<p><strong>ಬಂಗಾರಪ್ಪ, ಹೆಗಡೆಗೆ ಕಾಂಗ್ರೆಸ್ ಆಹ್ವಾನ</strong></p>.<p><strong>ನವದೆಹಲಿ, ಜೂನ್ 16– </strong>ಜನತಾ ದಳದಿಂದ ಉಚ್ಚಾಟಿತರಾಗಿರುವ<br />ರಾಜ್ಯಸಭೆ ಸದಸ್ಯ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಕರ್ನಾಟಕ ಕಾಂಗ್ರೆಸ್ ಪಕ್ಷದ ನಾಯಕ<br />ಎಸ್. ಬಂಗಾರಪ್ಪ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೆಳೆದುಕೊಳ್ಳುವ ಒಲವನ್ನು ಅನೇಕ ಹಿರಿಯ ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ್ದಾರೆ.</p>.<p>ನಿನ್ನೆ ಮುಕ್ತಾಯಗೊಂಡ ಮೂರು ದಿನಗಳ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ, ಈಗ ದಳದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಲಾಭ ಪಡೆಯುವ ಬಗೆಗೆ ಶರದ್ ಪವಾರ್, ಕೆ. ಕರುಣಾಕರನ್, ರಾಜೇಶ್ ಪೈಲಟ್ ಮುಂತಾದವರು ಈ ಅಭಿಪ್ರಾಯ ವ್ಯಕ್ತ ಪಡಿಸಿದರೆಂದು ಪಕ್ಷದ ವಿಶ್ವಸನೀಯ ಮೂಲಗಳು ಹೇಳಿವೆ.</p>.<p><strong>ಕವಿತೆಗಿಂತ ಸುಂದರ<br />ದೊಡ್ಡವರ ಬದುಕು– ಕೆಎಸ್ನ</strong></p>.<p><strong>ಬೆಂಗಳೂರು, ಜೂನ್ 16–</strong> ‘ಮಾಸ್ತಿ ನನಗೆ ಕೆಲಸ ಕೊಡಿಸಿದ್ರು, ಬದುಕು ನಿಲ್ಲಿಸಿದ್ರು, ಅಂತಿಮವಾಗಿ ಪ್ರಶಸ್ತಿನೂ ಕೊಡಿಸಿದ್ರು...’</p>.<p>ಎಂಬತ್ತೊಂದರ ವಯಸ್ಸಿನಲ್ಲಿ ಅನಾರೋಗ್ಯದ ಕಾರಣದಿಂದ ನರಳುತ್ತಾ, ಉಸಿರಾಡಲು ಕಷ್ಟಪಡುತ್ತ, ಏದುಬ್ಬಸ ಪಡುತ್ತಾ, ಇಂದಿನ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಕೆ.ಎಸ್. ನರಸಿಂಹಸ್ವಾಮಿ ಅವರು ಮಾಸ್ತಿಯವರನ್ನು ಕೃತಜ್ಞತೆಯಿಂದ ನೆನಪಿಸಿಕೊಂಡ ರೀತಿ ಇದು.</p>.<p>ಡಾ. ಮಾಸ್ತಿ ಪ್ರಶಸ್ತಿ ಸ್ವೀಕರಿಸಿ, ತಮ್ಮದೇ ಆದ ‘ಪದ್ಯ’ದ ಶೈಲಿಯಲ್ಲಿ ಮಾತನಾಡಿದ ಕೆಎಸ್ನ, ‘1936ರಲ್ಲಿ ನಾನು ಮದುವೆಯಾದೆ. ಆ ಸಂದರ್ಭದಲ್ಲಿ ಮಾಸ್ತಿ ಅವರು ಮೈಸೂರು ಪ್ರೆಸಿಡೆನ್ಸಿಯ<br />ಅಧಿಕಾರಿಯಾಗಿದ್ದಾಗ ನಗರಸಭೆಯಲ್ಲಿ ಗುಮಾಸ್ತನ ಕೆಲಸ ಕೇಳಲು ಹೋದೆ. ಅವರು ನನ್ನ ಪದ್ಯ ಓದಿರುವುದಾಗಿ ಹೇಳಿದರು. ನನ್ನ ಇತ್ತೀಚಿನ ಪದ್ಯ ಓದಿದ್ದೀರಾ ಎಂದು ನಾನು ಕೇಳಿದೆ.<br />‘ಇದು ಕಚೇರಿ ನೆನಪಿರಲಿ’ ಎಂದು<br />ಅವರು ಗದರಿದರು.</p>.<p>‘ಆದರೆ, ನನಗೆ ಕೆಲಸ ಸಿಕ್ಕಿತು. ಮತ್ತೆ ನಗರಸಭೆಯಿಂದ ನನ್ನನ್ನು ಕಂದಾಯ ಇಲಾಖೆಗೆ ವರ್ಗಾಯಿಸುವ ಸಂದರ್ಭದಲ್ಲಿ ತೊಂದರೆಗೆ ಸಿಲುಕಿದ್ದ ನನ್ನನ್ನು ಆಗ ಅಬ್ಕಾರಿ ಆಯುಕ್ತರಾಗಿದ್ದ ಮಾಸ್ತಿ ಅವರು ಕಂದಾಯ ಆಯುಕ್ತರಿಗೆ ಫೋನು ಮಾಡಿ ಉಳಿಸಿದರು’ ಎಂದು ಕೆಎಸ್ನ ನೆನಪಿನಂಗಳಕ್ಕೆ ಇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪ್ಪ, ಹೆಗಡೆಗೆ ಕಾಂಗ್ರೆಸ್ ಆಹ್ವಾನ</strong></p>.