ಭೂರಹಿತ ಗ್ರಾಮಸ್ಥರಿಗೆ ನಿವೇಶನ: ಕೇಂದ್ರದಿಂದ ಸಂಪೂರ್ಣ ಧನಸಹಾಯ
ನವದೆಹಲಿ, ಜುಲೈ 24– ಗ್ರಾಮಾಂತರ ಪ್ರದೇಶದಲ್ಲಿ ಭೂಹೀನರಿಗೆ ಮನೆ ನಿವೇಶನ ನೀಡಲು ರಾಜ್ಯ ಸರ್ಕಾರಗಳಿಗೆ ನೂರಕ್ಕೆ ನೂರರಷ್ಟು ಸಹಾಯಧನ ಮಂಜೂರು ಮಾಡುವ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ
ರಾಜ್ಯಾಂಗ ಮತ್ತು ಪಾರ್ಲಿಮೆಂಟರಿ ಅಧ್ಯಯನ ಸಂಸ್ಥೆ ಆಶ್ರಯದಲ್ಲಿ ‘ವಸತಿ–ಕೊಳಚೆ ನಿರ್ಮೂಲನ’ ಕುರಿತು ಎರಡು ದಿನಗಳ ವಿಚಾರಗೋಷ್ಠಿಯನ್ನು ಉದ್ಘಾಟಿಸಿದ ಮರಾಮತ್ ಮತ್ತು ವಸತಿ ಶಾಖೆ ರಾಜ್ಯ ಸಚಿವ ಐ.ಕೆ. ಗುಜ್ರಾಲ್ ಅವರು ಇಂದು ಇಲ್ಲಿ ಈ ವಿಷಯವನ್ನು ತಿಳಿಸಿದರು.
ಕೊಳಚೆ ಪ್ರದೇಶಗಳಲ್ಲಿ ಮನೆ ಕಟ್ಟಿಕೊಳ್ಳುವುದಕ್ಕಾಗಿ ರಾಜ್ಯ ವಸತಿ ಮಂಡಳಿಗೆ ಸಹಾಯ ಮಾಡಲು ಇತ್ತೀಚೆಗೆ ವಸತಿ ಮತ್ತು ನಗರದ ಪ್ರದೇಶ ಅಭಿವೃದ್ಧಿ ಕಾರ್ಪೊರೇಷನ್ ರಚಿಸಲಾಯಿತೆಂದು ಹೇಳಿದರು.