<h3><strong>ನೀರಿಗಾಗಿ ಹಿಂಸಾಚಾರ; ಗಾಳಿಯಲ್ಲಿ ಗುಂಡು</strong></h3>.<p>ಹಾವೇರಿ, ಏ. 29– ಕುಡಿಯುವ ನೀರಿಗಾಗಿ ಆಗ್ರಹಿಸಿ ಇಂದು ಕರೆ ನೀಡಿದ್ದ ‘ಸವಣೂರು ಬಂದ್’ ಹಿಂಸಾಚಾರಕ್ಕೆ ತಿರುಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಪ್ರಯೋಗಿಸಿ, ಲಾಠಿ ಪ್ರಹಾರ ಮಾಡಿ ಪ್ರತಿಭಟನಕಾರರನ್ನು ಚದುರಿಸಿದರು.</p>.<p>ಶಿಗ್ಗಾವಿ ನಾಗನೂರು ಕೆರೆಯಿಂದ ಸವಣೂರಿಗೆ ಪೈಪ್ಲೈನ್ ಮೂಲಕ ನೀರು ಪೂರೈಸಬೇಕೆಂದು ಆಗ್ರಹಿಸಿ ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮೆರವಣಿಗೆ ಹೊರಟ ಸುಮಾರು ಎರಡು ಸಾವಿರ ಪ್ರತಿಭಟನಕಾರರು ಪೊಲೀಸರ ಕಣ್ತಪ್ಪಿಸಿ ನಾಲ್ಕು ಗುಂಪುಗಳಾಗಿ ಚದುರಿದರು.</p>.<p>ಒಂದು ಗುಂಪು ಪುರಸಭೆಗೆ ಮುತ್ತಿಗೆ ಹಾಕಿತು. ಇನ್ನೊಂದು ಗುಂಪು ತಾಲ್ಲೂಕು ಕಚೇರಿಯನ್ನು ಆಕ್ರಮಿಸಿತು ಹಾಗೂ ಮತ್ತೊಂದು ಗುಂಪು ಕೆಎಸ್ಆರ್ಟಿಸಿ ಬಸ್ ನಿಲ್ದಾಣದತ್ತ ಧಾವಿಸಿ ಬಸ್ಸಿನಲ್ಲಿದ್ದ ಡೀಸೆಲ್ ತೆಗೆದು ಐದು ಬಸ್ಸುಗಳಿಗೆ ಬೆಂಕಿ ಹಚ್ಚಿತು. ಕೂಗಾಟ, ಚೀರಾಟಗಳ ನಡುವೆ ಪ್ರಯಾಣಿಕರು ದಿಕ್ಕಾಪಾಲಾಗಿ ಚದುರಿದರು.</p>.<p>ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಗಗನದೀಪ್ ಅವರು ಮುಂಜಾಗ್ರತಾ ಕ್ರಮವಾಗಿ ಸವಣೂರಿನಲ್ಲಿ ಇಂದಿನಿಂದ ಮೂರು ದಿನಗಳವರೆಗೆ ಕಲಂ 144ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.</p>.<h3><strong>ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಗೆ ಮಹಿಳಾ ಮೇಯರ್</strong></h3>.<p>ಹುಬ್ಬಳ್ಳಿ, ಏ. 29– ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯ 24ನೇ ಮೇಯರ್ ಆಗಿ ಜನತಾದಳ (ಎಸ್) ಪಕ್ಷದ ಸರಳಾ ಗುರುನಾಥಸಾ ಭಾಂಡಗೆ ಮತ್ತು ಉಪಮೇಯರ್ ಆಗಿ ಕಾಂಗ್ರೆಸ್ (ಐ) ಪಕ್ಷದ ಅಲ್ತಾಫ ಹುಸೇನ್ ಹಳ್ಳೂರ ಇಂದು ಆಯ್ಕೆಯಾದರು.</p>.<p>ಇದರೊಂದಿಗೆ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯ ಇತಿಹಾಸದಲ್ಲಿಯೇ ಮೊದಲ ಮಹಿಳಾ ಮೇಯರ್ ಎಂಬ ಕೀರ್ತಿಗೆ ಸರಳಾ ಭಾಂಡಗೆ ಅವರು ಭಾಜನರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h3><strong>ನೀರಿಗಾಗಿ ಹಿಂಸಾಚಾರ; ಗಾಳಿಯಲ್ಲಿ ಗುಂಡು</strong></h3>.