<p><strong>ನವದೆಹಲಿ, ಜೂನ್ 16– </strong>ಜನತಾ ದಳದಿಂದ ಉಚ್ಚಾಟಿತರಾಗಿರುವ<br />ರಾಜ್ಯಸಭೆ ಸದಸ್ಯ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಕರ್ನಾಟಕ ಕಾಂಗ್ರೆಸ್ ಪಕ್ಷದ ನಾಯಕ<br />ಎಸ್. ಬಂಗಾರಪ್ಪ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೆಳೆದುಕೊಳ್ಳುವ ಒಲವನ್ನು ಅನೇಕ ಹಿರಿಯ ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ್ದಾರೆ.</p>.<p>ನಿನ್ನೆ ಮುಕ್ತಾಯಗೊಂಡ ಮೂರು ದಿನಗಳ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ, ಈಗ ದಳದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಲಾಭ ಪಡೆಯುವ ಬಗೆಗೆ ಶರದ್ ಪವಾರ್, ಕೆ. ಕರುಣಾಕರನ್, ರಾಜೇಶ್ ಪೈಲಟ್ ಮುಂತಾದವರು ಈ ಅಭಿಪ್ರಾಯ ವ್ಯಕ್ತ ಪಡಿಸಿದರೆಂದು ಪಕ್ಷದ ವಿಶ್ವಸನೀಯ ಮೂಲಗಳು ಹೇಳಿವೆ.</p>.<p><strong>ಕವಿತೆಗಿಂತ ಸುಂದರ<br />ದೊಡ್ಡವರ ಬದುಕು– ಕೆಎಸ್ನ</strong></p>.<p><strong>ಬೆಂಗಳೂರು, ಜೂನ್ 16–</strong> ‘ಮಾಸ್ತಿ ನನಗೆ ಕೆಲಸ ಕೊಡಿಸಿದ್ರು, ಬದುಕು ನಿಲ್ಲಿಸಿದ್ರು, ಅಂತಿಮವಾಗಿ ಪ್ರಶಸ್ತಿನೂ ಕೊಡಿಸಿದ್ರು...’</p>.<p>ಎಂಬತ್ತೊಂದರ ವಯಸ್ಸಿನಲ್ಲಿ ಅನಾರೋಗ್ಯದ ಕಾರಣದಿಂದ ನರಳುತ್ತಾ, ಉಸಿರಾಡಲು ಕಷ್ಟಪಡುತ್ತ, ಏದುಬ್ಬಸ ಪಡುತ್ತಾ, ಇಂದಿನ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಕೆ.ಎಸ್. ನರಸಿಂಹಸ್ವಾಮಿ ಅವರು ಮಾಸ್ತಿಯವರನ್ನು ಕೃತಜ್ಞತೆಯಿಂದ ನೆನಪಿಸಿಕೊಂಡ ರೀತಿ ಇದು.</p>.<p>ಡಾ. ಮಾಸ್ತಿ ಪ್ರಶಸ್ತಿ ಸ್ವೀಕರಿಸಿ, ತಮ್ಮದೇ ಆದ ‘ಪದ್ಯ’ದ ಶೈಲಿಯಲ್ಲಿ ಮಾತನಾಡಿದ ಕೆಎಸ್ನ, ‘1936ರಲ್ಲಿ ನಾನು ಮದುವೆಯಾದೆ. ಆ ಸಂದರ್ಭದಲ್ಲಿ ಮಾಸ್ತಿ ಅವರು ಮೈಸೂರು ಪ್ರೆಸಿಡೆನ್ಸಿಯ<br />ಅಧಿಕಾರಿಯಾಗಿದ್ದಾಗ ನಗರಸಭೆಯಲ್ಲಿ ಗುಮಾಸ್ತನ ಕೆಲಸ ಕೇಳಲು ಹೋದೆ. ಅವರು ನನ್ನ ಪದ್ಯ ಓದಿರುವುದಾಗಿ ಹೇಳಿದರು. ನನ್ನ ಇತ್ತೀಚಿನ ಪದ್ಯ ಓದಿದ್ದೀರಾ ಎಂದು ನಾನು ಕೇಳಿದೆ.<br />‘ಇದು ಕಚೇರಿ ನೆನಪಿರಲಿ’ ಎಂದು<br />ಅವರು ಗದರಿದರು.</p>.<p>‘ಆದರೆ, ನನಗೆ ಕೆಲಸ ಸಿಕ್ಕಿತು. ಮತ್ತೆ ನಗರಸಭೆಯಿಂದ ನನ್ನನ್ನು ಕಂದಾಯ ಇಲಾಖೆಗೆ ವರ್ಗಾಯಿಸುವ ಸಂದರ್ಭದಲ್ಲಿ ತೊಂದರೆಗೆ ಸಿಲುಕಿದ್ದ ನನ್ನನ್ನು ಆಗ ಅಬ್ಕಾರಿ ಆಯುಕ್ತರಾಗಿದ್ದ ಮಾಸ್ತಿ ಅವರು ಕಂದಾಯ ಆಯುಕ್ತರಿಗೆ ಫೋನು ಮಾಡಿ ಉಳಿಸಿದರು’ ಎಂದು ಕೆಎಸ್ನ ನೆನಪಿನಂಗಳಕ್ಕೆ ಇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>