ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಉಪಚುನಾವಣೆ | ಸೇವೆಯೇ ಶ್ರೀರಕ್ಷೆ ಎಂದ ಸತೀಶ ಜಾರಕಿಹೊಳಿ

Last Updated 10 ಏಪ್ರಿಲ್ 2021, 21:16 IST
ಅಕ್ಷರ ಗಾತ್ರ

ಬೆಲೆ ಏರಿಕೆ ಮತ್ತು ಅನುಕಂಪದ ಅಲೆ ಇವೆರಡರ ನಡುವಿನ ಸ್ಪರ್ಧೆಯ ಕಣದಂತೆ ಬೆಳಗಾವಿ ಉಪಚುನಾವಣೆಯ ಕಣ ಬದಲಾಗಿದೆ. ಇಬ್ಬರು ಪ್ರಬಲ ಅಭ್ಯರ್ಥಿಗಳು ತಮ್ಮ ಯೋಜನೆಗಳನ್ನು, ಆತಂಕಗಳನ್ನು ಹಾಗೂ ಯಶಸ್ಸಿನನಿರೀಕ್ಷೆಗಳನ್ನು ‘ಪ್ರಜಾವಾಣಿ’ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

*ಅಭ್ಯರ್ಥಿಯಾಗಿ ಹೇಗೆ ಸಮರ್ಥಿಸಿಕೊಳ್ತೀರಿ?

ಸಂಘಟನೆ ಮಾಡುವವರು, ಈ ಭಾಗದಲ್ಲಿ ಪರಿಚಯ ಇರುವವರು ಬೇಕಾಗಿತ್ತು. ಮುಂಚಿನಿಂದಲೂ ಕೆಲಸ ಮಾಡುವವರಿದ್ದರೆ ಹೆಚ್ಚು ಅನುಕೂಲವಾಗುತ್ತದೆ. ಶ್ರಮದ ಅಗತ್ಯವಿರುವುದಿಲ್ಲ ಎಂದು ಪಕ್ಷ ನನ್ನನ್ನು ಆಯ್ಕೆ ಮಾಡಿದೆ.

*ಬೆಂಬಲಿಗರ ಪ್ರತಿಕ್ರಿಯೆ ಹೇಗಿದೆ?
ಎರಡು ತಿಂಗಳ ಹಿಂದೆ ನನಗೂ ಮನಸ್ಸಿರಲಿಲ್ಲ. ಪಕ್ಷ ಸಂಘಟನೆಗೆ ಹಾಗೂ ಮುಂದೆ ಒಳಿತಾಗುತ್ತದೆ ಎಂದು ಒಪ್ಪಿದೆ. ಟಿಕೆಟ್ ಘೋಷಣೆ ನಂತರ ಬಹಳ ಬೆಳವಣಿಗೆ ಆದವು. ಎಲ್ಲರೂ ತಾವಾಗಿಯೇ ನಿಮ್ಮ ಪರ ಕಾರ್ಯನಿರ್ವಹಿಸುತ್ತೇವೆ ಎನ್ನುತ್ತಿದ್ದಾರೆ. ಸಂಪೂರ್ಣ ಮನಸ್ಸಿನಿಂದಲೇ ಸ್ಪರ್ಧಿಸಿದ್ದೇನೆ. ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿದೆ. ಇದು ಸಂಪೂರ್ಣ ಕಾರ್ಯಕರ್ತರ ಚುನಾವಣೆ.

*ನಿಮ್ಮನ್ನೇ ಏಕೆ ಆಯ್ಕೆ ಮಾಡಬೇಕು?
25 ವರ್ಷಗಳಿಂದ ಸಮಾಜ ಸೇವಾ ಕ್ಷೇತ್ರದಲ್ಲಿದ್ದೇನೆ. ಶಿಕ್ಷಣ, ಕೈಗಾರಿಕೆ ಸೇರಿದಂತೆ ಎಲ್ಲ ರಂಗದಲ್ಲೂ ಕೆಲಸ ಮಾಡಿದ್ದೇನೆ. ವಿಧಾನ ಪರಿಷತ್‌ ಸದಸ್ಯ, ಮೂರು ಬಾರಿ ಶಾಸಕ ಹಾಗೂ ಮಂತ್ರಿಯಾಗಿ ಜಿಲ್ಲೆಗೆ ಸೇವೆ ಮಾಡಿದ್ದೇನೆ. ಹೆಚ್ಚಿನ ಪ್ರಮಾಣದ ಸೇವೆಗೆ ಅವಕಾಶ ಕೇಳುತ್ತಿದ್ದೇನೆ. ವೈಯಕ್ತಿಕ ವರ್ಚಸ್ಸು ಕೂಡ ನೆರವಾಗಲಿದೆ.

