ಕಾರ್ಗಿಲ್ನಲ್ಲಿ ಗುಂಡಿನ ದಾಳಿ: 15 ಉಗ್ರರು ಸೇರಿ 30 ಸಾವು
ಶ್ರೀನಗರ, ಮೇ 16 (ಯುಎನ್ಐ, ಪಿಟಿಐ)– ಕಾರ್ಗಿಲ್ ಮತ್ತು ಡ್ರಾಸ್ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನಿ ಅತಿಕ್ರಮಣಕಾರರ ವಿರುದ್ಧ ಭಾರತೀಯ ಸೇನಾಪಡೆಗಳು ಕಳೆದ ಒಂದು ವಾರದಿಂದ ಭಾರಿ ಕಾರ್ಯಾಚರಣೆ ನಡೆಸುತ್ತಿದ್ದು, ಇದುವರೆಗೆ 15 ಮಂದಿ ಭಯೋತ್ಪಾದಕರ ಸಹಿತ 30 ಮಂದಿ ಸತ್ತಿದ್ದಾರೆ.
ಕಾರ್ಗಿಲ್ ಮೂಲಕ ಭಯೋತ್ಪಾದಕರನ್ನು ದೇಶದೊಳಕ್ಕೆ ನುಗ್ಗಿಸುವುದಕ್ಕಾಗಿಯೇ ಅಲ್ಲಿ ಪಾಕಿಸ್ತಾನಿ ಪಡೆಗಳು ಭಾರತೀಯ ನೆಲೆಗಳತ್ತ ಭಾರಿ ಶೆಲ್ ದಾಳಿ ನಡೆಸುತ್ತಿವೆ. ಇದಕ್ಕೆ ಪ್ರತಿಯಾಗಿ ಭಾರತೀಯ ಪಡೆಗಳು ನಿಯಂತ್ರಣ ರೇಖೆಯಲ್ಲಿನ ಹಳ್ಳಿಗಳನ್ನು ಭಾಗಶಃ ತಮ್ಮ ವಶಕ್ಕೆ ತೆಗೆದುಕೊಂಡು ಇಲ್ಲಿ ಉಗ್ರರಿಗೆ ಯಾವುದೇ ನೆಲೆ ದೊರಕದಂತೆ ಮಾಡಿವೆ.