ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡದೇ ಇದ್ದಿದ್ದರೂ ಲಿಂಗಾಯತರು ಬೆಂಬಲಿಸುತ್ತಿದ್ದುದು ಯಡಿಯೂರಪ್ಪನವರನ್ನೇ ಹೊರತು ಸಿದ್ದರಾಮಯ್ಯನವರನ್ನಲ್ಲ! ಕಾಂಗ್ರೆಸ್ ಸೋಲಿಗೆ ಕಾರಣಗಳು ಹಲವಾರಿವೆ. ಮೋದಿ, ಅಮಿತ್ ಶಾ ಮೋಡಿಯೂ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ದೊಡ್ಡ ಕಾರಣವೆಂಬುದನ್ನು ಅಲ್ಲಗಳೆಯಲಾಗದು. 'ಲಿಂಗಾಯತ ಪ್ರತ್ಯೇಕ ಧರ್ಮದ ಘೋಷಣೆಯ ಉದಾತ್ತ ಉದ್ದೇಶಗಳು ಲಿಂಗಾಯತ ಸಮುದಾಯದ ಬೇರು ಮಟ್ಟಕ್ಕೆ ಮುಟ್ಟಲಿಲ್ಲ, ಕಾಲಾವಕಾಶವೂ ಇರಲಿಲ್ಲ...' ಎಂಬ ಅಭಿಪ್ರಾಯವೇ ನಮಗೆ ಸರಿ ಎನಿಸುತ್ತದೆ.
ಬಸವಶ್ರೀ ಬಂಡೋಳಿ, ಹುಣಸಗಿ