<p><strong>ವಾಯುಪಡೆ ಹೆಲಿಕಾಪ್ಟರ್ನಲ್ಲಿ ನಂದ್ಯಾಲ್ಗೆ ಹಣ: ಆರೋಪ</strong></p>.<p><strong>ನವದೆಹಲಿ, ಏ. 14 (ಪಿಟಿಐ)–</strong> ‘ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಕ್ಷೇತ್ರವಾದ ನಂದ್ಯಾಲ್ಗೆ ರಕ್ಷಣಾ ಇಲಾಖೆಯ ಹೆಲಿಕಾಪ್ಟರ್ನಲ್ಲಿ 25 ಪೆಟ್ಟಿಗೆಗಳಲ್ಲಿ ಅಪಾರ ಪ್ರಮಾಣದ ಹಣವನ್ನು ಒಯ್ಯಲಾಗಿದೆ’ ಎಂಬ ಆರೋಪದ ಬಗ್ಗೆ ವರದಿ ನೀಡಲು ಚುನಾವಣಾ ಆಯೋಗವು ಇಂದು ಆಂಧ್ರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿಗೆ ಆದೇಶ ನೀಡಿದೆ.</p>.<p><strong>ದಳಕ್ಕೆ ಅಂಬರೀಷ್; ಭವ್ಯ ಸ್ವಾಗತ</strong></p>.<p><strong>ಬೆಂಗಳೂರು, ಏ. 14–</strong> ಸುಮಾರು ಒಂದೂವರೆ ಗಂಟೆಗಳ ಅವಧಿಯಲ್ಲಿ ಕಿವಿಗಡಚಿಕ್ಕುವ ಪಟಾಕಿ ಸದ್ದಿನ ಮಧ್ಯೆ ರಾಶಿ–ರಾಶಿ ಗುಲಾಬಿ ಮಾಲೆಗಳ ನಡುವೆ ಚಿತ್ರನಟ ಅಂಬರೀಷ್ ಜನತಾದಳದಲ್ಲಿ ವಿಧ್ಯುಕ್ತವಾಗಿ ಸದಸ್ಯತ್ವ ಪಡೆದು ತಮ್ಮ ಹೊಸ ರಾಜಕೀಯ ಅಧ್ಯಾಯವನ್ನು ಇಂದಿಲ್ಲಿ ಪ್ರಾರಂಭಿಸಿದರು.</p>.<p>ಚಿತ್ರರಂಗದವರ ಪೈಕಿ ತಮ್ಮದು ದಳದಲ್ಲಿ ‘ಒಂಟಿ ದನಿ’ ಅಲ್ಲ ಎನ್ನುವುದನ್ನು ತೋರುವ ಉತ್ಸಾಹದಲ್ಲಿದ್ದ ಅವರೊಂದಿಗೆ ಚಿತ್ರನಟಿ ಜಯಮಾಲ ಮತ್ತು ಟಿ.ವಿ ಧಾರಾವಾಹಿಗಳಲ್ಲಿ ಹೆಸರು ಮಾಡಿರುವ ನಟ ರವಿಕಿರಣ್ ಜತೆಗೂಡಿದ್ದರು. ಅವರೂ ಪಕ್ಷದ ಸದಸ್ಯತ್ವವನ್ನು ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಯುಪಡೆ ಹೆಲಿಕಾಪ್ಟರ್ನಲ್ಲಿ ನಂದ್ಯಾಲ್ಗೆ ಹಣ: ಆರೋಪ</strong></p>.<p><strong>ನವದೆಹಲಿ, ಏ. 14 (ಪಿಟಿಐ)–</strong> ‘ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಕ್ಷೇತ್ರವಾದ ನಂದ್ಯಾಲ್ಗೆ ರಕ್ಷಣಾ ಇಲಾಖೆಯ ಹೆಲಿಕಾಪ್ಟರ್ನಲ್ಲಿ 25 ಪೆಟ್ಟಿಗೆಗಳಲ್ಲಿ ಅಪಾರ ಪ್ರಮಾಣದ ಹಣವನ್ನು ಒಯ್ಯಲಾಗಿದೆ’ ಎಂಬ ಆರೋಪದ ಬಗ್ಗೆ ವರದಿ ನೀಡಲು ಚುನಾವಣಾ ಆಯೋಗವು ಇಂದು ಆಂಧ್ರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿಗೆ ಆದೇಶ ನೀಡಿದೆ.</p>.<p><strong>ದಳಕ್ಕೆ ಅಂಬರೀಷ್; ಭವ್ಯ ಸ್ವಾಗತ</strong></p>.<p><strong>ಬೆಂಗಳೂರು, ಏ. 14–</strong> ಸುಮಾರು ಒಂದೂವರೆ ಗಂಟೆಗಳ ಅವಧಿಯಲ್ಲಿ ಕಿವಿಗಡಚಿಕ್ಕುವ ಪಟಾಕಿ ಸದ್ದಿನ ಮಧ್ಯೆ ರಾಶಿ–ರಾಶಿ ಗುಲಾಬಿ ಮಾಲೆಗಳ ನಡುವೆ ಚಿತ್ರನಟ ಅಂಬರೀಷ್ ಜನತಾದಳದಲ್ಲಿ ವಿಧ್ಯುಕ್ತವಾಗಿ ಸದಸ್ಯತ್ವ ಪಡೆದು ತಮ್ಮ ಹೊಸ ರಾಜಕೀಯ ಅಧ್ಯಾಯವನ್ನು ಇಂದಿಲ್ಲಿ ಪ್ರಾರಂಭಿಸಿದರು.</p>.<p>ಚಿತ್ರರಂಗದವರ ಪೈಕಿ ತಮ್ಮದು ದಳದಲ್ಲಿ ‘ಒಂಟಿ ದನಿ’ ಅಲ್ಲ ಎನ್ನುವುದನ್ನು ತೋರುವ ಉತ್ಸಾಹದಲ್ಲಿದ್ದ ಅವರೊಂದಿಗೆ ಚಿತ್ರನಟಿ ಜಯಮಾಲ ಮತ್ತು ಟಿ.ವಿ ಧಾರಾವಾಹಿಗಳಲ್ಲಿ ಹೆಸರು ಮಾಡಿರುವ ನಟ ರವಿಕಿರಣ್ ಜತೆಗೂಡಿದ್ದರು. ಅವರೂ ಪಕ್ಷದ ಸದಸ್ಯತ್ವವನ್ನು ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>