*ಅನುಕಂಪದ ಅಲೆ ಪರಿಣಾಮ ಬೀರಲಿದೆಯೇ?
ಅನುಕಂಪದ ಅಲೆ ಯಾವ ಪರಿಣಾಮವೂ ಬೀರುವುದಿಲ್ಲ. ನನಗಿಲ್ಲಿ ಎಲ್ಲರೊಂದಿಗೆ ಉತ್ತಮ ಸ್ನೇಹವಿದೆ. ಎಲ್ಲ ಮತದವರೂ ನನ್ನೊಟ್ಟಿಗೆ ಸೌಹಾರ್ದದಿಂದ ಇದ್ದಾರೆ. ಕ್ಷೇತ್ರವು ಹಿಂದೆ ಕಾಂಗ್ರೆಸ್‌ನ ಭದ್ರಕೋಟೆ ಆಗಿತ್ತು. ಮತ್ತೆ ವಶಪಡಿಸಿಕೊಳ್ಳಲಿದ್ದೇವೆ.

*ಬೆಲೆ ಏರಿಕೆಯು ಚುನಾವಣೆಯ ಪ್ರಮುಖ ಅಸ್ತ್ರವಾಗಲಿದೆಯೇ?
ತೈಲ, ಅಡುಗೆ ಅನಿಲ ಸಿಲಿಂಡರ್ ಮತ್ತು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ನಮಗೆ ಅನುಕೂಲ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ನೀಡುತ್ತಿರುವ ಸುಳ್ಳು ಭರವಸೆಗಳೇ ಪ್ರಮುಖ ಅಸ್ತ್ರಗಳಾಗಿವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿದ್ದ ಜನಪರ ಕಾರ್ಯಕ್ರಮಗಳು ಶ್ರೀರಕ್ಷೆಯಾಗಿವೆ.

*ಸಿ.ಡಿ. ಪ್ರಕರಣ ಪರಿಣಾಮ ಬೀರುತ್ತದೆಯೇ
ಇಲ್ಲ. ಸಿ.ಡಿ. ಪ್ರಕರಣಕ್ಕೂ ಈ ಚುನಾವಣೆಗೂ ಸಂಬಂಧವಿಲ್ಲ. ಲಖನ್‌ ಬೆಂಬಲ ಅವರ ವೈಯಕ್ತಿಕ ವಿಚಾರ. ಪಕ್ಷ ಗಟ್ಟಿಯಾಗಿದೆ. ಗೋಕಾಕ ಮತ್ತು ಅರಭಾವಿಯಲ್ಲಿ ಜಾರಕಿಹೊಳಿ ಕುಟುಂಬದ ಅಭಿಮಾನಿಗಳು ಬಹಳಷ್ಟಿದ್ದಾರೆ.

*ಗೆದ್ದರೆ ಯೋಜನೆಗಳೇನು?
ಹಳ್ಳಿ, ತಾಲ್ಲೂಕು ಮಟ್ಟದಲ್ಲಿ ಉದ್ಯೋಗ ಸೃಷ್ಟಿಗೆ ಕೈಗಾರಿಕೆಗಳನ್ನು ಸ್ಥಾಪಿಸುವುದು. ನೀರಾವರಿಗೆ ಆದ್ಯತೆ ಕೊಡುವುದು. ಐಟಿ–ಬಿಟಿ ಹಬ್‌ ಮಾಡಿ ಯುವಕರಿಗೆ ನೌಕರಿ ಸಿಗುವಂತೆ ಮಾಡುವ ಕನಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT