<p>ಒಂದು ಊರು. ಆ ಊರಿನ ಮುಖ್ಯ ಬೀದಿಯ ಕೊನೆಯಲ್ಲಿ ಒಂದು ದೇವಸ್ಥಾನ. ಅದರ ಎದುರಿನ ಒಂದು ದೊಡ್ಡ ಬಂಗಲೆಯಲ್ಲಿ ಒಬ್ಬ ವೇಶ್ಯೆ ವಾಸಿಸುತ್ತಿದ್ದಳು. ಆ ದೇವಸ್ಥಾನಕ್ಕೆ ಒಬ್ಬ ಪೂಜಾರಿ. ದೀರ್ಘಕಾಲದ ಬದುಕು ಸವೆಸಿ ಇಬ್ಬರೂ ಕಾಲವಾದ ನಂತರ ಯಮಲೋಕದಲ್ಲಿ ಅವರ ಪಾಪಕರ್ಮಗಳ ಲೆಕ್ಕವನ್ನು ಪರಿಶೀಲಿಸಿ ವೇಶ್ಯೆಯನ್ನು ಸ್ವರ್ಗಕ್ಕೂ, ಆ ದೇವಸ್ಥಾನದ ಅರ್ಚಕನನ್ನು ನರಕಕ್ಕೂ ಕಳುಹಿಸಲು ಆದೇಶ ನೀಡಲಾಗುತ್ತದೆ. ಆಗ ಅರ್ಚಕನಿಗೆ ಸಿಟ್ಟು ಬಂದು ಹಾಗೇಕೆಂದು ವಿಚಾರಿಸಲಾಗಿ, ಚಿತ್ರಗುಪ್ತ, ‘ನೀನು ವೃತ್ತಿಯಿಂದ ಅರ್ಚಕನಾದರೂ ನಿನ್ನ ಮನಸೆಲ್ಲ ಆ ವೇಶ್ಯೆಯ ಮನೆಗೆ ಬಂದು ಹೋಗುವವರು, ಅಲ್ಲಿ ನಡೆಯಬಹುದಾದ ಕಾರ್ಯ ಕಲಾಪಗಳು ಮತ್ತು ಅಲ್ಲಿಗೆ ಹೋಗಲಾಗಲಿಲ್ಲವಲ್ಲ ಎನ್ನುವ ಚಿಂತೆಯಲ್ಲೇ ಮುಳುಗಿತ್ತು. ಆದರೆ ಆ ವೇಶ್ಯೆ ವೃತ್ತಿಯಲ್ಲಿ ನಿರತಳಾದರೂ ಅವಳ ಮನಸ್ಸು ತಾನು ಹೋಗಲಾಗದ ಆ ದೇವಸ್ಥಾನದಲ್ಲಿ ನೆಟ್ಟು, ಒಂದು ಬಾರಿಯೂ ಅಲ್ಲಿಗೆ ಹೋಗಲಾಗಲಿಲ್ಲವಲ್ಲ ಎನ್ನುವ ಚಿಂತೆಯಿಂದ ಸದಾ ಭಗವಂತನ ನಾಮ ಸ್ಮರಣೆಯನ್ನು ಮಾಡುತ್ತಿದ್ದಳು. ಹಾಗಾಗಿ ನಿನಗೆ ನರಕ ಮತ್ತು ಆಕೆಗೆ ಸ್ವರ್ಗ’. ಎಂದರಂತೆ.</p>.<p>ಮನುಷ್ಯನ ಮನಸ್ಸು ಬಹಳ ವಿಚಿತ್ರ. ಅದೇ ರೀತಿ ಈ ಜಗತ್ತಿನ ಜೀವರಾಶಿಗಳಲ್ಲಿನ ವೈವಿಧ್ಯವೂ ವಿಸ್ಮಯಕಾರಿ. ಒಬ್ಬರಂತೆ ಇನ್ನೊಬ್ಬರಿಲ್ಲ. ಅವರವರ ಜೀವನ ಅವರವರದು. ಅವರವರ ಭಾಗ್ಯ ಅವರವರದು. ಒಬ್ಬರ ಸುಖ ಇನ್ನೊಬ್ಬರ ದುಃಖಕ್ಕೆ ಕಾರಣವಾಗಬಹುದು. ಒಬ್ಬರ ನೋವು ಮತ್ತು ಆ ನೋವಿನ ಕಾರಣ ಇನ್ನೊಬ್ಬರ ಊಹೆಗೂ ನಿಲುಕದ್ದಿರಬಹುದು. ನಮ್ಮ ಬಾಹ್ಯ ರೂಪ ಸ್ವರೂಪಕ್ಕಿಂತ ನಮ್ಮೊಳಗಿನ ವಿಚಾರಗಳೇ ನಮ್ಮ ವ್ಯಕ್ತಿತ್ವವನ್ನು ನಮ್ಮ ಭಾಗ್ಯವನ್ನು ರೂಪಿಸುತ್ತವೆ.</p>.<p>ಕಿಮೇಕಂ ದೈವತಂ ಲೋಕೇ ಕಿಂ ವಾಽಪ್ಯೇಕಂ ಪರಾಯಣಂ |</p>.