರ್ವಸ್ವ ಎಂದು ನಂಬಿ ಬದುಕಿರುವ, ಯಾರಿಗೂ ಕೇಡು ಬಯಸದ, ನಾಗರಿಕ ಸಮಾಜದ ಯಾವುದೇ ಕೆಡುಕುಗಳ ಬಗ್ಗೆ ತಿಳಿದಿರದ ಮುಗ್ಧ ಮಲೆಕುಡಿಯ ಸಮಾಜ ತಮ್ಮ ಹಕ್ಕುಗಳನ್ನು ಪ್ರಶ್ನಿಸಿದ್ದಕ್ಕಾಗಿ ಅನುಭವಿಸುವ ಕಷ್ಟಕೋಟಲೆಗಳ ಕಥಾ ಹಂದರವನ್ನು ಹೊಂದಿರುವ ಚಿತ್ರ. 19.20.21. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರ ನಿರ್ದೇಶನದ ಈ ಚಿತ್ರ, ಪ್ರಶ್ನಿಸಿದರೆ ನಿರ್ದಾಕ್ಷಿಣ್ಯವಾಗಿ ಹೊಸಕಿ ಹಾಕುವ ಪ್ರಭುತ್ವವ ದಾರ್ಷ್ಟ್ಯವನ್ನು ಸೊಗಸಾಗಿ ಚಿತ್ರಿಸಿದೆ.