ನವದೆಹಲಿ, ಮೇ 5– ದೇವನಹಳ್ಳಿ ಅಂತರ
ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಗೆ ಒಪ್ಪಿಗೆ ಕೊಡಲಾಗಿದೆ ಎಂದು ನಾಗರಿಕ ವಿಮಾನಯಾನ ಖಾತೆ ಸಚಿವ ಸಿ.ಎಂ.ಇಬ್ರಾಹಿಂ ಅವರು ಇಂದು ಇಲ್ಲಿ ತಿಳಿಸಿದರು. ವಿಮಾನ ನಿಲ್ದಾಣವನ್ನು ನಿರ್ಮಿಸಿದ ನಂತರ ಸ್ವಂತವಾಗಿ ನಿರ್ವಹಿಸಿ ಬಳಸಿ ವರ್ಗಾವಣೆ ಮಾಡಬೇಕೆಂಬ (ಬಿಒಟಿ) ಷರತ್ತಿನ ಅನ್ವಯ ಒಪ್ಪಿಗೆ ಕೊಡಲಾಗಿದೆ ಎಂದು ಅವರು ಹೇಳಿದರು.