<p>ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಮ್ ||</p>.<p>ಕೋ ಧರ್ಮಃ ಸರ್ವಧರ್ಮಾಣಾಂ ಭವತಃ ಪರಮೋ ಮತಃ |</p>.<p>ಕಿಂ ಜಪನ್ ಮುಚ್ಯತೇ ಜಂತುರ್ಜನ್ಮಸಂಸಾರಬಂಧನಾತ್ ||</p>.<p><br>ಮಹಾಭಾರತದಲ್ಲಿ ಅರ್ಜುನನು ಈ ಪ್ರಶ್ನೆಗಳನ್ನು ಶ್ರೀಕೃಷ್ಣನಿಗೆ ಕೇಳುತ್ತಾನೆ — ‘ಎಲ್ಲ ದೇವತೆಗಳಲ್ಲಿ ಅತ್ಯುನ್ನತ ಯಾರು? ಎಲ್ಲ ಧರ್ಮಗಳಲ್ಲಿ ಶ್ರೇಷ್ಠ ಧರ್ಮ ಯಾವುದು? ಯಾವ ಜಪದಿಂದ ಜನ್ಮಮರಣದ ಚಕ್ರದಿಂದ ಮುಕ್ತಿ ಸಿಗುತ್ತದೆ’ ಎಂದು.</p>.<p>ಮನೆ ಸಂಸಾರ, ವೃತ್ತಿ, ವ್ಯಾಪಾರ, ಕೆಲಸ, ಸಂಪಾದನೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಮತ್ತು ಆ ವಿಷಯಗಳಿಂದ ನಮಗುಂಟಾಗುವ ಸಂಬಂಧ ಸಂಪರ್ಕಗಳಿಂದ ನಮ್ಮ ಮನದೊಳಕ್ಕೆ ನುಗ್ಗುವ ವಿಚಾರಗಳ ಸುಳಿಯಲ್ಲಿ ಮುಳುಗಿ ಸಾಯುತ್ತೇವೆ. ಮನಃಶಾಂತಿಗಾಗಿ ದೇವಸ್ಥಾನಕ್ಕೆ ಹೋಗುವವರೂ ಉಂಟು. ಆದರೇನು ಮನಸ್ಸೆಲ್ಲೋ ಅಲೆಯುತ್ತಿರುತ್ತದೆ. ‘ಕಾಯಕವೇ ಕೈಲಾಸವೆಂದರು’ ಶರಣರು. ಚಿತ್ತಶುದ್ಧಿಯಿಂದ ಮಾಡುವ ಯಾವುದೇ ಕಾಯಕವಾದರೂ ಸರಿ. ಆ ಕೆಲಸಗಳನ್ನೂ ಸಮರ್ಪಕವಾಗಿ ಮಾಡಬೇಕು. ಆದರೆ ಇಲ್ಲದ ವಿಷಯಗಳನ್ನು ಮನದೊಳಗೆ ಚಿಂತಿಸುತ್ತಾ, ಮನದೊಳಗೆ ಒಂದು ನರಕವನ್ನೇ ಸೃಷ್ಟಿಸಿಕೊಂಡು ಬದುಕಬಾರದು. ಸ್ವರ್ಗ ನರಕಗಳೆಂಬವು ಹೊರಗಿನ ಲೋಕಗಳಲ್ಲ ನಮ್ಮೊಳಗೇ ಇವೆ.</p>.<p>ನಮಗೆ ಏನು ಮತ್ತು ಎಷ್ಟು ಬೇಕು ಎಂದು ಆಯ್ದುಕೊಳ್ಳುವ, ನಿರ್ಧರಿಸುವ ಅಧಿಕಾರ ಮತ್ತು ಸಂಪೂರ್ಣ ಸ್ವಾತಂತ್ರವಿದೆ. ಹಾಗಾಗಿ, ಆ ಒಂದು ಸ್ವಾತಂತ್ರವನ್ನು ಸೂಕ್ತವಾಗಿ ಉಪಯೋಗಿಸಿ ಬದುಕನ್ನು ಹಸನಾಗಿಸಿಕೊಳ್ಳಬೇಕು. ಶಾಂತವಾಗಿಸಿಕೊಳ್ಳಬೇಕು. ಆನಂದಮಯವಾಗಿಸಿ ಕೊಳ್ಳಬೇಕು ಎನ್ನುವುದೇ ಬದುಕಿನ ಒಳಗುಟ್ಟು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಒಂದು ಊರು. ಆ ಊರಿನ ಮುಖ್ಯ ಬೀದಿಯ ಕೊನೆಯಲ್ಲಿ ಒಂದು ದೇವಸ್ಥಾನ. ಅದರ ಎದುರಿನ ಒಂದು ದೊಡ್ಡ ಬಂಗಲೆಯಲ್ಲಿ ಒಬ್ಬ ವೇಶ್ಯೆ ವಾಸಿಸುತ್ತಿದ್ದಳು. ಆ ದೇವಸ್ಥಾನಕ್ಕೆ ಒಬ್ಬ ಪೂಜಾರಿ. ದೀರ್ಘಕಾಲದ ಬದುಕು ಸವೆಸಿ ಇಬ್ಬರೂ ಕಾಲವಾದ ನಂತರ ಯಮಲೋಕದಲ್ಲಿ ಅವರ ಪಾಪಕರ್ಮಗಳ ಲೆಕ್ಕವನ್ನು ಪರಿಶೀಲಿಸಿ ವೇಶ್ಯೆಯನ್ನು ಸ್ವರ್ಗಕ್ಕೂ, ಆ ದೇವಸ್ಥಾನದ ಅರ್ಚಕನನ್ನು ನರಕಕ್ಕೂ ಕಳುಹಿಸಲು ಆದೇಶ ನೀಡಲಾಗುತ್ತದೆ. ಆಗ ಅರ್ಚಕನಿಗೆ ಸಿಟ್ಟು ಬಂದು ಹಾಗೇಕೆಂದು ವಿಚಾರಿಸಲಾಗಿ, ಚಿತ್ರಗುಪ್ತ, ‘ನೀನು ವೃತ್ತಿಯಿಂದ ಅರ್ಚಕನಾದರೂ ನಿನ್ನ ಮನಸೆಲ್ಲ ಆ ವೇಶ್ಯೆಯ ಮನೆಗೆ ಬಂದು ಹೋಗುವವರು, ಅಲ್ಲಿ ನಡೆಯಬಹುದಾದ ಕಾರ್ಯ ಕಲಾಪಗಳು ಮತ್ತು ಅಲ್ಲಿಗೆ ಹೋಗಲಾಗಲಿಲ್ಲವಲ್ಲ ಎನ್ನುವ ಚಿಂತೆಯಲ್ಲೇ ಮುಳುಗಿತ್ತು. ಆದರೆ ಆ ವೇಶ್ಯೆ ವೃತ್ತಿಯಲ್ಲಿ ನಿರತಳಾದರೂ ಅವಳ ಮನಸ್ಸು ತಾನು ಹೋಗಲಾಗದ ಆ ದೇವಸ್ಥಾನದಲ್ಲಿ ನೆಟ್ಟು, ಒಂದು ಬಾರಿಯೂ ಅಲ್ಲಿಗೆ ಹೋಗಲಾಗಲಿಲ್ಲವಲ್ಲ ಎನ್ನುವ ಚಿಂತೆಯಿಂದ ಸದಾ ಭಗವಂತನ ನಾಮ ಸ್ಮರಣೆಯನ್ನು ಮಾಡುತ್ತಿದ್ದಳು. ಹಾಗಾಗಿ ನಿನಗೆ ನರಕ ಮತ್ತು ಆಕೆಗೆ ಸ್ವರ್ಗ’. ಎಂದರಂತೆ.</p>.<p>ಮನುಷ್ಯನ ಮನಸ್ಸು ಬಹಳ ವಿಚಿತ್ರ. ಅದೇ ರೀತಿ ಈ ಜಗತ್ತಿನ ಜೀವರಾಶಿಗಳಲ್ಲಿನ ವೈವಿಧ್ಯವೂ ವಿಸ್ಮಯಕಾರಿ. ಒಬ್ಬರಂತೆ ಇನ್ನೊಬ್ಬರಿಲ್ಲ. ಅವರವರ ಜೀವನ ಅವರವರದು. ಅವರವರ ಭಾಗ್ಯ ಅವರವರದು. ಒಬ್ಬರ ಸುಖ ಇನ್ನೊಬ್ಬರ ದುಃಖಕ್ಕೆ ಕಾರಣವಾಗಬಹುದು. ಒಬ್ಬರ ನೋವು ಮತ್ತು ಆ ನೋವಿನ ಕಾರಣ ಇನ್ನೊಬ್ಬರ ಊಹೆಗೂ ನಿಲುಕದ್ದಿರಬಹುದು. ನಮ್ಮ ಬಾಹ್ಯ ರೂಪ ಸ್ವರೂಪಕ್ಕಿಂತ ನಮ್ಮೊಳಗಿನ ವಿಚಾರಗಳೇ ನಮ್ಮ ವ್ಯಕ್ತಿತ್ವವನ್ನು ನಮ್ಮ ಭಾಗ್ಯವನ್ನು ರೂಪಿಸುತ್ತವೆ.</p>.<p>ಕಿಮೇಕಂ ದೈವತಂ ಲೋಕೇ ಕಿಂ ವಾಽಪ್ಯೇಕಂ ಪರಾಯಣಂ |</p>.