<p><strong>ಹವಾಲ: ಸಿಬಿಐ ಆರೋಪಪರಿಗಣಿಸದಿರಲು ನ್ಯಾಯಾಲಯಕ್ಕೆ ಅಡ್ವಾಣಿ ಮನವಿ</strong></p>.<p><strong>ನವದೆಹಲಿ, ಫೆ. 14 (ಯುಎನ್ಐ)– </strong>ಹವಾಲ ಹಗರಣದಲ್ಲಿ ತಮ್ಮವಿರುದ್ಧ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿ ‘ಸತ್ಯಕ್ಕೆ ದೂರ ಮತ್ತು ರಾಜಕೀಯಪ್ರೇರಿತ’ ಎಂದು ಪ್ರತಿಪಾದಿಸಿರುವ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಎಲ್.ಕೆ.ಅಡ್ವಾಣಿ ಅವರು, ಅದನ್ನು ಪರಿಗಣಿಸಬಾರದೆಂದು ವಿಶೇಷ ನ್ಯಾಯಾಲಯಕ್ಕೆಮನವಿ ಮಾಡಿಕೊಂಡಿದ್ದಾರೆ.</p>.<p>ತಮ್ಮ ವಿರುದ್ಧ ಸುಮಾರು ಒಂದು ತಿಂಗಳ ಹಿಂದೆ ಸಲ್ಲಿಸಲಾದ ಆರೋಪಪಟ್ಟಿ ದುರುದ್ದೇಶಪೂರಿತ ಮತ್ತು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮಹೆಸರಿಗೆ ಮಸಿ ಬಳಿಯುವ ಪ್ರಯತ್ನಎಂದು ಅಡ್ವಾಣಿ ಅರ್ಜಿಯಲ್ಲಿಹೇಳಿದ್ದಾರೆ.</p>.<p>ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕಾರ ಯಾವುದೇ ಅಕ್ರಮ ನಡೆಸಿರುವುದನ್ನು ಆರೋಪ ಪಟ್ಟಿ ದೃಢಪಡಿಸಿಲ್ಲವೆಂದು ಅವರು ಹೇಳಿದ್ದಾರೆ.</p>.<p><strong>ಅಣ್ವಸ್ತ್ರ ನಿಷೇಧ: ಒತ್ತಡಕ್ಕೆ ಭಾರತ ಮಣಿಯದು– ಚವಾಣ್ ಸ್ಪಷ್ಟನೆ</strong></p>.<p><strong>ಬೆಂಗಳೂರು, ಫೆ. 14– </strong>ಅಮೆರಿಕವು ಭಾರತಕ್ಕೊಂದು ಪಾಕ್ಗೊಂದು‘ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದ ನೀತಿ’ಯನ್ನು ಅನುಸರಿಸುತ್ತಿದೆ. ಅಮೆರಿಕದ ಒತ್ತಡಕ್ಕೆ ಮಣಿದು ಖಾಲಿ ಹಾಳೆಯ ಮೇಲೆ ಅಣ್ವಸ್ತ್ರ ನಿಷೇಧ ನೀತಿಗೆ ಸಹಿ ಮಾಡಲು ಭಾರತ ಸಿದ್ಧವಿಲ್ಲ ಎಂದು ಕೇಂದ್ರ ಗೃಹ ಖಾತೆ ಸಚಿವ ಎಸ್.ಬಿ.ಚವಾಣ್ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.</p>.<p>ಸದ್ಯದಲ್ಲಿಯೇ ಬರಲಿರುವ ಲೋಕಸಭಾ ಚುನಾವಣೆಗಾಗಿ ಕಾರ್ಯಕರ್ತರನ್ನು ಸಜ್ಜುಗೊಳಿಸಲು ನಗರದಲ್ಲಿ ನಡೆದ ರಾಜ್ಯ ಮಟ್ಟದ ಕಾಂಗೈ ಕಾರ್ಯಕರ್ತರ ತರಬೇತಿ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅಮೆರಿಕದಭಾರತ ವಿರೋಧಿ ಧೋರಣೆಯನ್ನು ತರಾಟೆಗೆ ತೆಗೆದುಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹವಾಲ: ಸಿಬಿಐ ಆರೋಪಪರಿಗಣಿಸದಿರಲು ನ್ಯಾಯಾಲಯಕ್ಕೆ ಅಡ್ವಾಣಿ ಮನವಿ</strong></p>.