<p><strong>ಬಿಸಿ ಗಾಳಿಯಿಂದ ಒಣ ಹವೆ, ಬೆಳೆ ನಾಶ</strong></p>.<p>ಬೆಂಗಳೂರು, ಸೆ. 23– ರಾಜ್ಯದಾದ್ಯಂತ ಕಳೆದ 15–20 ದಿನಗಳಿಂದ ಹೆಚ್ಚಿರುವ ಬಿಸಿಲಿನ ತಾಪಕ್ಕೆ ವಾಯವ್ಯ ದಿಕ್ಕಿನಿಂದ ಬೀಸುತ್ತಿರುವ ‘ಒಣ ಗಾಳಿ’ಯೇ ಕಾರಣ ಎಂಬ ಅಂಶ ಹವಾಮಾನ ತಜ್ಞರಿಂದ ತಿಳಿದುಬಂದಿದೆ.</p>.<p>ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ತೇವಾಂಶದ ಗಾಳಿ ಅರಬ್ಬಿ ಸಮುದ್ರದ ಕಡೆಯಿಂದ ರಾಜ್ಯದ ಕಡೆಗೆ ಬೀಸುತ್ತಿತ್ತು. ಇದರಿಂದ ಮಳೆ ಕೂಡ ಬರುತ್ತಿತ್ತು. ಆದರೆ, ಅಕ್ಟೋಬರ್ ಎರಡು ಅಥವಾ ಮೂರನೇ ವಾರದಿಂದ ಆರಂಭವಾಗಬೇಕಿದ್ದ ಈ ವಾಯವ್ಯ ಬಿಸಿ ಹವೆ ಸೆಪ್ಟೆಂಬರ್ ತಿಂಗಳಿಂದಲೇ ಆರಂಭವಾಗಿದೆ. ಹೀಗಾಗಿ ಕಳೆದ ಒಂದು ತಿಂಗಳಿಂದ ಸರಿಯಾಗಿ ಮಳೆಯಾಗಿಲ್ಲ. ಇದು ಆತಂಕಕ್ಕೆ ಎಡೆಮಾಡಿದೆ.</p>.<p>ಮತಪೆಟ್ಟಿಗೆಗಳಿಗೆ ಭದ್ರತೆ</p>.<p>ಬೆಂಗಳೂರು, ಸೆ. 23– ರಾಜ್ಯದ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಎರಡು ಹಂತಗಳಲ್ಲಿ ನಡೆದ ಮತದಾನದ ನಂತರ ವಿವಿಧ ಪಕ್ಷಗಳ ಉಮೇದುವಾರರ ‘ರಾಜಕೀಯ ಭವಿಷ್ಯ’ ನಿರ್ಧರಿಸುವ ಮತಪೆಟ್ಟಿಗೆಗಳನ್ನು ಈಗ ಪೊಲೀಸ್ ಸರ್ಪಗಾವಲಿನಲ್ಲಿ ‘ಸುಭದ್ರ’ವಾಗಿ ಇಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಸಿ ಗಾಳಿಯಿಂದ ಒಣ ಹವೆ, ಬೆಳೆ ನಾಶ</strong></p>.<p>ಬೆಂಗಳೂರು, ಸೆ. 23– ರಾಜ್ಯದಾದ್ಯಂತ ಕಳೆದ 15–20 ದಿನಗಳಿಂದ ಹೆಚ್ಚಿರುವ ಬಿಸಿಲಿನ ತಾಪಕ್ಕೆ ವಾಯವ್ಯ ದಿಕ್ಕಿನಿಂದ ಬೀಸುತ್ತಿರುವ ‘ಒಣ ಗಾಳಿ’ಯೇ ಕಾರಣ ಎಂಬ ಅಂಶ ಹವಾಮಾನ ತಜ್ಞರಿಂದ ತಿಳಿದುಬಂದಿದೆ.</p>.<p>ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ತೇವಾಂಶದ ಗಾಳಿ ಅರಬ್ಬಿ ಸಮುದ್ರದ ಕಡೆಯಿಂದ ರಾಜ್ಯದ ಕಡೆಗೆ ಬೀಸುತ್ತಿತ್ತು. ಇದರಿಂದ ಮಳೆ ಕೂಡ ಬರುತ್ತಿತ್ತು. ಆದರೆ, ಅಕ್ಟೋಬರ್ ಎರಡು ಅಥವಾ ಮೂರನೇ ವಾರದಿಂದ ಆರಂಭವಾಗಬೇಕಿದ್ದ ಈ ವಾಯವ್ಯ ಬಿಸಿ ಹವೆ ಸೆಪ್ಟೆಂಬರ್ ತಿಂಗಳಿಂದಲೇ ಆರಂಭವಾಗಿದೆ. ಹೀಗಾಗಿ ಕಳೆದ ಒಂದು ತಿಂಗಳಿಂದ ಸರಿಯಾಗಿ ಮಳೆಯಾಗಿಲ್ಲ. ಇದು ಆತಂಕಕ್ಕೆ ಎಡೆಮಾಡಿದೆ.</p>.<p>ಮತಪೆಟ್ಟಿಗೆಗಳಿಗೆ ಭದ್ರತೆ</p>.<p>ಬೆಂಗಳೂರು, ಸೆ. 23– ರಾಜ್ಯದ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಎರಡು ಹಂತಗಳಲ್ಲಿ ನಡೆದ ಮತದಾನದ ನಂತರ ವಿವಿಧ ಪಕ್ಷಗಳ ಉಮೇದುವಾರರ ‘ರಾಜಕೀಯ ಭವಿಷ್ಯ’ ನಿರ್ಧರಿಸುವ ಮತಪೆಟ್ಟಿಗೆಗಳನ್ನು ಈಗ ಪೊಲೀಸ್ ಸರ್ಪಗಾವಲಿನಲ್ಲಿ ‘ಸುಭದ್ರ’ವಾಗಿ ಇಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>