<p>ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಮ್ ||</p>.<p>ಕೋ ಧರ್ಮಃ ಸರ್ವಧರ್ಮಾಣಾಂ ಭವತಃ ಪರಮೋ ಮತಃ |</p>.<p>ಕಿಂ ಜಪನ್ ಮುಚ್ಯತೇ ಜಂತುರ್ಜನ್ಮಸಂಸಾರಬಂಧನಾತ್ ||</p>.<p><br>ಮಹಾಭಾರತದಲ್ಲಿ ಅರ್ಜುನನು ಈ ಪ್ರಶ್ನೆಗಳನ್ನು ಶ್ರೀಕೃಷ್ಣನಿಗೆ ಕೇಳುತ್ತಾನೆ — ‘ಎಲ್ಲ ದೇವತೆಗಳಲ್ಲಿ ಅತ್ಯುನ್ನತ ಯಾರು? ಎಲ್ಲ ಧರ್ಮಗಳಲ್ಲಿ ಶ್ರೇಷ್ಠ ಧರ್ಮ ಯಾವುದು? ಯಾವ ಜಪದಿಂದ ಜನ್ಮಮರಣದ ಚಕ್ರದಿಂದ ಮುಕ್ತಿ ಸಿಗುತ್ತದೆ’ ಎಂದು.</p>.<p>ಮನೆ ಸಂಸಾರ, ವೃತ್ತಿ, ವ್ಯಾಪಾರ, ಕೆಲಸ, ಸಂಪಾದನೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಮತ್ತು ಆ ವಿಷಯಗಳಿಂದ ನಮಗುಂಟಾಗುವ ಸಂಬಂಧ ಸಂಪರ್ಕಗಳಿಂದ ನಮ್ಮ ಮನದೊಳಕ್ಕೆ ನುಗ್ಗುವ ವಿಚಾರಗಳ ಸುಳಿಯಲ್ಲಿ ಮುಳುಗಿ ಸಾಯುತ್ತೇವೆ. ಮನಃಶಾಂತಿಗಾಗಿ ದೇವಸ್ಥಾನಕ್ಕೆ ಹೋಗುವವರೂ ಉಂಟು. ಆದರೇನು ಮನಸ್ಸೆಲ್ಲೋ ಅಲೆಯುತ್ತಿರುತ್ತದೆ. ‘ಕಾಯಕವೇ ಕೈಲಾಸವೆಂದರು’ ಶರಣರು. ಚಿತ್ತಶುದ್ಧಿಯಿಂದ ಮಾಡುವ ಯಾವುದೇ ಕಾಯಕವಾದರೂ ಸರಿ. ಆ ಕೆಲಸಗಳನ್ನೂ ಸಮರ್ಪಕವಾಗಿ ಮಾಡಬೇಕು. ಆದರೆ ಇಲ್ಲದ ವಿಷಯಗಳನ್ನು ಮನದೊಳಗೆ ಚಿಂತಿಸುತ್ತಾ, ಮನದೊಳಗೆ ಒಂದು ನರಕವನ್ನೇ ಸೃಷ್ಟಿಸಿಕೊಂಡು ಬದುಕಬಾರದು. ಸ್ವರ್ಗ ನರಕಗಳೆಂಬವು ಹೊರಗಿನ ಲೋಕಗಳಲ್ಲ ನಮ್ಮೊಳಗೇ ಇವೆ.</p>.<p>ನಮಗೆ ಏನು ಮತ್ತು ಎಷ್ಟು ಬೇಕು ಎಂದು ಆಯ್ದುಕೊಳ್ಳುವ, ನಿರ್ಧರಿಸುವ ಅಧಿಕಾರ ಮತ್ತು ಸಂಪೂರ್ಣ ಸ್ವಾತಂತ್ರವಿದೆ. ಹಾಗಾಗಿ, ಆ ಒಂದು ಸ್ವಾತಂತ್ರವನ್ನು ಸೂಕ್ತವಾಗಿ ಉಪಯೋಗಿಸಿ ಬದುಕನ್ನು ಹಸನಾಗಿಸಿಕೊಳ್ಳಬೇಕು. ಶಾಂತವಾಗಿಸಿಕೊಳ್ಳಬೇಕು. ಆನಂದಮಯವಾಗಿಸಿ ಕೊಳ್ಳಬೇಕು ಎನ್ನುವುದೇ ಬದುಕಿನ ಒಳಗುಟ್ಟು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>