<p><strong>ನವದೆಹಲಿ, ಫೆ. 14 (ಯುಎನ್ಐ)– </strong>ಹವಾಲ ಹಗರಣದಲ್ಲಿ ತಮ್ಮವಿರುದ್ಧ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿ ‘ಸತ್ಯಕ್ಕೆ ದೂರ ಮತ್ತು ರಾಜಕೀಯಪ್ರೇರಿತ’ ಎಂದು ಪ್ರತಿಪಾದಿಸಿರುವ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಎಲ್.ಕೆ.ಅಡ್ವಾಣಿ ಅವರು, ಅದನ್ನು ಪರಿಗಣಿಸಬಾರದೆಂದು ವಿಶೇಷ ನ್ಯಾಯಾಲಯಕ್ಕೆಮನವಿ ಮಾಡಿಕೊಂಡಿದ್ದಾರೆ.</p>.<p>ತಮ್ಮ ವಿರುದ್ಧ ಸುಮಾರು ಒಂದು ತಿಂಗಳ ಹಿಂದೆ ಸಲ್ಲಿಸಲಾದ ಆರೋಪಪಟ್ಟಿ ದುರುದ್ದೇಶಪೂರಿತ ಮತ್ತು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮಹೆಸರಿಗೆ ಮಸಿ ಬಳಿಯುವ ಪ್ರಯತ್ನಎಂದು ಅಡ್ವಾಣಿ ಅರ್ಜಿಯಲ್ಲಿಹೇಳಿದ್ದಾರೆ.</p>.<p>ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕಾರ ಯಾವುದೇ ಅಕ್ರಮ ನಡೆಸಿರುವುದನ್ನು ಆರೋಪ ಪಟ್ಟಿ ದೃಢಪಡಿಸಿಲ್ಲವೆಂದು ಅವರು ಹೇಳಿದ್ದಾರೆ.</p>.<p><strong>ಅಣ್ವಸ್ತ್ರ ನಿಷೇಧ: ಒತ್ತಡಕ್ಕೆ ಭಾರತ ಮಣಿಯದು– ಚವಾಣ್ ಸ್ಪಷ್ಟನೆ</strong></p>.<p><strong>ಬೆಂಗಳೂರು, ಫೆ. 14– </strong>ಅಮೆರಿಕವು ಭಾರತಕ್ಕೊಂದು ಪಾಕ್ಗೊಂದು‘ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದ ನೀತಿ’ಯನ್ನು ಅನುಸರಿಸುತ್ತಿದೆ. ಅಮೆರಿಕದ ಒತ್ತಡಕ್ಕೆ ಮಣಿದು ಖಾಲಿ ಹಾಳೆಯ ಮೇಲೆ ಅಣ್ವಸ್ತ್ರ ನಿಷೇಧ ನೀತಿಗೆ ಸಹಿ ಮಾಡಲು ಭಾರತ ಸಿದ್ಧವಿಲ್ಲ ಎಂದು ಕೇಂದ್ರ ಗೃಹ ಖಾತೆ ಸಚಿವ ಎಸ್.ಬಿ.ಚವಾಣ್ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.</p>.<p>ಸದ್ಯದಲ್ಲಿಯೇ ಬರಲಿರುವ ಲೋಕಸಭಾ ಚುನಾವಣೆಗಾಗಿ ಕಾರ್ಯಕರ್ತರನ್ನು ಸಜ್ಜುಗೊಳಿಸಲು ನಗರದಲ್ಲಿ ನಡೆದ ರಾಜ್ಯ ಮಟ್ಟದ ಕಾಂಗೈ ಕಾರ್ಯಕರ್ತರ ತರಬೇತಿ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅಮೆರಿಕದಭಾರತ ವಿರೋಧಿ ಧೋರಣೆಯನ್ನು ತರಾಟೆಗೆ ತೆಗೆದುಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>