<p>ಹಾವೇರಿ, ಏ. 29– ಕುಡಿಯುವ ನೀರಿಗಾಗಿ ಆಗ್ರಹಿಸಿ ಇಂದು ಕರೆ ನೀಡಿದ್ದ ‘ಸವಣೂರು ಬಂದ್’ ಹಿಂಸಾಚಾರಕ್ಕೆ ತಿರುಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಪ್ರಯೋಗಿಸಿ, ಲಾಠಿ ಪ್ರಹಾರ ಮಾಡಿ ಪ್ರತಿಭಟನಕಾರರನ್ನು ಚದುರಿಸಿದರು.</p>.<p>ಶಿಗ್ಗಾವಿ ನಾಗನೂರು ಕೆರೆಯಿಂದ ಸವಣೂರಿಗೆ ಪೈಪ್ಲೈನ್ ಮೂಲಕ ನೀರು ಪೂರೈಸಬೇಕೆಂದು ಆಗ್ರಹಿಸಿ ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮೆರವಣಿಗೆ ಹೊರಟ ಸುಮಾರು ಎರಡು ಸಾವಿರ ಪ್ರತಿಭಟನಕಾರರು ಪೊಲೀಸರ ಕಣ್ತಪ್ಪಿಸಿ ನಾಲ್ಕು ಗುಂಪುಗಳಾಗಿ ಚದುರಿದರು.</p>.<p>ಒಂದು ಗುಂಪು ಪುರಸಭೆಗೆ ಮುತ್ತಿಗೆ ಹಾಕಿತು. ಇನ್ನೊಂದು ಗುಂಪು ತಾಲ್ಲೂಕು ಕಚೇರಿಯನ್ನು ಆಕ್ರಮಿಸಿತು ಹಾಗೂ ಮತ್ತೊಂದು ಗುಂಪು ಕೆಎಸ್ಆರ್ಟಿಸಿ ಬಸ್ ನಿಲ್ದಾಣದತ್ತ ಧಾವಿಸಿ ಬಸ್ಸಿನಲ್ಲಿದ್ದ ಡೀಸೆಲ್ ತೆಗೆದು ಐದು ಬಸ್ಸುಗಳಿಗೆ ಬೆಂಕಿ ಹಚ್ಚಿತು. ಕೂಗಾಟ, ಚೀರಾಟಗಳ ನಡುವೆ ಪ್ರಯಾಣಿಕರು ದಿಕ್ಕಾಪಾಲಾಗಿ ಚದುರಿದರು.</p>.<p>ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಗಗನದೀಪ್ ಅವರು ಮುಂಜಾಗ್ರತಾ ಕ್ರಮವಾಗಿ ಸವಣೂರಿನಲ್ಲಿ ಇಂದಿನಿಂದ ಮೂರು ದಿನಗಳವರೆಗೆ ಕಲಂ 144ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.</p>.<h3><strong>ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಗೆ ಮಹಿಳಾ ಮೇಯರ್</strong></h3>.<p>ಹುಬ್ಬಳ್ಳಿ, ಏ. 29– ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯ 24ನೇ ಮೇಯರ್ ಆಗಿ ಜನತಾದಳ (ಎಸ್) ಪಕ್ಷದ ಸರಳಾ ಗುರುನಾಥಸಾ ಭಾಂಡಗೆ ಮತ್ತು ಉಪಮೇಯರ್ ಆಗಿ ಕಾಂಗ್ರೆಸ್ (ಐ) ಪಕ್ಷದ ಅಲ್ತಾಫ ಹುಸೇನ್ ಹಳ್ಳೂರ ಇಂದು ಆಯ್ಕೆಯಾದರು.</p>.<p>ಇದರೊಂದಿಗೆ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯ ಇತಿಹಾಸದಲ್ಲಿಯೇ ಮೊದಲ ಮಹಿಳಾ ಮೇಯರ್ ಎಂಬ ಕೀರ್ತಿಗೆ ಸರಳಾ ಭಾಂಡಗೆ ಅವರು ಭಾಜನರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>